<p><strong>ಹುಬ್ಬಳ್ಳಿ:</strong> ‘ಆದಿಬಣಜಿಗ ಸಮಾಜವನ್ನು ಪ್ರವರ್ಗ 2 ‘ಎ’ಗೆ ಸೇರ್ಪಡೆ ಮಾಡಬೇಕು’ ಎಂದು ಅಖಿಲ ಕರ್ನಾಟಕ ಆದಿಬಣಜಿಗ ಸಮಾಜ ಕಲ್ಯಾಣ ಸಮಿತಿ ಆಗ್ರಹಿಸಿದೆ.</p>.<p>ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಘಟನಾ ಕಾರ್ಯದರ್ಶಿ ಶರಣಬಸವ ಕಿವುಡನವರ, ‘ಎಚ್. ಕಾಂತರಾಜು ಹಾಗೂ ಜಯಪ್ರಕಾಶ ಹೆಗಡೆ ಅವರು ಸಲ್ಲಿಸಿದ ವರದಿಯಂತೆ ಸಮಾಜದ ಜನಸಂಖ್ಯೆ 1.31 ಲಕ್ಷ ಎಂದು ಅಂದಾಜಿಸಲಾಗಿದೆ. ಇದು ಸ್ವಾಗತಾರ್ಹ. ಸರ್ಕಾರ ಈ ವರದಿಯನ್ನು ಅಂಗೀಕರಿಸಬೇಕು’ ಎಂದು ಹೇಳಿದರು.</p>.<p>‘ಲಿಂಗಾಯತ ಉಪಜಾತಿಯಾದ ಆದಿಬಣಜಿಗ ಸಮಾಜವನ್ನು ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಗೆಜೆಟ್ನಲ್ಲಿ ಗುರುತಿಸಲಾಗಿತ್ತು. ಸ್ವಾತಂತ್ರ್ಯಾನಂತರದಲ್ಲಿ ಸಮಾಜವನ್ನು ಗುರುತಿಸಲಾಗಿಲ್ಲ. ಇದಕ್ಕಾಗಿ ನಿರಂತರ ಹೋರಾಟ ನಡೆದಿದ್ದು, ಗೆಜೆಟ್ನಲ್ಲಿ ಗುರುತಿಸುವ ಪ್ರಯತ್ನಗಳು ಕಾರಣಾಂತರದಿಂದ ವಿಫಲವಾದವು. ಹಾಗಾಗಿ, ಈವರೆಗೆ ನಾವು ಮತಬ್ಯಾಂಕ್ ಆಗಿ ಅಷ್ಟೇ ಬಳಕೆಯಾಗಿದ್ದೇವೆ’ ಎಂದರು.</p>.<p>‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ ಸಮಾಜದ ಮುಖಂಡರೂ ವಿವಿಧೆಡೆ ತೆರಳಿ, ಆದಿಬಣಜಿಗ ಸಮಾಜದವರಿಗೆ ಅರಿವು ಮೂಡಿಸಿದ್ದೆವು. ಇದರಿಂದ ಸಮೀಕ್ಷೆ ವರದಿಯಲ್ಲಿ ಸಮಾಜವನ್ನು ಗುರುತಿಸಲಾಗಿದೆ. ಸಮಾಜದವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಪ್ರತ್ಯೇಕ ಮೀಸಲಾತಿಗೆ ನಮ್ಮ ಸಮ್ಮತವಿದೆ’ ಎಂದು ತಿಳಿಸಿದರು.</p>.<p>ಸಮಿತಿ ಅಧ್ಯಕ್ಷ ಸದಾಶಿವ ಸಿ. ಕಾರಡಗಿ, ಮಲ್ಲಿಕಾರ್ಜುನ, ವೈ.