<p>ಧಾರವಾಡ: ಸಂಸ್ಕೃತವು ದೇಶದ ಅಪಾರವಾದ ಪಾರಂಪರಿಕ ಜ್ಞಾನ ಸಂಪತ್ತನ್ನು ಹೊಂದಿದ ಭಾಷೆ. ಅದನ್ನು ಪ್ರತಿಯೊಬ್ಬರ ಮನೆ ಬಾಗಿಲಿಗೆ ಕೊಂಡೊಯ್ಯುವಲ್ಲಿ ಸಂಸ್ಕೃತ ತಜ್ಞರು ಹೆಚ್ಚು ಶ್ರಮಿಸಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಹೇಳಿದರು.</p>.<p>ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರ್.ಸಿ. ಹಿರೇಮಠ ಅಧ್ಯಯನ ಪೀಠದ ಡಾ.ಚಂದ್ರಶೇಖರ ಕಂಬಾರ ಸಭಾಭವನದಲ್ಲಿ ಸಂಸ್ಕೃತ ಅಧ್ಯಯನ ವಿಭಾಗ, ಸಂಸ್ಕೃತ ಭಾರತಿ ಮತ್ತು ಮಜೇಥಿಯಾ ಫೌಂಡೇಶನ್ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ದಶದಿನಾತ್ಮಕ ಸಂಸ್ಕೃತ ಸಂಭಾಷಣ ಶಿಬಿರದ ಸಮಾರೋಪ ಉದ್ಘಾಟಿಸಿ ಮಾತನಾಡಿದರು.</p>.<p>ಆಯುರ್ವೇದ, ಜ್ಯೋತಿರ್ವಿಜ್ಞಾನ, ವಾಸ್ತುಶಿಲ್ಪ, ರಸತಂತ್ರ, ವೇದಗಣಿತ ಮುಂತಾದ ಹಲವು ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಿದ್ದು, ಅದಕ್ಕೆಲ್ಲ ಸಂಸ್ಕೃತದ ಗಟ್ಟಿಯಾದ ಜ್ಞಾನವು ಅತ್ಯವಶ್ಯಕವಾಗಿದೆ. ಸಂಸ್ಕೃತ ಬಲ್ಲವರು ಅದರ ಮಹತ್ವ ಎಲ್ಲರಿಗೂ ಮನದಟ್ಟು ಮಾಡಬೇಕು. ಅಂದಾಗ ಆ ಭಾಷೆಯ ಸಂರಕ್ಷಣೆ, ಸಂವರ್ಧನೆ ಆಗುತ್ತದೆ ಎಂದರು.</p>.<p>ಕವಿವಿ ಮೌಲ್ಯಮಾಪನ ಕುಲಸಚಿವ ಪ್ರೊ.ಸಿ.ಕೃಷ್ಣಮೂರ್ತಿ ಮಾತನಾಡಿ, ಸಂಸ್ಕೃತ ಭಾಷೆಯು ಭಾರತೀಯ ಸಂಸ್ಕೃತಿಯ ಆಧಾರ ಸ್ತಂಭಗಳಲ್ಲಿ ಒಂದು. ಇದು ದೇಶದ ಸಾಂಸ್ಕೃತಿಕ ಪ್ರತಿನಿಧಿಯಂತಿದೆ. ಸಂಸ್ಕೃತವೆಂಬ ಸಾಗರದಲ್ಲಿ ಅಡಗಿರುವ ಇನ್ನೂ ಅನೇಕ ರತ್ನಗಳನ್ನು ಹೊರತೆಗೆಯಬೇಕಿದೆ ಎಂದರು.</p>.<p>ನಂತರ ಶಿಬಿರಾರ್ಥಿಗಳು ಹತ್ತು ದಿನಗಳಲ್ಲಿ ಕಲಿತ ಸರಳ ಸಂಸ್ಕೃತ ಸಂಭಾಷಣೆಯನ್ನು ವಸ್ತು ಪ್ರದರ್ಶನ, ಲಘುರೂಪಕಗಳ ಮೂಲಕ ಪ್ರಸ್ತುತಪಡಿಸಿದರು.</p>.<p>2023ರ ವಿಶ್ವಪ್ರತಿಭಾ ಅಂತಾರಾಷ್ಟ್ರೀಯ ಸಮ್ಮಾನಕ್ಕೆ ಭಾಜನರಾದ ಕವಿವಿ ಸಂಸ್ಕೃತ ವಿಭಾಗದ ಸಂಯೋಜಕಿ ಡಾ. ಪದ್ಮಾವತಿ ಸಿಂಗಾರಿ ಅವರನ್ನು ಸನ್ಮಾನಿಸಲಾಯತು.</p>.<p>ರೂಪಶ್ರೀ ನಾಯ್ಕ, ಡಾ. ಜಿ. ಆರ್. ಅಂಬಲಿ, ಡಾ. ಚಂದ್ರಮೌಳಿ ಎಸ್. ನಾಯ್ಕರ, ಡಾ. ರಾಜೇಂದ್ರ ಎಂ. ನಾಯಕ, ಲಕ್ಷ್ಮೀ ನಾರಾಯಣ, ಡಾ.