<p><strong>ಧಾರವಾಡ</strong>: ನಗರದ ಎರಡನೇ ವಾರ್ಡ್ನಲ್ಲಿ ಹಲವೆಡೆ ಸಿ.ಸಿ ರಸ್ತೆ ನಿರ್ಮಿಸಲಾಗಿದೆ. ಅಂಗನವಾಡಿ ಕೇಂದ್ರಕ್ಕೆ (ಎತ್ತಿನಗುಡ್ಡ) ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಮುಗಿದಿದೆ. ಚರಂಡಿ, ನೀರು ಪೂರೈಕೆ, ಕಸ ವಿಲೇವಾರಿ ಮೊದಲಾದ ಸಮಸ್ಯೆಗಳು ಇವೆ.</p>.<p>ಎತ್ತಿನಗುಡ್ಡ, ಮೆಹಬೂಬ ನಗರ ಸಹಿತ ಹಲವೆಡೆ ಸಿ.ಸಿ ರಸ್ತೆಗಳಾಗಿದ್ದು, ಸಂಚಾರಕ್ಕೆ ಅನುಕೂಲವಾಗಿದೆ. ಇನ್ನು ಹಲವು ರಸ್ತೆಗಳ ಅಭಿವೃದ್ಧಿ ಆಗಬೇಕಿದೆ.</p>.<p>ಈ ವಾರ್ಡ್ನಲ್ಲಿ ಕಾರ್ಮಿಕರು ಹೆಚ್ಚು ಇದ್ದಾರೆ. ಕೃಷಿ ವಿಶ್ವವಿದ್ಯಾಲಯ, ಟಾಟಾ ಸಂಸ್ಥೆ ಸಹಿತ ಮೊದಲಾದ ಕಡೆಗಳಿಗೆ ಹಲವು ಕಾರ್ಮಿಕರು ಕೆಲಸ ಮಾಡುತ್ತಾರೆ.</p>.<p>‘ವಾರ್ಡ್ನಲ್ಲಿ ಪ್ರಮುಖವಾಗಿ ₹3 ಕೋಟಿ ವೆಚ್ಚದಲ್ಲಿ ಪಾಲಿಕೆಯಿಂದ ಮಾಳಾಪುರ– ಎತ್ತಿನಗುಡ್ಡ ಸಂಪರ್ಕ ರಸ್ತೆ ನಿರ್ಮಿಸಲಾಗಿದೆ. ₹1 ಕೋಟಿ ವೆಚ್ಚದಲ್ಲಿ ಖೂಬಾ ಮಸೀದಿ– ಎತ್ತಿನಗುಡ್ಡ ರಸ್ತೆ ನಿರ್ಮಿಸಲಾಗಿದೆ. ಹಲವು ಸಣ್ಣ ರಸ್ತೆಗಳನ್ನು ನಿರ್ಮಿಸಲಾಗಿದೆ’ ಎಂದು ವಾರ್ಡ್ ಸದಸ್ಯೆ ಸೂರವ್ವ ಬಾಳನಗೌಡ ಪಾಟೀಲ ತಿಳಿಸಿದರು.</p>.<p>‘ಎತ್ತಿನಗುಡ್ಡದಲ್ಲಿ ₹15 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ. ವಾರ್ಡ್ನಲ್ಲಿ ಎಲ್ಇಡಿ ಬಲ್ಬ್ ಅಳವಡಿಕೆಗೆ ₹20 ಲಕ್ಷ ಮಂಜೂರಾಗಿದೆ. ಕೆಲವೆಡೆ ಗಟಾರ ನಿರ್ಮಿಸಲಾಗಿದೆ. ಇನ್ನು ಬಹಳಷ್ಟು ಕಡೆ ಗಟಾರ ನಿರ್ಮಿಸಬೇಕಿದೆ. ಅನುದಾನಕ್ಕೆ ಮನವಿ ಸಲ್ಲಿಸಿದ್ದೆವು. ಹಿಂದಿನ ಆಯಕ್ತರು ಅನುಮೋದನೆ ನೀಡಿರಲಿಲ್ಲ’ ಎಂದು ಅವರು ತಿಳಿಸಿದರು.</p>.