<p>ಗಜೇಂದ್ರಗಡ: ಮಳೆ ಕೊರತೆಯಿಂದ ಉಂಟಾದ ಬರ ರೈತರನ್ನು ಸಂಕಷ್ಟಕ್ಕೀಡು ಮಾಡಿದ್ದು, ರೈತರ ಫಸಲು ಬಾರದೆ ಎಪಿಎಂಸಿ ವರ್ತಕರಿಗೂ ಅದರ ಬಿಸಿ ತಟ್ಟಿದೆ.</p>.<p>ಇಲ್ಲಿನ ಎಪಿಎಂಸಿಯಲ್ಲಿ ಪ್ರತಿ ವರ್ಷ ಈ ಸಮಯಕ್ಕೆ ನಿತ್ಯ 10-15 ಸಾವಿರ ಚೀಲ ಗೋವಿನಜೋಳ, 2-3 ಸಾವಿರ ಚೀಲ ಸಜ್ಜೆ ವ್ಯಾಪಕವಾಗಿ ಆವಕವಾಗುತ್ತಿತ್ತು. ಐದಾರು ಲಾರಿಗಳ ಮೂಲಕ ಗೋವಿನಜೋಳ, ಸಜ್ಜೆಯನ್ನು ಬೇರೆಡೆ ಕಳಿಸಲಾಗುತ್ತಿತ್ತು. ಆದರೆ, ಈ ಬಾರಿ ನಿತ್ಯ 1-2 ಸಾವಿರ ಚೀಲ ಗೋವಿನಜೋಳ, 50-100 ಚೀಲ ಸಜ್ಜೆ ಮಾತ್ರ ಆವಕವಾಗುತ್ತಿದ್ದು, ಎಪಿಎಂಸಿ ವರ್ತಕರು ವ್ಯಾಪಾರವಿಲ್ಲದೆ ನಷ್ಟ ಅನುಭವಿಸುವಂತಾಗಿದೆ.</p>.<p>ಸದ್ಯ ಗೋವಿನಜೋಳ ದರ ಪ್ರತಿ ಕ್ವಿಂಟಲ್ಗೆ ₹1800-₹2100, ಸಜ್ಜೆ ₹2000-₹2120 ಇದೆ. ಆದರೆ ಮಾರುಕಟ್ಟೆಗೆ ಫಸಲು ಮಾತ್ರ ಆವಕವಾಗುತ್ತಿಲ್ಲ. </p>.<p>‘ಈ ವರ್ಷ ಸಮರ್ಪಕ ಮಳೆಯಾಗದೆ ಬೆಳೆಗಳು ಹಾಳಾಗಿವೆ. ಇದರಿಂದ ಮಾರುಕಟ್ಟೆಗೆ ಫಸಲಿನ ಆವಕ ತೀವ್ರ ಪ್ರಮಾಣದಲ್ಲಿ ಕುಸಿತ ಕಂಡಿದೆ. ರೈತರು ಬೆಳೆ ಬೆಳೆದರೆ ಮಾತ್ರ ವರ್ತಕರು, ಹಮಾಲರು ಬದುಕುತ್ತಾರೆ’ ಎನ್ನುತ್ತಾರೆ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಅಮರೇಶ ಬಳಿಗೇರ.</p>.<p>‘ಎಪಿಎಂಸಿಯಲ್ಲಿ 150ಕ್ಕೂ ಹೆಚ್ಚು ಹಮಾಲರು ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ ಸುಗ್ಗಿಯಲ್ಲಿ ಹೆಚ್ಚು ಕೆಲಸಗಳು ಸಿಗುತ್ತಿದ್ದವು. ಕೆಲವೊಮ್ಮೆ ರಾತ್ರಿಯೂ ಕೆಲಸ ಮಾಡುತ್ತಿದ್ದೆವು. ಈ ಬಾರಿ ಕೆಲಸವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ’ ಎಂದು ಎಪಿಎಂಸಿ ಹಮಾಲರಾದ ಯಶವಂತ ಪವಾರ, ಪರಶುರಾಮ ಕಲಾಲ.</p>.