ಕೇಯೂರ ಕರಗುದರಿ, ಪ್ರತೀಕ ಹೆಗಡೆ, ಡಾ. ಪ್ರಮೋದ ಎಂ. ಚಂದಿ, ಡಾ. ಚಿದಂಬರ ಟಕ್ಕಳಕಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ: ಸಂಸ್ಕೃತವು ದೇಶದ ಅಪಾರವಾದ ಪಾರಂಪರಿಕ ಜ್ಞಾನ ಸಂಪತ್ತನ್ನು ಹೊಂದಿದ ಭಾಷೆ. ಅದನ್ನು ಪ್ರತಿಯೊಬ್ಬರ ಮನೆ ಬಾಗಿಲಿಗೆ ಕೊಂಡೊಯ್ಯುವಲ್ಲಿ ಸಂಸ್ಕೃತ ತಜ್ಞರು ಹೆಚ್ಚು ಶ್ರಮಿಸಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಬಿ. ಗುಡಸಿ ಹೇಳಿದರು.</p>.<p>ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರ್.ಸಿ. ಹಿರೇಮಠ ಅಧ್ಯಯನ ಪೀಠದ ಡಾ.ಚಂದ್ರಶೇಖರ ಕಂಬಾರ ಸಭಾಭವನದಲ್ಲಿ ಸಂಸ್ಕೃತ ಅಧ್ಯಯನ ವಿಭಾಗ, ಸಂಸ್ಕೃತ ಭಾರತಿ ಮತ್ತು ಮಜೇಥಿಯಾ ಫೌಂಡೇಶನ್ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ದಶದಿನಾತ್ಮಕ ಸಂಸ್ಕೃತ ಸಂಭಾಷಣ ಶಿಬಿರದ ಸಮಾರೋಪ ಉದ್ಘಾಟಿಸಿ ಮಾತನಾಡಿದರು.</p>.<p>ಆಯುರ್ವೇದ, ಜ್ಯೋತಿರ್ವಿಜ್ಞಾನ, ವಾಸ್ತುಶಿಲ್ಪ, ರಸತಂತ್ರ, ವೇದಗಣಿತ ಮುಂತಾದ ಹಲವು ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಆಗಬೇಕಿದ್ದು, ಅದಕ್ಕೆಲ್ಲ ಸಂಸ್ಕೃತದ ಗಟ್ಟಿಯಾದ ಜ್ಞಾನವು ಅತ್ಯವಶ್ಯಕವಾಗಿದೆ. ಸಂಸ್ಕೃತ ಬಲ್ಲವರು ಅದರ ಮಹತ್ವ ಎಲ್ಲರಿಗೂ ಮನದಟ್ಟು ಮಾಡಬೇಕು. ಅಂದಾಗ ಆ ಭಾಷೆಯ ಸಂರಕ್ಷಣೆ, ಸಂವರ್ಧನೆ ಆಗುತ್ತದೆ ಎಂದರು.</p>.<p>ಕವಿವಿ ಮೌಲ್ಯಮಾಪನ ಕುಲಸಚಿವ ಪ್ರೊ.ಸಿ.ಕೃಷ್ಣಮೂರ್ತಿ ಮಾತನಾಡಿ, ಸಂಸ್ಕೃತ ಭಾಷೆಯು ಭಾರತೀಯ ಸಂಸ್ಕೃತಿಯ ಆಧಾರ ಸ್ತಂಭಗಳಲ್ಲಿ ಒಂದು. ಇದು ದೇಶದ ಸಾಂಸ್ಕೃತಿಕ ಪ್ರತಿನಿಧಿಯಂತಿದೆ. ಸಂಸ್ಕೃತವೆಂಬ ಸಾಗರದಲ್ಲಿ ಅಡಗಿರುವ ಇನ್ನೂ ಅನೇಕ ರತ್ನಗಳನ್ನು ಹೊರತೆಗೆಯಬೇಕಿದೆ ಎಂದರು.</p>.<p>ನಂತರ ಶಿಬಿರಾರ್ಥಿಗಳು ಹತ್ತು ದಿನಗಳಲ್ಲಿ ಕಲಿತ ಸರಳ ಸಂಸ್ಕೃತ ಸಂಭಾಷಣೆಯನ್ನು ವಸ್ತು ಪ್ರದರ್ಶನ, ಲಘುರೂಪಕಗಳ ಮೂಲಕ ಪ್ರಸ್ತುತಪಡಿಸಿದರು.</p>.<p>2023ರ ವಿಶ್ವಪ್ರತಿಭಾ ಅಂತಾರಾಷ್ಟ್ರೀಯ ಸಮ್ಮಾನಕ್ಕೆ ಭಾಜನರಾದ ಕವಿವಿ ಸಂಸ್ಕೃತ ವಿಭಾಗದ ಸಂಯೋಜಕಿ ಡಾ. ಪದ್ಮಾವತಿ ಸಿಂಗಾರಿ ಅವರನ್ನು ಸನ್ಮಾನಿಸಲಾಯತು.</p>.<p>ರೂಪಶ್ರೀ ನಾಯ್ಕ, ಡಾ. ಜಿ. ಆರ್. ಅಂಬಲಿ, ಡಾ. ಚಂದ್ರಮೌಳಿ ಎಸ್. ನಾಯ್ಕರ, ಡಾ. ರಾಜೇಂದ್ರ ಎಂ. ನಾಯಕ, ಲಕ್ಷ್ಮೀ ನಾರಾಯಣ, ಡಾ.ಕೇಯೂರ ಕರಗುದರಿ, ಪ್ರತೀಕ ಹೆಗಡೆ, ಡಾ. ಪ್ರಮೋದ ಎಂ. ಚಂದಿ, ಡಾ. ಚಿದಂಬರ ಟಕ್ಕಳಕಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>