<p><strong>ಹುಬ್ಬಳ್ಳಿ: </strong>ಸದ್ಗುರು ಸಿದ್ದಾರೂಢರ ಜಾತ್ರಾ ಮಹೋತ್ಸವ ಅಂಗವಾಗಿ ಫೆ.22 ರಂದು ಸಂಜೆ 5.30ಕ್ಕೆ ರಥೋತ್ಸವ ಹಮ್ಮಿಕೊಳ್ಳಲಾಗಿದೆ.</p>.<p>ಫೆ.21 ರಂದು ಸಿದ್ದಾರೂಢರ ಪಲ್ಲಕ್ಕಿಯು ವಾದ್ಯ ಮೇಳಗಳೊಂದಿಗೆ ಸಂಚರಿಸಿ ರಾತ್ರಿ ಶ್ರೀಮಠಕ್ಕೆ ಬರಲಿದೆ. ಆಹೋರಾತ್ರಿ ಜಾಗರಣೆ ನಡೆಯಲಿದೆ. ಫೆ.22 ರಂದು ಪಲ್ಲಕ್ಕಿ ಊರೊಳಗೆ ಹೋಗಿ ಬಂದ ನಂತರ ರಥೋತ್ಸವ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಮಿಟಿಯ ಧರ್ಮದರ್ಶಿ ಎಸ್.ಆರ್. ಕೋಳಕೊರ ತಿಳಿಸಿದರು.</p>.<p>ಫೆ.16 ರಂದು ಸಂಜೆ 4ಕ್ಕೆ ಮಠದ ಹತ್ತಿಮತ್ತೂರ ದಾಸೋಹ ಭವನದಲ್ಲಿ ಆಜೀವ ಸದಸ್ಯರ, ಆಜೀವ ಆಶ್ರಯದಾತರ, ಆಜೀವ ಪೋಷಕರ ಸಭೆ ಕರೆಯಲಾಗಿದೆ. ಫೆ.16 ರಿಂದ ಮಧ್ಯಾಹ್ನ 21ರವರೆಗೆ ರಾತ್ರಿ 8ಕ್ಕೆ ರಾಜ್ಯ ಹಾಗೂ ಹೊರರಾಜ್ಯದ ಸಂಗೀತಗಾರರಿಂದ ಸಂಗೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.</p>.<p>ನಿತ್ಯ ದಾಸೋಹಕ್ಕಾಗಿ ಎಪಿಎಂಸಿ ವರ್ತಕರು ಕಾಯಿಪಲ್ಲೆಯನ್ನು ದೇಣಿಗೆಯಾಗಿ ನೀಡುತ್ತಿದ್ದಾರೆ. ಭಕ್ತ ಸಮೂಹ ಅಪಾರ ಪ್ರಮಾಣದಲ್ಲಿ ಆಹಾರಧಾನ್ಯ ಮುಂತಾದ ವಸ್ತುಗಳನ್ನು ನೀಡುತ್ತಿದ್ದಾರೆ. ಬೆಳಿಗ್ಗೆ ಉಪಾಹಾರ ಹಾಗೂ ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.</p>.<p>ಭಕ್ತರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ದೊಡ್ಡ ಉಗ್ರಾಣದ ಪಕ್ಕದಲ್ಲಿ ಮತ್ತೊಂದು ಉಗ್ರಾಣ ನಿರ್ಮಿಸಲಾಗಿದೆ. ಶ್ರೀಮಠದ ಕೆರೆಯನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ. 36 ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದರು.</p>.<p>ದಾಸಪ್ಪ, ಖೋಡೆ ಚೌಲ್ಟ್ರಿಗಳಲ್ಲಿದ್ದ 22 ಕೊಠಡಿಗಳ ನವೀಕರಿಸಲಾಗಿದೆ. ಗೋವರ್ಧನ ಕೇಂದ್ರ ಆರಂಭವಾಗಿದ್ದು, ನಿತ್ಯ ಸಿದ್ಧಾರೂಢರ ಅಭಿಷೇಕಕ್ಕೆ ಅಲ್ಲಿನ ಹಸುಗಳ ಹಾಲನ್ನೇ ಬಳಸಲಾಗುತ್ತಿದೆ ಎಂದು ಹೇಳಿದರು.</p>.<p>ಭಕ್ತರ ಲಗೇಜ್ ಇಟ್ಟುಕೊಳ್ಳಲಿಕ್ಕೆ ಲಾಕರ್ ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ. ಮತ್ತೊಂದು ಪ್ರಸಾದ ನಿಲಯ ನಿರ್ಮಿಸಲಾಗುತ್ತಿದೆ. ಪ್ರಸಾದವನ್ನು ಸೌರಶಕ್ತಿಯಿಂದ ಸಿದ್ಧಪಡಿಸಲಾಗುತ್ತಿದೆ. 16 ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.</p>.<p>ಸಮುದಾಯ ಭವನ, ಗ್ರಂಥಾಲಯ ನಿರ್ಮಾಣ, ಗುರುಕುಲ ಸ್ಥಾಪನೆ, ಸೋಲಾರ ಮೂಲಕ ವಿದ್ಯುತ್ ಉತ್ಪಾದನೆ ಪ್ಲಾಂಟ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.</p>.<p>ಟ್ರಸ್ಟ್ ಕಮಿಟಿ ಅಧ್ಯಕ್ಷ ಡಿ.