‘ಗ್ರಾಮೀಣ ಭತ್ಯೆಯಾದರೂ ನೀಡಲಿ’
‘ನಗರದ ಶಿಕ್ಷಕರಿಗೆ ಒಟ್ಟಾರೆ ಭತ್ಯೆ ಮೂಲ ವೇತನದ ಶೇ 12ರಷ್ಟು ಮತ್ತು ಗ್ರಾಮೀಣ ಶಿಕ್ಷಕರಿಗೆ ಶೇ 8ರಷ್ಟು ಇದೆ. ಬಹುತೇಕ ಗ್ರಾಮೀಣ ಶಿಕ್ಷಕರು ನಗರದಲ್ಲಿ ವಾಸವಿದ್ದು, ಹೆಚ್ಚುವರಿ ಖರ್ಚನ್ನು ಅವರೇ ಭರಿಸಬೇಕು. ಭತ್ಯೆ ಹೆಚ್ಚಿರುವುದರಿಂದಲೇ ನಗರದ ಶಿಕ್ಷಕರು ಗ್ರಾಮಗಳಿಗೆ ಬರಲು ಬಯಸುವುದಿಲ್ಲ. 5ನೇ ವೇತನ ಆಯೋಗದಲ್ಲಿ ನೀಡುತ್ತಿದ್ದ ಗ್ರಾಮೀಣ ಭತ್ಯೆಯನ್ನು ಈಗ ಸ್ಥಗಿತಗೊಳಿಸಲಾಗಿದೆ. ನಗರದ ಶಿಕ್ಷಕರಂತೆ ಇಂತಿಷ್ಟು ಭತ್ಯೆ ನೀಡಿದರೆ, ಗ್ರಾಮೀಣ ಶಿಕ್ಷಕರಿಗೆ ಅನುಕೂಲ. ಆಗ ನಗರಕ್ಕೆ ವರ್ಗಾವಣೆ ಬೇಡಿಕೆಯೂ ಹೆಚ್ಚಿರುವುದಿಲ್ಲ’ ಎಂಬುದು ಗ್ರಾಮೀಣ ಶಿಕ್ಷಕರ ಅಭಿಪ್ರಾಯ.