ಇಲ್ಲಿನ ಅರಳಿಕಟ್ಟಿ ಕಾಲೊನಿಯ ದಾವೂದ್ ಶೇಖ್ ಮತ್ತು ಹಮೀದ್ ಬೇಪಾರಿ, ಮಂಟೂರು ರಸ್ತೆ ಹರಿಶ್ಚಂದ್ರ ಕಾಲೊನಿಯ ಮಹಮ್ಮದ್ ಹುಸೇನ್ ಶೇಖ್ ಬಂಧಿತರು. ಧಾರವಾಡದ ವಿದ್ಯಾಗಿರಿ, ಎಪಿಎಂಸಿ ನವನಗರ, ಉಪನಗರ ಮತ್ತು ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಆರೋಪ ಇವರ ಮೇಲಿದೆ. ಬಂಧಿತರಿಂದ 35.5 ಗ್ರಾಂ ಚಿನ್ನಾಭರಣ, ಲ್ಯಾಪ್ಟಾಪ್, 100 ಗ್ರಾಂ ಬೆಳ್ಳಿ ಸರ, ₹7,500 ನಗದು ಮತ್ತು ಮೂರು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.