ಪ್ರಕರಣದ ಆರಂಭದಲ್ಲಿ ಸ್ಥಳೀಯ ವಿದ್ಯಾನಗರ ಠಾಣೆ ಪೊಲೀಸರು ಶೇ 60ರಷ್ಟು ತನಿಖೆ ಪೂರ್ಣಗೊಳಿಸಿದ್ದರು. ರಾಜ್ಯದಾದ್ಯಂತ ಒತ್ತಡಗಳು ಬಂದಾಗ, ಸರ್ಕಾರ ಅದನ್ನು ಸಿಐಡಿಗೆ ಹಸ್ತಾಂತರಿಸಿತ್ತು. ಸಿಐಡಿ ಪೊಲೀಸರು ಆರೋಪಿ ಫಯಾಜ್, ಅವನ ತಂದೆ–ತಾಯಿ, ಸ್ನೇಹಿತರು, ಪರಿಚಯಸ್ಥರು, ನೇಹಾ ತಂದೆ–ತಾಯಿ ಹಾಗೂ ಅನುಮಾನ ಬಂದ ಕೆಲವು ವ್ಯಕ್ತಿಗಳನ್ನು ಸಹ ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಿದ್ದಾರೆ.