<p><strong>ಹುಬ್ಬಳ್ಳಿ</strong>: ರೈತರಿಗೆ ಬಿತ್ತನೆ ಮಾಡಲು, ಕುಂಟೆ ಹೊಡೆಯುವುದಕ್ಕೆ ಹಾಗೂ ಮುಖ್ಯವಾಗಿ ಕಳೆ ನಿಯಂತ್ರಣಕ್ಕೆ ನೆರವಾಗುವ ಉದ್ದೇಶದಿಂದ ಕಲಘಟಗಿಯಹಿರೋನಹಳ್ಳಿಯ ಸಚಿನ್ ಬಡಿಗೇರ ಅವರು ‘ಪವರ್ ವೀಡರ್’ ಎಂಬ ಯಂತ್ರವನ್ನು ಪರಿಚಯಿಸಿದ್ದು, ಈ ಯಂತ್ರ ರೈತರ ಮೆಚ್ಚುಗೆಗೆ ಪಾತ್ರವಾಗಿದೆ. </p>.<p>ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದ ‘ಕೃಷಿ ಯಂತ್ರಗಳ ಪ್ರದರ್ಶನ’ದಲ್ಲಿ ಪವರ್ ವೀಡರ್ ಯಂತ್ರ ರೈತರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಕೃಷಿ ಯಂತ್ರಗಳನ್ನು ವೀಕ್ಷಿಸಲು ಬಂದ ರೈತರು ಈ ಯಂತ್ರದ ಬಗ್ಗೆ ಸಚಿನ್ ಬಡಿಗೇರ ಅವರ ತಂಡದಿಂದ ಮಾಹಿತಿ ಪಡೆದುಕೊಂಡರು.</p>.<p>ಸಚಿನ್ ಅವರು ಐಟಿಐ (ಎಲೆಕ್ಟ್ರೀಷಿಯನ್) ಶಿಕ್ಷಣ ಪಡೆದಿದ್ದಾರೆ. ಬಸವ ಇಂಡಸ್ಟ್ರೀಸ್ ಸ್ಥಾಪನೆ ಮಾಡಿ ಕೃಷಿ ಯಂತ್ರಗಳ ಆವಿಷ್ಕಾರದಲ್ಲಿ ತೊಡಗಿಸಿಕೊಂಡಿದ್ದಾರೆ.</p>.<p><strong>ಕಳೆ ನಿಯಂತ್ರಣಕ್ಕೆ ಸಹಕಾರಿ: </strong>‘ಕೃಷಿಯಲ್ಲಿ ಕಳೆ ನಿಯಂತ್ರಣ ಮಾಡುವುದು ಸವಾಲಾಗಿದ್ದು, ಕೃಷಿ ಕಾರ್ಮಿಕರ ಸಮಸ್ಯೆಯೂ ಇರುವುದರಿಂದ ಈ ಯಂತ್ರ ಬಹುಉಪಯೋಗಿ ಆಗಿದೆ’ ಎನ್ನುತ್ತಾರೆ ಸಚಿನ್ ಬಡಿಗೇರ.</p>.<p>‘ರಾಸಾಯನಿಕಗಳನ್ನು ಬಳಸಿ ಕಳೆ ನಿರ್ಮೂಲನೆ ಮಾಡುವುದರಿಂದ ಭೂಮಿಯ ಫಲವತ್ತತೆಗೆ ಹಾನಿಯಾಗುತ್ತದೆ. ಹೀಗಾಗಿ, ಈ ಯಂತ್ರವನ್ನು ಪರಿಚಯಿಸಲಾಗಿದೆ. ಇದು ಪೆಟ್ರೋಲ್ ಚಾಲಿತವಾಗಿದ್ದು, ಕಳೆ ನಿಯಂತ್ರಣ ಹಾಗೂ ನೆಲ ಹಗುರು ಮಾಡಲು ಸಹಕಾರಿಯಾಗಿದೆ. ಯಂತ್ರವು ಮೂರು ಹರಗುವ ಕುಂಟೆಗಳನ್ನು ಹೊಂದಿದ್ದು, ಬೀಜ ಬಿತ್ತುವ ಹಾಗೂ ರಾಸಾಯನಿಕ ಸಿಂಪಡಣೆಗೆ ಸಹಕಾರಿ ಆಗುವ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ’ ಎಂದರು.</p>.<p>ಯಂತ್ರದಿಂದ ಐದಾರು ಎಕರೆ ಕಳೆ ನಿಯಂತ್ರಣ ಮಾಡಬಹುದಾಗಿದೆ. ಆರು ಎಕರೆ ವ್ಯಾಪ್ತಿಯಲ್ಲಿ ಯಂತ್ರವನ್ನು ಬಳಸಲು ಅಂದಾಜು 8ರಿಂದ 9 ಲೀಟರ್ ಪೆಟ್ರೋಲ್ ಬಳಕೆಯಾಗುತ್ತದೆ. ಪ್ರತಿ ಯಂತ್ರಕ್ಕೆ ₹26 ಸಾವಿರ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ: 87622 98594 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ರೈತರಿಗೆ ಬಿತ್ತನೆ ಮಾಡಲು, ಕುಂಟೆ ಹೊಡೆಯುವುದಕ್ಕೆ ಹಾಗೂ ಮುಖ್ಯವಾಗಿ ಕಳೆ ನಿಯಂತ್ರಣಕ್ಕೆ ನೆರವಾಗುವ ಉದ್ದೇಶದಿಂದ ಕಲಘಟಗಿಯಹಿರೋನಹಳ್ಳಿಯ ಸಚಿನ್ ಬಡಿಗೇರ ಅವರು ‘ಪವರ್ ವೀಡರ್’ ಎಂಬ ಯಂತ್ರವನ್ನು ಪರಿಚಯಿಸಿದ್ದು, ಈ ಯಂತ್ರ ರೈತರ ಮೆಚ್ಚುಗೆಗೆ ಪಾತ್ರವಾಗಿದೆ. </p>.<p>ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದ ‘ಕೃಷಿ ಯಂತ್ರಗಳ ಪ್ರದರ್ಶನ’ದಲ್ಲಿ ಪವರ್ ವೀಡರ್ ಯಂತ್ರ ರೈತರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಕೃಷಿ ಯಂತ್ರಗಳನ್ನು ವೀಕ್ಷಿಸಲು ಬಂದ ರೈತರು ಈ ಯಂತ್ರದ ಬಗ್ಗೆ ಸಚಿನ್ ಬಡಿಗೇರ ಅವರ ತಂಡದಿಂದ ಮಾಹಿತಿ ಪಡೆದುಕೊಂಡರು.</p>.<p>ಸಚಿನ್ ಅವರು ಐಟಿಐ (ಎಲೆಕ್ಟ್ರೀಷಿಯನ್) ಶಿಕ್ಷಣ ಪಡೆದಿದ್ದಾರೆ. ಬಸವ ಇಂಡಸ್ಟ್ರೀಸ್ ಸ್ಥಾಪನೆ ಮಾಡಿ ಕೃಷಿ ಯಂತ್ರಗಳ ಆವಿಷ್ಕಾರದಲ್ಲಿ ತೊಡಗಿಸಿಕೊಂಡಿದ್ದಾರೆ.</p>.<p><strong>ಕಳೆ ನಿಯಂತ್ರಣಕ್ಕೆ ಸಹಕಾರಿ: </strong>‘ಕೃಷಿಯಲ್ಲಿ ಕಳೆ ನಿಯಂತ್ರಣ ಮಾಡುವುದು ಸವಾಲಾಗಿದ್ದು, ಕೃಷಿ ಕಾರ್ಮಿಕರ ಸಮಸ್ಯೆಯೂ ಇರುವುದರಿಂದ ಈ ಯಂತ್ರ ಬಹುಉಪಯೋಗಿ ಆಗಿದೆ’ ಎನ್ನುತ್ತಾರೆ ಸಚಿನ್ ಬಡಿಗೇರ.</p>.<p>‘ರಾಸಾಯನಿಕಗಳನ್ನು ಬಳಸಿ ಕಳೆ ನಿರ್ಮೂಲನೆ ಮಾಡುವುದರಿಂದ ಭೂಮಿಯ ಫಲವತ್ತತೆಗೆ ಹಾನಿಯಾಗುತ್ತದೆ. ಹೀಗಾಗಿ, ಈ ಯಂತ್ರವನ್ನು ಪರಿಚಯಿಸಲಾಗಿದೆ. ಇದು ಪೆಟ್ರೋಲ್ ಚಾಲಿತವಾಗಿದ್ದು, ಕಳೆ ನಿಯಂತ್ರಣ ಹಾಗೂ ನೆಲ ಹಗುರು ಮಾಡಲು ಸಹಕಾರಿಯಾಗಿದೆ. ಯಂತ್ರವು ಮೂರು ಹರಗುವ ಕುಂಟೆಗಳನ್ನು ಹೊಂದಿದ್ದು, ಬೀಜ ಬಿತ್ತುವ ಹಾಗೂ ರಾಸಾಯನಿಕ ಸಿಂಪಡಣೆಗೆ ಸಹಕಾರಿ ಆಗುವ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ’ ಎಂದರು.</p>.<p>ಯಂತ್ರದಿಂದ ಐದಾರು ಎಕರೆ ಕಳೆ ನಿಯಂತ್ರಣ ಮಾಡಬಹುದಾಗಿದೆ. ಆರು ಎಕರೆ ವ್ಯಾಪ್ತಿಯಲ್ಲಿ ಯಂತ್ರವನ್ನು ಬಳಸಲು ಅಂದಾಜು 8ರಿಂದ 9 ಲೀಟರ್ ಪೆಟ್ರೋಲ್ ಬಳಕೆಯಾಗುತ್ತದೆ. ಪ್ರತಿ ಯಂತ್ರಕ್ಕೆ ₹26 ಸಾವಿರ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ: 87622 98594 ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>