ಬಿ. ಪಾಟೀಲ, ಕಾಡಸಿದ್ಧಪ್ಪ ಯಲ್ಲಪ್ಪ ಗೌರಿ, ಬಸವರಾಜ ಪೀರಣ್ಣವರ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ‘ಆದಿಬಣಜಿಗ ಸಮಾಜವನ್ನು ಪ್ರವರ್ಗ 2 ‘ಎ’ಗೆ ಸೇರ್ಪಡೆ ಮಾಡಬೇಕು’ ಎಂದು ಅಖಿಲ ಕರ್ನಾಟಕ ಆದಿಬಣಜಿಗ ಸಮಾಜ ಕಲ್ಯಾಣ ಸಮಿತಿ ಆಗ್ರಹಿಸಿದೆ.</p>.<p>ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಘಟನಾ ಕಾರ್ಯದರ್ಶಿ ಶರಣಬಸವ ಕಿವುಡನವರ, ‘ಎಚ್. ಕಾಂತರಾಜು ಹಾಗೂ ಜಯಪ್ರಕಾಶ ಹೆಗಡೆ ಅವರು ಸಲ್ಲಿಸಿದ ವರದಿಯಂತೆ ಸಮಾಜದ ಜನಸಂಖ್ಯೆ 1.31 ಲಕ್ಷ ಎಂದು ಅಂದಾಜಿಸಲಾಗಿದೆ. ಇದು ಸ್ವಾಗತಾರ್ಹ. ಸರ್ಕಾರ ಈ ವರದಿಯನ್ನು ಅಂಗೀಕರಿಸಬೇಕು’ ಎಂದು ಹೇಳಿದರು.</p>.<p>‘ಲಿಂಗಾಯತ ಉಪಜಾತಿಯಾದ ಆದಿಬಣಜಿಗ ಸಮಾಜವನ್ನು ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಗೆಜೆಟ್ನಲ್ಲಿ ಗುರುತಿಸಲಾಗಿತ್ತು. ಸ್ವಾತಂತ್ರ್ಯಾನಂತರದಲ್ಲಿ ಸಮಾಜವನ್ನು ಗುರುತಿಸಲಾಗಿಲ್ಲ. ಇದಕ್ಕಾಗಿ ನಿರಂತರ ಹೋರಾಟ ನಡೆದಿದ್ದು, ಗೆಜೆಟ್ನಲ್ಲಿ ಗುರುತಿಸುವ ಪ್ರಯತ್ನಗಳು ಕಾರಣಾಂತರದಿಂದ ವಿಫಲವಾದವು. ಹಾಗಾಗಿ, ಈವರೆಗೆ ನಾವು ಮತಬ್ಯಾಂಕ್ ಆಗಿ ಅಷ್ಟೇ ಬಳಕೆಯಾಗಿದ್ದೇವೆ’ ಎಂದರು.</p>.<p>‘ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ ಸಮಾಜದ ಮುಖಂಡರೂ ವಿವಿಧೆಡೆ ತೆರಳಿ, ಆದಿಬಣಜಿಗ ಸಮಾಜದವರಿಗೆ ಅರಿವು ಮೂಡಿಸಿದ್ದೆವು. ಇದರಿಂದ ಸಮೀಕ್ಷೆ ವರದಿಯಲ್ಲಿ ಸಮಾಜವನ್ನು ಗುರುತಿಸಲಾಗಿದೆ. ಸಮಾಜದವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಪ್ರತ್ಯೇಕ ಮೀಸಲಾತಿಗೆ ನಮ್ಮ ಸಮ್ಮತವಿದೆ’ ಎಂದು ತಿಳಿಸಿದರು.</p>.<p>ಸಮಿತಿ ಅಧ್ಯಕ್ಷ ಸದಾಶಿವ ಸಿ. ಕಾರಡಗಿ, ಮಲ್ಲಿಕಾರ್ಜುನ, ವೈ.ಬಿ. ಪಾಟೀಲ, ಕಾಡಸಿದ್ಧಪ್ಪ ಯಲ್ಲಪ್ಪ ಗೌರಿ, ಬಸವರಾಜ ಪೀರಣ್ಣವರ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>