<p><strong>ಕಾರ್ಮಿಕ ಕಾರ್ಡ್ ನೀಡದ ಇಲಾಖೆ</strong> </p><p>‘ಅಸಂಘಟಿತ ವಲಯಕ್ಕೆ ಸೇರುವ ಹಮಾಲರಿಗೆ ಕಾರ್ಮಿಕ ಕಾರ್ಡ್ ನೀಡುವಂತೆ ಹಲವು ಬಾರಿ ಕಾರ್ಮಿಕ ಇಲಾಖೆಗೆ ಮನವಿ ಸಲ್ಲಿದರೂ ಪ್ರಯೋಜನವಾಗಿಲ್ಲ. ಈ ವರ್ಷ ಮಳೆ ಕೊರತೆಯಿಂದ ಎಪಿಎಂಸಿಯಲ್ಲಿ ಕೆಲಸವಿಲ್ಲದೆ ಮಕ್ಕಳ ವಿದ್ಯಾಭ್ಯಾಸ ಮನೆ ಬಾಡಿಗೆ ಮನೆ ಖರ್ಚು ನಿಭಾಯಿಸುವುದು ಕಷ್ಟವಾಗಿದೆʼ ಎಂದು ಜೈ ಮಾರುತೇಶ್ವರ ಹಮಾಲರ ಸಂಘದ ಕಾರ್ಯದರ್ಶಿ ಬಸವರಾಜ ಸುರಕೋಡ ತಿಳಿಸಿದರು. </p>.<p> <strong>‘ಬದುಕು ದುಸ್ಥರ’</strong></p><p> ‘ಮುಂಗಾರು ಪ್ರಾರಂಭದಲ್ಲಿ ಸಾಲ ಮಾಡಿ ಗೋವಿನಜೋಳ ಬಿತ್ತನೆ ಮಾಡಿದ್ದೆವು. ಮಳೆ ಕೈಕೊಟ್ಟಿದ್ದರಿಂದ ಬೆಳೆ ಹಾಳಾಗಿದೆ. ದಲಾಲಿ ಅಂಗಡಿಗಳಲ್ಲಿ ಮಾಡಿದ ಕೈಸಾಲ ತೀರಿಸಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬದುಕು ದುಸ್ಥರವಾಗಿದೆ’ ಎಂದು ರೈತರಾದ ಪರಸಪ್ಪ ರಾಠೋಡ ಯಲ್ಲಪ್ಪ ಕಟ್ಟಿಮನಿ ಅಲವತ್ತುಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಜೇಂದ್ರಗಡ: ಮಳೆ ಕೊರತೆಯಿಂದ ಉಂಟಾದ ಬರ ರೈತರನ್ನು ಸಂಕಷ್ಟಕ್ಕೀಡು ಮಾಡಿದ್ದು, ರೈತರ ಫಸಲು ಬಾರದೆ ಎಪಿಎಂಸಿ ವರ್ತಕರಿಗೂ ಅದರ ಬಿಸಿ ತಟ್ಟಿದೆ.</p>.<p>ಇಲ್ಲಿನ ಎಪಿಎಂಸಿಯಲ್ಲಿ ಪ್ರತಿ ವರ್ಷ ಈ ಸಮಯಕ್ಕೆ ನಿತ್ಯ 10-15 ಸಾವಿರ ಚೀಲ ಗೋವಿನಜೋಳ, 2-3 ಸಾವಿರ ಚೀಲ ಸಜ್ಜೆ ವ್ಯಾಪಕವಾಗಿ ಆವಕವಾಗುತ್ತಿತ್ತು. ಐದಾರು ಲಾರಿಗಳ ಮೂಲಕ ಗೋವಿನಜೋಳ, ಸಜ್ಜೆಯನ್ನು ಬೇರೆಡೆ ಕಳಿಸಲಾಗುತ್ತಿತ್ತು. ಆದರೆ, ಈ ಬಾರಿ ನಿತ್ಯ 1-2 ಸಾವಿರ ಚೀಲ ಗೋವಿನಜೋಳ, 50-100 ಚೀಲ ಸಜ್ಜೆ ಮಾತ್ರ ಆವಕವಾಗುತ್ತಿದ್ದು, ಎಪಿಎಂಸಿ ವರ್ತಕರು ವ್ಯಾಪಾರವಿಲ್ಲದೆ ನಷ್ಟ ಅನುಭವಿಸುವಂತಾಗಿದೆ.</p>.<p>ಸದ್ಯ ಗೋವಿನಜೋಳ ದರ ಪ್ರತಿ ಕ್ವಿಂಟಲ್ಗೆ ₹1800-₹2100, ಸಜ್ಜೆ ₹2000-₹2120 ಇದೆ. ಆದರೆ ಮಾರುಕಟ್ಟೆಗೆ ಫಸಲು ಮಾತ್ರ ಆವಕವಾಗುತ್ತಿಲ್ಲ. </p>.