<p>ಹುಬ್ಬಳ್ಳಿ: ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯ (ಯುಯುಸಿಎಂಎಸ್) ವೆಬ್ಸೈಟ್ನ ತಾಂತ್ರಿಕ ಸಮಸ್ಯೆಯಿಂದಾಗಿ 2022-23ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ದಾಖಲಾತಿ ವಿಳಂಬವಾಗುತ್ತಿದ್ದು, ದಾಖಲಾತಿಗೆ ಕೊನೆಯ ದಿನಾಂಕ ಆ.16 ಎಂದು ಸೂಚಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ ಸೆ.1 ರವರೆಗೆ ವಿಸ್ತರಿಸಿ ಸುತ್ತೋಲೆ ಹೊರಡಿಸಿದೆ.ದಿನಾಂಕ ಮುಂದೂಡಿಕೆಯಾಗಿದ್ದು ಇದು ಮೂರನೇ ಬಾರಿ.</p>.<p>‘ಹೆಚ್ಚಿನ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿ ಸಮಸ್ಯೆ ಎದುರಾಯಿತು. ಸಮಸ್ಯೆ ಮುಂದುವರಿದರೆ ನಿಗದಿತ ದಿನಾಂಕದೊಳಗೆ ದಾಖಲಾತಿ ಆಗುವುದಿಲ್ಲ ಎಂದು ದಿನಾಂಕ ವಿಸ್ತರಿಸಿದ್ದೇವೆ’ ಎಂದು<br />ಕವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೃಷ್ಣಮೂರ್ತಿ ಮಾಹಿತಿ ನೀಡಿದರು.</p>.<p>ಯುಯುಸಿಎಂಎಸ್ನಲ್ಲಿ ದಾಖಲಾತಿ ಅರ್ಜಿ ಭರ್ತಿ ಮಾಡುವಾಗ ಎಚ್ಚರ ಅಗತ್ಯ. ವಿಷಯಗಳ ಆಯ್ಕೆ, ಶುಲ್ಕ ಪಾವತಿ ಯುಯುಸಿಎಂಎಸ್ ಮೂಲಕ ಮಾಡಬೇಕು. ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ ಇರುವುದು ನಿಜ. ಕಳೆದ ವರ್ಷಕ್ಕಿಂತ ಈ ಬಾರಿ ದಾಖಲಾತಿ ಪ್ರಮಾಣ ತೀರಾ ಕಡಿಮೆ ಆಗಿದೆ ಎಂದು ಉಪನ್ಯಾಸಕರೊಬ್ಬರು ತಿಳಿಸಿದರು.</p>.<p>ಉತ್ತಮ ಸಾಫ್ಟ್ವೇರ್: ಆರಂಭಿಕ ಹಂತದಲ್ಲಿ ಸಮಸ್ಯೆ ಸಹಜ. ಒಂದು ಬಾರಿ ವ್ಯವಸ್ಥೆ ಸರಿಯಾದರೆ ಯುಯುಸಿಎಂಎಸ್ ಅತ್ಯುತ್ತಮ ಸಾಫ್ಟ್ವೇರ್ ಆಗಿ ಕೆಲಸ ಮಾಡುತ್ತದೆ. ವಿಶ್ವವಿದ್ಯಾಲಯಕ್ಕೆ, ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೂ ಬಳಕೆ ಆಗುತ್ತದೆ ಎನ್ನುತ್ತಾರೆ ಪ್ರೊ.ಸಿ.ಕೃಷ್ಣಮೂರ್ತಿ.</p>.<p>ನಡೆಯದ ಪ್ರಯೋಗ: ಇಲಾಖೆ ಸಾಫ್ಟ್ವೇರ್ ಪರಿಚಯಿಸಿದ್ದೇನೋ ನಿಜ. ಅದರ ಸಾಧಕ- ಬಾಧಕಗಳ ಕುರಿತು ಯಾವುದೇ ಪರಿಶೀಲನೆ ನಡೆಸದೆ ನೇರವಾಗಿ ಬಳಕೆಗೆ ಸೂಚಿಸಿದ್ದರಿಂದ ವಿಶ್ವವಿದ್ಯಾಲಯಗಳು, ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿದ್ದಾರೆ. ಒಂದು ವಿಶ್ವವಿದ್ಯಾಲಯಕ್ಕೆ ಮೊದಲು ಪ್ರಯೋಗ ಮಾಡಿ, ನಂತರ ಎಲ್ಲ ವಿವಿಗಳಿಗೆ ಸೂಚಿಸಬಹುದಿತ್ತು ಎಂಬುದು ಉಪನ್ಯಾಕರೊಬ್ಬರ ನುಡಿ.