ಚನ್ನಮ್ಮ ವೃತ್ತಕ್ಕೆ ಬಂದ ಮುತಾಲಿಕ್ ಅವರು, ಆರೇಳು ಕಾರ್ಯಕರ್ತರೊಂದಿಗೆ ಮೈದಾನದತ್ತ ತೆರಳಲು ಮುಂದಾದರು. ಆಗ, ಪೊಲೀಸರು ಅವರನ್ನು ತಡೆದರು. ಕಾರ್ಯಕರ್ತರನ್ನು ವಶಕ್ಕೆ ಪಡೆದು, ಸ್ಥಳದಲ್ಲಿದ್ದ ಬಸ್ ಗೆ ಹತ್ತಿಸಿದರು. ಮುತಾಲಿಕ್ ಅವರನ್ನು ಕಾರು ಸಮೇತ ವಶಕ್ಕೆ ಪಡೆದು, ನಗರದ ಸಿಎಆರ್ ಮೈದಾನಕ್ಕೆ ಕರೆದೊಯ್ದರು.