<p>ಈ ವಾರ್ಡ್ನಲ್ಲಿ ಎಂಟು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಎರಡು ಅಥವಾ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಬೇಕು ಎಂಬುದು ನಿವಾಸಿಗಳ ಒತ್ತಾಯ.</p>.<p>ಬಹಳಷ್ಟು ಕಡೆ ಚರಂಡಿ ಸಮಸ್ಯೆ ಇದೆ. ಹಲವೆಡೆ ಚರಂಡಿಗಳನ್ನು ನಿರ್ಮಾಣ ಮಾಡಬೇಕಿದೆ. ಕೆಲವೆಡೆ ಚರಂಡಿಗಳಲ್ಲಿ ಕಸ ತುಂಬಿಕೊಂಡಿದೆ. ರಭಸವಾಗಿ ಮಳೆ ಸುರಿದಾಗ ನೀರು ರಸ್ತೆಗೆ ಹೊರಳುತ್ತದೆ ಎಂದು ಹೇಳಿದರು.</p>.<p>‘ರಸ್ತೆ, ಬೀದಿದೀಪಗಳಿಗೆ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಬೇಕು. ಕೆಲವೆಡೆ ಬೀದಿದೀಪಗಳು ಹಾಳಾಗಿವೆ. ಅವುಗಳನ್ನು ಬದಲಾಯಿಸಬೇಕು. ಗಟಾರ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಬೇಕು’ ಎಂದು ನಿವಾಸಿ ಶ್ರೀನಿವಾಸ ಹುರಿಯನ್ನವರ ಒತ್ತಾಯಿಸುತ್ತಾರೆ.</p>.<p>ಕೆಲವೆಡೆ ಕಸ ರಾಶಿ ಬಿದ್ದಿದೆ. ಜಾನುವಾರುಗಳು, ಹಂದಿಗಳು ರಾಶಿ ಎಳೆದಾಡಿ ರಾಡಿ ಎಬ್ಬಿಸುತ್ತವೆ. ಕಸದ ರಾಶಿ ಸುತ್ತಲಿನ ನಿವಾಸಿಗಳು, ಪಾದಚಾರಿಗಳು ದುರ್ನಾತ ಸಹಿಸಿ ಓಡಾಡಬೇಕಾದ ಅನಿವಾರ್ಯ ಇದೆ.</p>.<p>ಕಾರ್ಮಿಕರ ಕೊರತೆಯಿಂದಾಗಿ ಕಸ ವಿಲೇವಾರಿ ಸಮಸ್ಯೆಯಾಗಿದೆ ಎಂದು ವಾರ್ಡ್ ಸದಸ್ಯೆ ಹೇಳುತ್ತಾರೆ.</p>.<p><strong>ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಎತ್ತಿನಗುಡ್ಡದಲ್ಲಿ ನಿರ್ಮಿಸಿರುವ ಅಂಗನವಾಡಿ ಕಟ್ಟಡವನ್ನು ಶೀಘ್ರದಲ್ಲಿ ಉದ್ಘಾಟಿಸಲಾಗುವುದು. ವಾರ್ಡ್ನಲ್ಲಿ ಉದ್ಯಾನ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕೋರಿ ಪಾಲಿಕೆಗೆ ಪ್ರಸ್ತಾವ ಸಲ್ಲಿಸಲಾಗುವುದು </strong></p><p><strong>-ಸೂರವ್ವ ಪಾಟೀಲ ಪಾಲಿಕೆ ಸದಸ್ಯೆ ಎರಡನೇ ವಾರ್ಡ್</strong></p>.<p><strong>ವಾರ್ಡ್ನಲ್ಲಿ ಸಿ.