</p>.<p>ಇಲಾಖೆ ಕೈಯಲ್ಲಿ ಜುಟ್ಟು: ಯುಯುಸಿಎಂಎಸ್ ಅನ್ನು ಉನ್ನತ ಶಿಕ್ಷಣ ಇಲಾಖೆ ನೇರವಾಗಿ ನಿರ್ವಹಣೆ ಮಾಡುವುದರಿಂದ ಅದರಲ್ಲಿ ಉಂಟಾಗುವ ಸಮಸ್ಯೆಗಳ ಮುಂದೆ ವಿಶ್ವವಿದ್ಯಾಲಯಗಳು ಅಸಹಾಯಕ ಆಗುತ್ತವೆ. ‘ಯುಯುಸಿಎಂಎಸ್ ನ ಸಮಸ್ಯೆಗಳಿಗೆ ನಾವೇನೂ ಮಾಡಲು ಆಗುವುದಿಲ್ಲ. ಸಮಸ್ಯೆಗಳ ಮಾಹಿತಿಯನ್ನು ಪಟ್ಟಿ ಮಾಡಿ ಇಲಾಖೆಗೆ ಒದಗಿಸುತ್ತೇವೆ. ಇಲಾಖೆ ಅದನ್ನು ಸರಿಪಡಿಸುವ ಕೆಲಸ ಮಾಡುತ್ತದೆ. ಮುಂದಿನ ದಿನಗಳಲ್ಲಿ ನಿರ್ವಹಣೆಯ ಅವಕಾಶ ಆಯಾ ವಿವಿಗಳಿಗೆ ಸಿಗಬಹುದು’ ಎನ್ನುತ್ತಾರೆ ಕವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೃಷ್ಣಮೂರ್ತಿ.</p>.<p>ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ದಾಖಲಾತಿಗಾಗಿ ಸ್ಥಳೀಯ ಸೈಬರ್ಗಳ ಮೊರೆ ಹೋಗುತ್ತಿದ್ದು, ಸರ್ವರ್ ಸಮಸ್ಯೆಯಿಂದಾಗಿ ಹಲವು ಬಾರಿ ಅಲೆದಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಯ (ಯುಯುಸಿಎಂಎಸ್) ವೆಬ್ಸೈಟ್ನ ತಾಂತ್ರಿಕ ಸಮಸ್ಯೆಯಿಂದಾಗಿ 2022-23ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ದಾಖಲಾತಿ ವಿಳಂಬವಾಗುತ್ತಿದ್ದು, ದಾಖಲಾತಿಗೆ ಕೊನೆಯ ದಿನಾಂಕ ಆ.16 ಎಂದು ಸೂಚಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ ಸೆ.1 ರವರೆಗೆ ವಿಸ್ತರಿಸಿ ಸುತ್ತೋಲೆ ಹೊರಡಿಸಿದೆ.ದಿನಾಂಕ ಮುಂದೂಡಿಕೆಯಾಗಿದ್ದು ಇದು ಮೂರನೇ ಬಾರಿ.</p>.<p>‘ಹೆಚ್ಚಿನ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿ ಸಮಸ್ಯೆ ಎದುರಾಯಿತು. ಸಮಸ್ಯೆ ಮುಂದುವರಿದರೆ ನಿಗದಿತ ದಿನಾಂಕದೊಳಗೆ ದಾಖಲಾತಿ ಆಗುವುದಿಲ್ಲ ಎಂದು ದಿನಾಂಕ ವಿಸ್ತರಿಸಿದ್ದೇವೆ’ ಎಂದು<br />ಕವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೃಷ್ಣಮೂರ್ತಿ ಮಾಹಿತಿ ನೀಡಿದರು.</p>.<p>ಯುಯುಸಿಎಂಎಸ್ನಲ್ಲಿ ದಾಖಲಾತಿ ಅರ್ಜಿ ಭರ್ತಿ ಮಾಡುವಾಗ ಎಚ್ಚರ ಅಗತ್ಯ. ವಿಷಯಗಳ ಆಯ್ಕೆ, ಶುಲ್ಕ ಪಾವತಿ ಯುಯುಸಿಎಂಎಸ್ ಮೂಲಕ ಮಾಡಬೇಕು. ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ ಇರುವುದು ನಿಜ. ಕಳೆದ ವರ್ಷಕ್ಕಿಂತ ಈ ಬಾರಿ ದಾಖಲಾತಿ ಪ್ರಮಾಣ ತೀರಾ ಕಡಿಮೆ ಆಗಿದೆ ಎಂದು ಉಪನ್ಯಾಸಕರೊಬ್ಬರು ತಿಳಿಸಿದರು.</p>.<p>ಉತ್ತಮ ಸಾಫ್ಟ್ವೇರ್: ಆರಂಭಿಕ ಹಂತದಲ್ಲಿ ಸಮಸ್ಯೆ ಸಹಜ. ಒಂದು ಬಾರಿ ವ್ಯವಸ್ಥೆ ಸರಿಯಾದರೆ ಯುಯುಸಿಎಂಎಸ್ ಅತ್ಯುತ್ತಮ ಸಾಫ್ಟ್ವೇರ್ ಆಗಿ ಕೆಲಸ ಮಾಡುತ್ತದೆ. ವಿಶ್ವವಿದ್ಯಾಲಯಕ್ಕೆ, ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೂ ಬಳಕೆ ಆಗುತ್ತದೆ ಎನ್ನುತ್ತಾರೆ ಪ್ರೊ.ಸಿ.ಕೃಷ್ಣಮೂರ್ತಿ.</p>.<p>ನಡೆಯದ ಪ್ರಯೋಗ: ಇಲಾಖೆ ಸಾಫ್ಟ್ವೇರ್ ಪರಿಚಯಿಸಿದ್ದೇನೋ ನಿಜ. ಅದರ ಸಾಧಕ- ಬಾಧಕಗಳ ಕುರಿತು ಯಾವುದೇ ಪರಿಶೀಲನೆ ನಡೆಸದೆ ನೇರವಾಗಿ ಬಳಕೆಗೆ ಸೂಚಿಸಿದ್ದರಿಂದ ವಿಶ್ವವಿದ್ಯಾಲಯಗಳು, ವಿದ್ಯಾರ್ಥಿಗಳು ಸಮಸ್ಯೆಗೆ ಸಿಲುಕಿದ್ದಾರೆ. ಒಂದು ವಿಶ್ವವಿದ್ಯಾಲಯಕ್ಕೆ ಮೊದಲು ಪ್ರಯೋಗ ಮಾಡಿ, ನಂತರ ಎಲ್ಲ ವಿವಿಗಳಿಗೆ ಸೂಚಿಸಬಹುದಿತ್ತು ಎಂಬುದು ಉಪನ್ಯಾಕರೊಬ್ಬರ ನುಡಿ.</p>.<p>ಇಲಾಖೆ ಕೈಯಲ್ಲಿ ಜುಟ್ಟು: ಯುಯುಸಿಎಂಎಸ್ ಅನ್ನು ಉನ್ನತ ಶಿಕ್ಷಣ ಇಲಾಖೆ ನೇರವಾಗಿ ನಿರ್ವಹಣೆ ಮಾಡುವುದರಿಂದ ಅದರಲ್ಲಿ ಉಂಟಾಗುವ ಸಮಸ್ಯೆಗಳ ಮುಂದೆ ವಿಶ್ವವಿದ್ಯಾಲಯಗಳು ಅಸಹಾಯಕ ಆಗುತ್ತವೆ. ‘ಯುಯುಸಿಎಂಎಸ್ ನ ಸಮಸ್ಯೆಗಳಿಗೆ ನಾವೇನೂ ಮಾಡಲು ಆಗುವುದಿಲ್ಲ. ಸಮಸ್ಯೆಗಳ ಮಾಹಿತಿಯನ್ನು ಪಟ್ಟಿ ಮಾಡಿ ಇಲಾಖೆಗೆ ಒದಗಿಸುತ್ತೇವೆ. ಇಲಾಖೆ ಅದನ್ನು ಸರಿಪಡಿಸುವ ಕೆಲಸ ಮಾಡುತ್ತದೆ. ಮುಂದಿನ ದಿನಗಳಲ್ಲಿ ನಿರ್ವಹಣೆಯ ಅವಕಾಶ ಆಯಾ ವಿವಿಗಳಿಗೆ ಸಿಗಬಹುದು’ ಎನ್ನುತ್ತಾರೆ ಕವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೃಷ್ಣಮೂರ್ತಿ.</p>.<p>ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ದಾಖಲಾತಿಗಾಗಿ ಸ್ಥಳೀಯ ಸೈಬರ್ಗಳ ಮೊರೆ ಹೋಗುತ್ತಿದ್ದು, ಸರ್ವರ್ ಸಮಸ್ಯೆಯಿಂದಾಗಿ ಹಲವು ಬಾರಿ ಅಲೆದಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>