ನಗರದ ಶ್ರೀ ಪದ್ಮಾ ಚಿತ್ರಮಂದಿರದ ಎದುರು ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ, ಡೊಳ್ಳು ಬಾರಿಸಿ ಸಂಭ್ರಮಿಸಿದರು. ಅಂಬರೀಶ್ಗೆ ಜೈಕಾರ ಹಾಕಿ ಅಭಿಮಾನ ಮೆರೆದರು. ಸಿನಿಮಾ ನೋಡಲು ಬಂದವರಿಗೆ ಸಿಹಿ ತನಿಸು ಹಂಚಿದರು. ಸಿನಿಮಾ ಪೋಸ್ಟರ್ಗೆ ಹಾರ ಹಾಕಿದರು. ನಗರದಲ್ಲಿ ಪದ್ಮಾ ಚಿತ್ರಮಂದಿರ ಮತ್ತು ಅರ್ಬನ್ ಒಯಾಸಿಸ್ ಮಾಲ್ನ ಸಿನಿಪೊಲಿಸ್ನಲ್ಲಿ ಚಿತ್ರ ತೆರೆ ಕಂಡಿದೆ.