‘ಹಿಂದೂರಾಷ್ಟ್ರ ಆಗುವುದು ತಡೆಯಲಾಗದು’
ಹುಬ್ಬಳ್ಳಿ: ‘2024ರಲ್ಲಿ ನರೇಂದ್ರ ಮೋದಿ ಅವರು ಪುನಃ ಪ್ರಧಾನಿಯಾದ ಬಳಿಕ ಭಾರತವು ಹಿಂದೂ ರಾಷ್ಟ್ರ ಆಗಲಿದೆ. ತಾಕತ್ತಿದ್ದರೆ ಕಾಂಗ್ರೆಸ್ ತಡೆಯಲಿ’ ಎಂದು ಶ್ರೀರಾಮ ಸೇನೆ ಸಂಘಟನೆಯ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸವಾಲು ಹಾಕಿದರು.
‘ಪಾಕಿಸ್ತಾನ ಮುಸ್ಲಿಮರ ದೇಶ ಆಗುವುದಾದರೆ ಭಾರತ ಹಿಂದೂ ರಾಷ್ಟ್ರ ಏಕೆ ಆಗಬಾರದು. ಇಲ್ಲಿ ಮುಸ್ಲಿಮರು, ಕ್ರೈಸ್ತರು ಸೇರಿ ಎಲ್ಲರೂ ವಾಸಿಸಬಹುದು. ನಾವು ಯಾರನ್ನೂ ಹೊರಹಾಕಲ್ಲ’ ಎಂದು ಹೇಳಿದರು.
‘ಶ್ರೀಕಾಂತ ಪೂಜಾರಿ ರೌಡಿಶೀಟರ್, ಅಪರಾಧಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ಸ್ಥಳೀಯ ಶಾಸಕ (ಪ್ರಸಾದ್ ಅಬ್ಬಯ್ಯ) ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಿಂದೂ ಕಾರ್ಯಕರ್ತರು, ರಾಮನ ಭಕ್ತರೇ ಮುಖ್ಯಮಂತ್ರಿ ಅವರ ಟಾರ್ಗೆಟ್’ ಎಂದು ಮುತಾಲಿಕ್ ಟೀಕಿಸಿದರು.