ಗದಗ: ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಸೋಮವಾರ ಜಂಟಿ ಕಾರ್ಯಾಚರಣೆ ನಡೆಸಿ ಮೂವರು ಕೃಷ್ಣಮೃಗ ಬೇಟೆಗಾರರನ್ನು ಬಂಧಿಸಿದ್ದಾರೆ.
ಬೆಟಗೇರಿ ಸೆಟ್ಲಮೆಂಟ್ನ ರಮೇಶ್ ಚವ್ಹಾಳ (24) ಹಾಗೂ ಸುರೇಶ ಚಂದ್ರು ದೊಡ್ಡಮನಿ (22) ಹಾಗೂ ಕಣಗಿನಹಾಳ ಗ್ರಾಮದ ಅರ್ಜುನ ಹರಣಶಿಕಾರಿ (19) ಬಂಧಿತರು.
ಆರೋಪಿಗಳಿಂದ 15 ಕೆ.ಜಿ. ಕೃಷ್ಣಮೃಗ ಮಾಂಸ, ಎರಡು ಫೋನ್ ಮತ್ತು ಬೈಕ್ ವಶ ಪಡಿಸಿಕೊಳ್ಳಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.