ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಧಾರವಾಡ ಡಿಎಚ್ಒ ಯಶವಂತ ಮದೀನಕರ್, ‘ಪರಿಶೀಲನೆಗಾಗಿ ವೈದ್ಯಾಧಿಕಾರಿ, ಎಂಜಿನಿಯರ್ ಹಾಗೂ ಪೊಲೀಸರ ತಂಡವನ್ನು ಸುಮಂತ್ ಮನೆಗೆ ಕಳುಹಿಸಲಾಗಿತ್ತು. ಲಸಿಕೆ ಹಾಕಿದ ತೋಳಿನ ಭಾಗದಲ್ಲಿ ದೀಪ ಉರಿಯಲಿಲ್ಲ. ಅದು ರಿಚಾರ್ಜೇಬಲ್ ಆಗಿದ್ದರಿಂದ, ತೇವಾಂಶವಿದ್ದ ಜಾಗದಲ್ಲಿ ಅಥವಾ ದೇಹದ ಭಾಗ ಗಟ್ಟಿಯಾಗಿ ಉಜ್ಜಿದಾಗ ಅಲ್ಲಿ ಎಲೆಕ್ಟ್ರೊಮ್ಯಾಗ್ನೆಟ್ (ವಿದ್ಯುತ್ಕಾಂತೀಯ ಶಕ್ತಿ) ಉತ್ಪತ್ತಿಯಾಗುತ್ತದೆ. ದೀಪ ಹೊತ್ತಿದ್ದು ಈ ಕಾರಣಕ್ಕೆ.ಲಸಿಕೆಯಿಂದಲ್ಲ’ ಎಂದು ಸ್ಪಷ್ಟ ಪಡಿಸಿದರು.