ಸಿ ರಸ್ತೆಗಳನ್ನು ನಿರ್ಮಿಸಿರುವುದು ಒಳ್ಳೆಯದು. ಆದರೆ ಹಂಪ್ಗಳು ಜಾಸ್ತಿ ಇವೆ. ವಾರ್ಡ್ಗೆ ಬಸ್ ಸೌಕರ್ಯ ಚೆನ್ನಾಗಿದೆ </strong></p><p><strong>-ಶಾರುಖ್ ಪಠಾಣ್ ರಿಕ್ಷಾ ಚಾಲಕ ಮೆಹಬೂಬ ನಗರ</strong></p>.<p>ಪ್ರಮುಖ ಬಡಾವಣೆಗಳು ಎತ್ತಿನಗುಡ್ಡ ಕೃಷಿ ವಿಶ್ವವಿದ್ಯಾಲಯ ಮಾಳಾಪುರ ಸೋನಾಪುರ ಹಾಸ್ಮಿನಗರ ಮೆಹಬೂಬ್ ನಗರ ಗುಲಗಂಜಿಕೊಪ್ಪ ಗೌಸಿಯಾ ಟೌನ್ ಬಸವ ಕಲ್ಯಾಣ ನಗರ</p>.<p>ವಾರ್ಡ್ ನಂ.2ಪಾಲಿಕೆ ಸದಸ್ಯೆ: ಸೂರವ್ವ ಬಾಳನಗೌಡ ಪಾಟೀಲಜನಸಂಖ್ಯೆ: 13070ಪುರುಷರು: 6700ಮಹಿಳೆಯರು: 6370ವಾರ್ಡ್ ವಿಸ್ತೀರ್ಣ: 3.40 ಚದರ ಕಿ.ಮೀಸಂಪರ್ಕ ಸಂಖ್ಯೆ: ಮೊ.7338656349ಪಾಲಿಕೆ ಆಸ್ತಿ: 2280ಅಂಗನವಾಡಿ ಕೇಂದ್ರ: 7ಬೀದಿ ದೀಪಗಳು: 508</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ನಗರದ ಎರಡನೇ ವಾರ್ಡ್ನಲ್ಲಿ ಹಲವೆಡೆ ಸಿ.ಸಿ ರಸ್ತೆ ನಿರ್ಮಿಸಲಾಗಿದೆ. ಅಂಗನವಾಡಿ ಕೇಂದ್ರಕ್ಕೆ (ಎತ್ತಿನಗುಡ್ಡ) ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಬಹುತೇಕ ಮುಗಿದಿದೆ. ಚರಂಡಿ, ನೀರು ಪೂರೈಕೆ, ಕಸ ವಿಲೇವಾರಿ ಮೊದಲಾದ ಸಮಸ್ಯೆಗಳು ಇವೆ.</p>.<p>ಎತ್ತಿನಗುಡ್ಡ, ಮೆಹಬೂಬ ನಗರ ಸಹಿತ ಹಲವೆಡೆ ಸಿ.ಸಿ ರಸ್ತೆಗಳಾಗಿದ್ದು, ಸಂಚಾರಕ್ಕೆ ಅನುಕೂಲವಾಗಿದೆ. ಇನ್ನು ಹಲವು ರಸ್ತೆಗಳ ಅಭಿವೃದ್ಧಿ ಆಗಬೇಕಿದೆ.</p>.<p>ಈ ವಾರ್ಡ್ನಲ್ಲಿ ಕಾರ್ಮಿಕರು ಹೆಚ್ಚು ಇದ್ದಾರೆ. ಕೃಷಿ ವಿಶ್ವವಿದ್ಯಾಲಯ, ಟಾಟಾ ಸಂಸ್ಥೆ ಸಹಿತ ಮೊದಲಾದ ಕಡೆಗಳಿಗೆ ಹಲವು ಕಾರ್ಮಿಕರು ಕೆಲಸ ಮಾಡುತ್ತಾರೆ.</p>.