31 ವರ್ಷದ ಗೌರೇಶ ಸದ್ಯಕ್ಕೆ ಉಣಕಲ್ನ ಸಾಯಿನಗರದಲ್ಲಿ ವಾಸವಾಗಿದ್ದಾನೆ. ಮಡಿವಾಳಪ್ಪ ಹಳೇ ಹುಬ್ಬಳ್ಳಿ ನಿವಾಸಿ. ಒಟ್ಟು 100 ಗ್ರಾಂ ತೂಕದ ನಾಲ್ಕು ಚಿನ್ನದ ಸರಗಳು, ದ್ವಿಚಕ್ರ ವಾಹನ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಸಾಮಗ್ರಿ ಸೇರಿ ಒಟ್ಟು ₹ 4,15,500 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸರಗಳ್ಳತನದ ಬಗ್ಗೆ ವಿದ್ಯಾನಗರ, ಹಳೇಹುಬ್ಬಳ್ಳಿ ಮತ್ತು ಅಶೋಕ ನಗರ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು. ನಗರದಲ್ಲಿ ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ವಿಶೇಷ ತಂಡ ರಚಿಸಲಾಗಿತ್ತು.