ಡಿ. ಮಾಳಗಿ, ಗೋವಿಂದ ಮಣ್ಣೂರ, ಗಣಪತಿ ನಾಯಕ, ಜಗದೀಶ ಮಗಜಿಕೊಂಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಸದ್ಗುರು ಸಿದ್ದಾರೂಢರ ಜಾತ್ರಾ ಮಹೋತ್ಸವ ಅಂಗವಾಗಿ ಫೆ.22 ರಂದು ಸಂಜೆ 5.30ಕ್ಕೆ ರಥೋತ್ಸವ ಹಮ್ಮಿಕೊಳ್ಳಲಾಗಿದೆ.</p>.<p>ಫೆ.21 ರಂದು ಸಿದ್ದಾರೂಢರ ಪಲ್ಲಕ್ಕಿಯು ವಾದ್ಯ ಮೇಳಗಳೊಂದಿಗೆ ಸಂಚರಿಸಿ ರಾತ್ರಿ ಶ್ರೀಮಠಕ್ಕೆ ಬರಲಿದೆ. ಆಹೋರಾತ್ರಿ ಜಾಗರಣೆ ನಡೆಯಲಿದೆ. ಫೆ.22 ರಂದು ಪಲ್ಲಕ್ಕಿ ಊರೊಳಗೆ ಹೋಗಿ ಬಂದ ನಂತರ ರಥೋತ್ಸವ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಕಮಿಟಿಯ ಧರ್ಮದರ್ಶಿ ಎಸ್.ಆರ್. ಕೋಳಕೊರ ತಿಳಿಸಿದರು.</p>.<p>ಫೆ.16 ರಂದು ಸಂಜೆ 4ಕ್ಕೆ ಮಠದ ಹತ್ತಿಮತ್ತೂರ ದಾಸೋಹ ಭವನದಲ್ಲಿ ಆಜೀವ ಸದಸ್ಯರ, ಆಜೀವ ಆಶ್ರಯದಾತರ, ಆಜೀವ ಪೋಷಕರ ಸಭೆ ಕರೆಯಲಾಗಿದೆ. ಫೆ.16 ರಿಂದ ಮಧ್ಯಾಹ್ನ 21ರವರೆಗೆ ರಾತ್ರಿ 8ಕ್ಕೆ ರಾಜ್ಯ ಹಾಗೂ ಹೊರರಾಜ್ಯದ ಸಂಗೀತಗಾರರಿಂದ ಸಂಗೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.</p>.<p>ನಿತ್ಯ ದಾಸೋಹಕ್ಕಾಗಿ ಎಪಿಎಂಸಿ ವರ್ತಕರು ಕಾಯಿಪಲ್ಲೆಯನ್ನು ದೇಣಿಗೆಯಾಗಿ ನೀಡುತ್ತಿದ್ದಾರೆ. ಭಕ್ತ ಸಮೂಹ ಅಪಾರ ಪ್ರಮಾಣದಲ್ಲಿ ಆಹಾರಧಾನ್ಯ ಮುಂತಾದ ವಸ್ತುಗಳನ್ನು ನೀಡುತ್ತಿದ್ದಾರೆ. ಬೆಳಿಗ್ಗೆ ಉಪಾಹಾರ ಹಾಗೂ ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.</p>.<p>ಭಕ್ತರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ದೊಡ್ಡ ಉಗ್ರಾಣದ ಪಕ್ಕದಲ್ಲಿ ಮತ್ತೊಂದು ಉಗ್ರಾಣ ನಿರ್ಮಿಸಲಾಗಿದೆ. ಶ್ರೀಮಠದ ಕೆರೆಯನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ. 36 ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದರು.</p>.<p>ದಾಸಪ್ಪ, ಖೋಡೆ ಚೌಲ್ಟ್ರಿಗಳಲ್ಲಿದ್ದ 22 ಕೊಠಡಿಗಳ ನವೀಕರಿಸಲಾಗಿದೆ. ಗೋವರ್ಧನ ಕೇಂದ್ರ ಆರಂಭವಾಗಿದ್ದು, ನಿತ್ಯ ಸಿದ್ಧಾರೂಢರ ಅಭಿಷೇಕಕ್ಕೆ ಅಲ್ಲಿನ ಹಸುಗಳ ಹಾಲನ್ನೇ ಬಳಸಲಾಗುತ್ತಿದೆ ಎಂದು ಹೇಳಿದರು.</p>.<p>ಭಕ್ತರ ಲಗೇಜ್ ಇಟ್ಟುಕೊಳ್ಳಲಿಕ್ಕೆ ಲಾಕರ್ ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ. ಮತ್ತೊಂದು ಪ್ರಸಾದ ನಿಲಯ ನಿರ್ಮಿಸಲಾಗುತ್ತಿದೆ. ಪ್ರಸಾದವನ್ನು ಸೌರಶಕ್ತಿಯಿಂದ ಸಿದ್ಧಪಡಿಸಲಾಗುತ್ತಿದೆ. 16 ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.</p>.<p>ಸಮುದಾಯ ಭವನ, ಗ್ರಂಥಾಲಯ ನಿರ್ಮಾಣ, ಗುರುಕುಲ ಸ್ಥಾಪನೆ, ಸೋಲಾರ ಮೂಲಕ ವಿದ್ಯುತ್ ಉತ್ಪಾದನೆ ಪ್ಲಾಂಟ್ ಅಳವಡಿಕೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.</p>.<p>ಟ್ರಸ್ಟ್ ಕಮಿಟಿ ಅಧ್ಯಕ್ಷ ಡಿ.ಡಿ. ಮಾಳಗಿ, ಗೋವಿಂದ ಮಣ್ಣೂರ, ಗಣಪತಿ ನಾಯಕ, ಜಗದೀಶ ಮಗಜಿಕೊಂಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>