ಸರ್ಕಾರ ಮೊದಲೇ ಸಾಕಷ್ಟು ಎಚ್ಚರಿಕೆ ನೀಡಿದ್ದರಿಂದ ಶನಿವಾರ ಬಹಳಷ್ಟು ಜನ ಮನೆಯಿಂದ ಹೊರಗೆ ಬರಲಿಲ್ಲ. ಹೀಗಾಗಿ ಸದಾ ಜನರಿಂದ ತುಂಬಿ ತುಳುಕುತ್ತಿದ್ದ ಬಜಾರ ರಸ್ತೆ ಬಿಕೋ ಎನ್ನುತ್ತಿತ್ತು. ಅದರಂತೆ ಪ್ರಯಾಣಿಕರ ಕೊರತೆಯಿಂದಾಗಿ ಬಹಳಷ್ಟು ಬಸ್ಗಳು ಸಂಚರಿಸಲಿಲ್ಲ. 20 ಪ್ರಯಾಣಿಕರಿದ್ದರೆ ಮಾತ್ರ ಆಯಾ ಊರುಗಳಿಗೆ ಬಸ್ ಓಡಿಸುವುದಾಗಿ ಸಾರಿಗೆ ಘಟಕದ ಅಧಿಕಾರಿಗಳು ನಿರ್ಧರಿಸಿದ್ದರು.