<p>‘ಈ ವರ್ಷ ಸಮರ್ಪಕ ಮಳೆಯಾಗದೆ ಬೆಳೆಗಳು ಹಾಳಾಗಿವೆ. ಇದರಿಂದ ಮಾರುಕಟ್ಟೆಗೆ ಫಸಲಿನ ಆವಕ ತೀವ್ರ ಪ್ರಮಾಣದಲ್ಲಿ ಕುಸಿತ ಕಂಡಿದೆ. ರೈತರು ಬೆಳೆ ಬೆಳೆದರೆ ಮಾತ್ರ ವರ್ತಕರು, ಹಮಾಲರು ಬದುಕುತ್ತಾರೆ’ ಎನ್ನುತ್ತಾರೆ ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಅಮರೇಶ ಬಳಿಗೇರ.</p>.<p>‘ಎಪಿಎಂಸಿಯಲ್ಲಿ 150ಕ್ಕೂ ಹೆಚ್ಚು ಹಮಾಲರು ಕೆಲಸ ಮಾಡುತ್ತಿದ್ದಾರೆ. ಪ್ರತಿ ವರ್ಷ ಸುಗ್ಗಿಯಲ್ಲಿ ಹೆಚ್ಚು ಕೆಲಸಗಳು ಸಿಗುತ್ತಿದ್ದವು. ಕೆಲವೊಮ್ಮೆ ರಾತ್ರಿಯೂ ಕೆಲಸ ಮಾಡುತ್ತಿದ್ದೆವು. ಈ ಬಾರಿ ಕೆಲಸವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ’ ಎಂದು ಎಪಿಎಂಸಿ ಹಮಾಲರಾದ ಯಶವಂತ ಪವಾರ, ಪರಶುರಾಮ ಕಲಾಲ.</p>.<p><strong>ಕಾರ್ಮಿಕ ಕಾರ್ಡ್ ನೀಡದ ಇಲಾಖೆ</strong> </p><p>‘ಅಸಂಘಟಿತ ವಲಯಕ್ಕೆ ಸೇರುವ ಹಮಾಲರಿಗೆ ಕಾರ್ಮಿಕ ಕಾರ್ಡ್ ನೀಡುವಂತೆ ಹಲವು ಬಾರಿ ಕಾರ್ಮಿಕ ಇಲಾಖೆಗೆ ಮನವಿ ಸಲ್ಲಿದರೂ ಪ್ರಯೋಜನವಾಗಿಲ್ಲ. ಈ ವರ್ಷ ಮಳೆ ಕೊರತೆಯಿಂದ ಎಪಿಎಂಸಿಯಲ್ಲಿ ಕೆಲಸವಿಲ್ಲದೆ ಮಕ್ಕಳ ವಿದ್ಯಾಭ್ಯಾಸ ಮನೆ ಬಾಡಿಗೆ ಮನೆ ಖರ್ಚು ನಿಭಾಯಿಸುವುದು ಕಷ್ಟವಾಗಿದೆʼ ಎಂದು ಜೈ ಮಾರುತೇಶ್ವರ ಹಮಾಲರ ಸಂಘದ ಕಾರ್ಯದರ್ಶಿ ಬಸವರಾಜ ಸುರಕೋಡ ತಿಳಿಸಿದರು. </p>.<p> <strong>‘ಬದುಕು ದುಸ್ಥರ’</strong></p><p> ‘ಮುಂಗಾರು ಪ್ರಾರಂಭದಲ್ಲಿ ಸಾಲ ಮಾಡಿ ಗೋವಿನಜೋಳ ಬಿತ್ತನೆ ಮಾಡಿದ್ದೆವು. ಮಳೆ ಕೈಕೊಟ್ಟಿದ್ದರಿಂದ ಬೆಳೆ ಹಾಳಾಗಿದೆ. ದಲಾಲಿ ಅಂಗಡಿಗಳಲ್ಲಿ ಮಾಡಿದ ಕೈಸಾಲ ತೀರಿಸಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬದುಕು ದುಸ್ಥರವಾಗಿದೆ’ ಎಂದು ರೈತರಾದ ಪರಸಪ್ಪ ರಾಠೋಡ ಯಲ್ಲಪ್ಪ ಕಟ್ಟಿಮನಿ ಅಲವತ್ತುಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>