ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ನೆನಪಿಸುವಂತೆ ಬೆಳಗಿದ ದೀಪಗಳು

ಪ್ರಧಾನಿ ಕರೆಗೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ; ಪಟಾಕಿ ಸಿಡಿಸಿ ಸಂಭ್ರಮ
Last Updated 5 ಏಪ್ರಿಲ್ 2020, 16:55 IST
ಅಕ್ಷರ ಗಾತ್ರ

ಗದಗ: ಪ್ರಧಾನಿ ನರೇಂದ್ರ ಮೋದಿ ಅವರ ‘ದೀಪ ಬೆಳಗುವ’ ಕರೆಗೆ ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಗದಗ–ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜನರು ರಾತ್ರಿ 9 ಗಂಟೆಗೆ 9 ನಿಮಿಷ ಮನೆಗಳಲ್ಲಿ ದೀಪ ಬೆಳಗಿದರು. ಕೆಲವರು ಮನೆಯಿಂದ ಹೊರಬಂದು, ಬಾಗಿಲ ಬಳಿ, ಬಾಲ್ಕನಿಯಲ್ಲಿ, ಕಿಟಕಿಯ ಪಕ್ಕದಲ್ಲಿ, ಮನೆಯ ತಾರಸಿಯ ಮೇಲೆ ಹಣತೆಗಳನ್ನು, ಮೊಂಬತ್ತಿಗಳನ್ನು ಹಚ್ಚಿಟ್ಟರು. ಕೆಲವರು ಮೊಬೈಲ್‌ನಲ್ಲಿ ಪ್ಲಾಶ್‌ಲೈಟ್‌ ಬೆಳಗಿದರು.

ಕೆಲವರು ಸಂಜೆಯೇ ಮನೆಯ ಆವರಣ ಸ್ವಚ್ಛಗೊಳಿಸಿ, ಮನೆಯ ಮುಂದೆ ಭಾರತದ ಭೂಪಟವನ್ನು ರಂಗೋಲಿಯಲ್ಲಿ ಬಿಡಿಸಿದ್ದರು. ನಿಗದಿತ ಸಮಯದಲ್ಲಿ ಅದರ ನಡುವೆ ಹಣತೆ ಬೆಳಗಿದರು. ಏಕಕಾಲದಲ್ಲಿ ಇಡೀ ನಗರದ ತುಂಬ ಬೆಳಗಿದ ದೀಪಗಳು ದೀಪಾವಳಿ ಹಬ್ಬದ ವರ್ಣ ವೈಭವನ್ನು ನೆನಪಿಸುವಂತಿತ್ತು.

ದೀಪ ಬೆಳಗಿದ ನಂತರ, ಮನೆಗಳಿಂದ ಹೊರಬಂದ ಕೆಲವರು ಪಟಾಕಿ ಸಿಡಿಸಿದರು. ಇನ್ನು ಕೆಲವರು, ‘ಗೋ ಕೊರೊನಾ ಗೋ ಎಂದು ಜಯಘೋಷ ಮೊಳಗಿಸಿದರು. ದೀಪ ಬೆಳಗುವ ಉತ್ಸಾಹದಲ್ಲಿ ಅನೇಕರು ಸಾಮಾಜಿಕ ಅಂತರ ಪಾಲಿಸುವುದನ್ನು ಮರೆತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT