<p><strong>ನವಲಗುಂದ:</strong> ಪಟ್ಟಣದ ಬಸ್ ನಿಲ್ದಾಣ ಸಮೀಪ ವಸತಿಗೃಹದಲ್ಲಿ ಬುಧವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವ ಪ್ರೇಮಿಗಳು ಸಂಬಂಧದಲ್ಲಿ ಅಣ್ಣ–ತಂಗಿಯಾಗಿದ್ದರು ಎನ್ನಲಾಗಿದೆ.</p>.<p>ಬೆಳವಟಗಿ ಗ್ರಾಮದ ಯುವಕ ಬಸವರಾಜ ತಳವಾರ(22) ಹಾಗೂ ಧಾರವಾಡ ತಾಲ್ಲೂಕಿನ ಗರಗ ಹತ್ತಿರದ ನಿರಲಕಟ್ಟಿ ಯುವತಿ ದೀಪಾ ನೀಲವ್ವ ಎತ್ತಿನಗುಡ್ಡ(19) ಪ್ರೇಮಿಗಳಿಬ್ಬರ ತಾಯಂದಿರು ಅಕ್ಕ–ತಂಗಿಯರಾಗಿದ್ದು, ರಕ್ತ ಸಂಬಂಧಿಗಳಾಗಿದ್ದಾರೆ.</p>.<p>ಯುವತಿ ಧಾರವಾಡದ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಯುವಕ ಏಳನೇ ತರಗತಿ ತೇರ್ಗಡೆ<br />ಯಾಗಿದ್ದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರು ಪ್ರೀತಿಸುವುದು ಕುಟುಂಬಸ್ಥರಿಗೆ ಗೊತ್ತಾದ ಬಳಿಕ ಅವರಿಗೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಇಬ್ಬರಿಗೂ ತಪ್ಪಿನ ಅರಿವಾಗಿ, ಮಾನಸಿಕವಾಗಿ ಕುಗ್ಗಿ ಮನೆ ಬಿಟ್ಟು ಬಂದಿದ್ದರು<br />ಎನ್ನಲಾಗಿದೆ.</p>.<p>ಕಾಲೇಜಿಗೆ ಹೋಗುತ್ತೇನೆ ಎಂದು ಹೇಳಿ ಹೋದ ಯುವತಿ ಮರಳಿ ಮನೆಗೆ ಬಂದಿರಲಿಲ್ಲ. ನಂತರ ಇಬ್ಬರೂ ನವಲಗುಂದ ಪಟ್ಟಣದ ವಸತಿ ಗೃಹದಲ್ಲಿ ಎರಡ್ಮೂರು ದಿನ ಇದ್ದು, ಡಿ.7ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವಲಗುಂದ:</strong> ಪಟ್ಟಣದ ಬಸ್ ನಿಲ್ದಾಣ ಸಮೀಪ ವಸತಿಗೃಹದಲ್ಲಿ ಬುಧವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವ ಪ್ರೇಮಿಗಳು ಸಂಬಂಧದಲ್ಲಿ ಅಣ್ಣ–ತಂಗಿಯಾಗಿದ್ದರು ಎನ್ನಲಾಗಿದೆ.</p>.<p>ಬೆಳವಟಗಿ ಗ್ರಾಮದ ಯುವಕ ಬಸವರಾಜ ತಳವಾರ(22) ಹಾಗೂ ಧಾರವಾಡ ತಾಲ್ಲೂಕಿನ ಗರಗ ಹತ್ತಿರದ ನಿರಲಕಟ್ಟಿ ಯುವತಿ ದೀಪಾ ನೀಲವ್ವ ಎತ್ತಿನಗುಡ್ಡ(19) ಪ್ರೇಮಿಗಳಿಬ್ಬರ ತಾಯಂದಿರು ಅಕ್ಕ–ತಂಗಿಯರಾಗಿದ್ದು, ರಕ್ತ ಸಂಬಂಧಿಗಳಾಗಿದ್ದಾರೆ.</p>.<p>ಯುವತಿ ಧಾರವಾಡದ ಸರ್ಕಾರಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಯುವಕ ಏಳನೇ ತರಗತಿ ತೇರ್ಗಡೆ<br />ಯಾಗಿದ್ದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರು ಪ್ರೀತಿಸುವುದು ಕುಟುಂಬಸ್ಥರಿಗೆ ಗೊತ್ತಾದ ಬಳಿಕ ಅವರಿಗೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಇಬ್ಬರಿಗೂ ತಪ್ಪಿನ ಅರಿವಾಗಿ, ಮಾನಸಿಕವಾಗಿ ಕುಗ್ಗಿ ಮನೆ ಬಿಟ್ಟು ಬಂದಿದ್ದರು<br />ಎನ್ನಲಾಗಿದೆ.</p>.<p>ಕಾಲೇಜಿಗೆ ಹೋಗುತ್ತೇನೆ ಎಂದು ಹೇಳಿ ಹೋದ ಯುವತಿ ಮರಳಿ ಮನೆಗೆ ಬಂದಿರಲಿಲ್ಲ. ನಂತರ ಇಬ್ಬರೂ ನವಲಗುಂದ ಪಟ್ಟಣದ ವಸತಿ ಗೃಹದಲ್ಲಿ ಎರಡ್ಮೂರು ದಿನ ಇದ್ದು, ಡಿ.7ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<p>ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>