ಹುಬ್ಬಳ್ಳಿ: ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ಫೆ. 23 ರಂದು ಸಭೆ ನಡೆಸಲು ಯಾರೂ ಅನುಮತಿ ಪಡೆದಿಲ್ಲ ಎಂದು ಮಠದ ಉನ್ನತ ಸಮಿತಿ ಸಂಚಾಲಕ ಮೋಹನ ಲಿಂಬಿಕಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠದ ಶ್ರೀಗಳು ಅಥವಾ ಮ್ಯಾನೇಜರ್ ಅವರಿಂದ ಯಾರೂ ಅನುಮತಿ ಪಡೆದಿಲ್ಲ. ಹಾಗಾಗಿ, ಅಂದು ಯಾವುದೇ ಸಭೆ ಅಲ್ಲಿ ನಡೆಯುವುದಿಲ್ಲ ಎಂದರು.
ಉತ್ತರಾಧಿಕಾರಿ ಆಯ್ಕೆಗೆ ಎರಡು ಪತ್ರಿಕೆಗಳಲ್ಲಿ ಆಯ್ಕೆ ಕುರಿತು ಪ್ರಕಟಣೆ ನೀಡಬೇಕು. ಜೊತೆಗೆಭಕ್ತರ ಸಭೆ ಕರೆದು ಸರ್ವಾನುಮತ ಅಥವಾ ಬಹುಮತದಿಂದ ಆಯ್ಕೆ ಮಾಡಬೇಕು. ದಿಂಗಾಲೇಶ್ವರರ ಆಯ್ಕೆಯಲ್ಲಿ ಇದ್ಯಾವುದೂ ಆಗಿಲ್ಲ ಎಂದು ಹೇಳಿದರು.
ಮಠದ ಶ್ರೀಗಳ ಮುಂದೆ ಈಗ ಉತ್ತರಾಧಿಕಾರಿ ಆಯ್ಕೆ ವಿಷಯವಿಲ್ಲ. ಅವರು ಸಮರ್ಥರಾಗಿದ್ದು, ಮಠವನ್ನು ಮುಂದುವರಿಸಲಿದ್ದಾರೆ. ಉತ್ತರಾಧಿಕಾರಿ ಚರ್ಚೆ ಅನಗತ್ಯಎಂದರು.