ಇಲ್ಲಿನ ವೀರಾಪೂರ ಓಣಿಯಲ್ಲಿರುವ ಅಂಜಲಿ ಅಂಬಿಗೇರ ಮನೆಗೆ ಮಂಗಳವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮದ್ಯದ ದರ ತುಟ್ಟಿಯಾದ ಕಾರಣ ರಾಜ್ಯದಲ್ಲಿ ಗಾಂಜಾ, ಅಫೀಮು ಸೇರಿ ಮಾದಕ ವ್ಯಸ್ತುಗಳ ಮಾರಾಟ ಹಾಗೂ ಸೇವನೆ ರಾಜಾರೋಷವಾಗಿ ನಡೆದಿದೆ. ಇದರಿಂದ ಯುವ ಜನಾಂಗ ದಾರಿ ತಪ್ಪುತ್ತಿದೆ. ಎಲ್ಲ ಅಪರಾಧಗಳಿಗೆ ಇದೇ ಕಾರಣ’ ಎಂದರು.