‘ಸರ್ಕಾರದ ಮಾರ್ಗಸೂಚಿಗಳು, ಕಾಯ್ದೆ ಕಾನೂನುಗಳಲ್ಲಿ ಬದಲಾವಣೆ, ಲೆಕ್ಕಪತ್ರಗಳ ದಾಖಲಿಸುವಿಕೆಯಲ್ಲಿ ಸುಧಾರಣೆ, ಅನವಶ್ಯಕ ಕಿರುಕುಳ, ಕಾರ್ಮಿಕರು ಮತ್ತು ಸಿಬ್ಬಂದಿಯ ಸಮಸ್ಯೆ, ಮಾರುಕಟ್ಟೆ, ಸಾರಿಗೆ ಹೀಗೆ ಹಲವಾರು ಸಮಸ್ಯೆಗಳನ್ನು ಸರಿಪಡಿಸಿಕೊಂಡು ತಾಳ್ಮೆ ಸಹನೆಯಿಂದ ಉದ್ಯಮ ಮುನ್ನಡೆಸಿಕೊಂಡು ಹೋಗುವುದು ಬಹುಕಷ್ಟದ ಕೆಲಸ. ಇದನ್ನು ಸರಳೀಕರಣ ಮಾಡಿಕೊಂಡು ಪರಿಹಾರದ ಮಾರ್ಗಗಳನ್ನು ಕಂಡುಕೊಳ್ಳುವುದೇ ಜಾಣ ಹಾಗೂ ಯಶಸ್ವಿ ಉದ್ದಿಮೆದಾರನ ಲಕ್ಷಣ’ ಎಂದು ಹೇಳಿದರು.