<p>‘ವಾರ್ಡ್ನಲ್ಲಿ ಪ್ರಮುಖವಾಗಿ ₹3 ಕೋಟಿ ವೆಚ್ಚದಲ್ಲಿ ಪಾಲಿಕೆಯಿಂದ ಮಾಳಾಪುರ– ಎತ್ತಿನಗುಡ್ಡ ಸಂಪರ್ಕ ರಸ್ತೆ ನಿರ್ಮಿಸಲಾಗಿದೆ. ₹1 ಕೋಟಿ ವೆಚ್ಚದಲ್ಲಿ ಖೂಬಾ ಮಸೀದಿ– ಎತ್ತಿನಗುಡ್ಡ ರಸ್ತೆ ನಿರ್ಮಿಸಲಾಗಿದೆ. ಹಲವು ಸಣ್ಣ ರಸ್ತೆಗಳನ್ನು ನಿರ್ಮಿಸಲಾಗಿದೆ’ ಎಂದು ವಾರ್ಡ್ ಸದಸ್ಯೆ ಸೂರವ್ವ ಬಾಳನಗೌಡ ಪಾಟೀಲ ತಿಳಿಸಿದರು.</p>.<p>‘ಎತ್ತಿನಗುಡ್ಡದಲ್ಲಿ ₹15 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ. ವಾರ್ಡ್ನಲ್ಲಿ ಎಲ್ಇಡಿ ಬಲ್ಬ್ ಅಳವಡಿಕೆಗೆ ₹20 ಲಕ್ಷ ಮಂಜೂರಾಗಿದೆ. ಕೆಲವೆಡೆ ಗಟಾರ ನಿರ್ಮಿಸಲಾಗಿದೆ. ಇನ್ನು ಬಹಳಷ್ಟು ಕಡೆ ಗಟಾರ ನಿರ್ಮಿಸಬೇಕಿದೆ. ಅನುದಾನಕ್ಕೆ ಮನವಿ ಸಲ್ಲಿಸಿದ್ದೆವು. ಹಿಂದಿನ ಆಯಕ್ತರು ಅನುಮೋದನೆ ನೀಡಿರಲಿಲ್ಲ’ ಎಂದು ಅವರು ತಿಳಿಸಿದರು.</p>.<p>ಈ ವಾರ್ಡ್ನಲ್ಲಿ ಎಂಟು ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಎರಡು ಅಥವಾ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಬೇಕು ಎಂಬುದು ನಿವಾಸಿಗಳ ಒತ್ತಾಯ.</p>.<p>ಬಹಳಷ್ಟು ಕಡೆ ಚರಂಡಿ ಸಮಸ್ಯೆ ಇದೆ. ಹಲವೆಡೆ ಚರಂಡಿಗಳನ್ನು ನಿರ್ಮಾಣ ಮಾಡಬೇಕಿದೆ. ಕೆಲವೆಡೆ ಚರಂಡಿಗಳಲ್ಲಿ ಕಸ ತುಂಬಿಕೊಂಡಿದೆ. ರಭಸವಾಗಿ ಮಳೆ ಸುರಿದಾಗ ನೀರು ರಸ್ತೆಗೆ ಹೊರಳುತ್ತದೆ ಎಂದು ಹೇಳಿದರು.</p>.<p>‘ರಸ್ತೆ, ಬೀದಿದೀಪಗಳಿಗೆ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಬೇಕು. ಕೆಲವೆಡೆ ಬೀದಿದೀಪಗಳು ಹಾಳಾಗಿವೆ. ಅವುಗಳನ್ನು ಬದಲಾಯಿಸಬೇಕು. ಗಟಾರ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಬೇಕು’ ಎಂದು ನಿವಾಸಿ ಶ್ರೀನಿವಾಸ ಹುರಿಯನ್ನವರ ಒತ್ತಾಯಿಸುತ್ತಾರೆ.</p>.<p>ಕೆಲವೆಡೆ ಕಸ ರಾಶಿ ಬಿದ್ದಿದೆ. ಜಾನುವಾರುಗಳು, ಹಂದಿಗಳು ರಾಶಿ ಎಳೆದಾಡಿ ರಾಡಿ ಎಬ್ಬಿಸುತ್ತವೆ. ಕಸದ ರಾಶಿ ಸುತ್ತಲಿನ ನಿವಾಸಿಗಳು, ಪಾದಚಾರಿಗಳು ದುರ್ನಾತ ಸಹಿಸಿ ಓಡಾಡಬೇಕಾದ ಅನಿವಾರ್ಯ ಇದೆ.</p>.<p>ಕಾರ್ಮಿಕರ ಕೊರತೆಯಿಂದಾಗಿ ಕಸ ವಿಲೇವಾರಿ ಸಮಸ್ಯೆಯಾಗಿದೆ ಎಂದು ವಾರ್ಡ್ ಸದಸ್ಯೆ ಹೇಳುತ್ತಾರೆ.</p>.<p><strong>ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಎತ್ತಿನಗುಡ್ಡದಲ್ಲಿ ನಿರ್ಮಿಸಿರುವ ಅಂಗನವಾಡಿ ಕಟ್ಟಡವನ್ನು ಶೀಘ್ರದಲ್ಲಿ ಉದ್ಘಾಟಿಸಲಾಗುವುದು. ವಾರ್ಡ್ನಲ್ಲಿ ಉದ್ಯಾನ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕೋರಿ ಪಾಲಿಕೆಗೆ ಪ್ರಸ್ತಾವ ಸಲ್ಲಿಸಲಾಗುವುದು </strong></p><p><strong>-ಸೂರವ್ವ ಪಾಟೀಲ ಪಾಲಿಕೆ ಸದಸ್ಯೆ ಎರಡನೇ ವಾರ್ಡ್</strong></p>.<p><strong>ವಾರ್ಡ್ನಲ್ಲಿ ಸಿ.ಸಿ ರಸ್ತೆಗಳನ್ನು ನಿರ್ಮಿಸಿರುವುದು ಒಳ್ಳೆಯದು. ಆದರೆ ಹಂಪ್ಗಳು ಜಾಸ್ತಿ ಇವೆ. ವಾರ್ಡ್ಗೆ ಬಸ್ ಸೌಕರ್ಯ ಚೆನ್ನಾಗಿದೆ </strong></p><p><strong>-ಶಾರುಖ್ ಪಠಾಣ್ ರಿಕ್ಷಾ ಚಾಲಕ ಮೆಹಬೂಬ ನಗರ</strong></p>.<p>ಪ್ರಮುಖ ಬಡಾವಣೆಗಳು ಎತ್ತಿನಗುಡ್ಡ ಕೃಷಿ ವಿಶ್ವವಿದ್ಯಾಲಯ ಮಾಳಾಪುರ ಸೋನಾಪುರ ಹಾಸ್ಮಿನಗರ ಮೆಹಬೂಬ್ ನಗರ ಗುಲಗಂಜಿಕೊಪ್ಪ ಗೌಸಿಯಾ ಟೌನ್ ಬಸವ ಕಲ್ಯಾಣ ನಗರ</p>.<p>ವಾರ್ಡ್ ನಂ.2ಪಾಲಿಕೆ ಸದಸ್ಯೆ: ಸೂರವ್ವ ಬಾಳನಗೌಡ ಪಾಟೀಲಜನಸಂಖ್ಯೆ: 13070ಪುರುಷರು: 6700ಮಹಿಳೆಯರು: 6370ವಾರ್ಡ್ ವಿಸ್ತೀರ್ಣ: 3.40 ಚದರ ಕಿ.ಮೀಸಂಪರ್ಕ ಸಂಖ್ಯೆ: ಮೊ.7338656349ಪಾಲಿಕೆ ಆಸ್ತಿ: 2280ಅಂಗನವಾಡಿ ಕೇಂದ್ರ: 7ಬೀದಿ ದೀಪಗಳು: 508</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>