<p><strong>ಮುಂಡರಗಿ</strong>: ‘ರೈತರು ಕಷ್ಟಪಟ್ಟು ಬೆಳೆದ ಬೆಳೆಗಳ ಲಾಭಾಂಶವನ್ನು ಮಧ್ಯವರ್ತಿಗಳು ಪಡೆದುಕೊಳ್ಳುತ್ತಿದ್ದು, ಇದರಿಂದ ರೈತರ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದಂತಾಗಿದೆ’ ಎಂದು ಜಿಲ್ಲಾ ಕೃಷಿ ಉಪ ನಿರ್ದೇಶಕಿ ಸ್ಪೂರ್ತಿ ಜಿ.ಎಸ್. ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ಡಂಬಳ ಗ್ರಾಮದಲ್ಲಿ ಚಂದನವನ ರೈತ ಉತ್ಪಾದಕ ಕಂಪನಿಯಿಂದ ಗ್ರಾಮದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಂಪನಿಯ ವಾರ್ಷಿಕೋತ್ಸವ ಹಾಗೂ ಸಾಧಕ ರೈತರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ರೈತ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆ ಜಾರಿಗೆ ತಂದಿವೆ. ಚಂದನವನ ರೈತ ಉತ್ಪಾದಕ ಕಂಪನಿ ಅಗತ್ಯ ನೆರವು ನೀಡುತ್ತಲಿದ್ದು, ರೈತ ಮಹಿಳೆಯರು ಸ್ವಾವಲಂಬಿಯಾಗಬೇಕು’ ಎಂದು ಸಲಹೆ ನೀಡಿದರು.</p>.<p>ಪ್ರಗತಿಪರ ರೈತ ರವಿ ಸಜ್ಜನರ ಮಾತನಾಡಿ, ‘ರೈತರು ರೈತ ಉತ್ಪಾದಕ ಕಂಪನಿಗಳ ಮೇಲೆ ವಿಶ್ವಾಸದಿಂದ ಕಾರ್ಯ ನಿರ್ವಹಿಸಬೇಕು ಆಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದರು.</p>.<p>ಬಸವರಾಜ ಬೇವಿನಮರದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕೃಷಿ ಚಟುವಟಿಕೆಗಳನ್ನು ಆಧರಿಸಿ ಒಂದು ಕಂಪನಿ ನಡೆಸುವುದು ಕಷ್ಟಸಾಧ್ಯ. ಕಂಪನಿ ಅಭಿವೃದ್ಧಿಗೆ ನೆರವು ನೀಡಿದ ವಿವಿಧ ರೈತಪರ ಸಂಘ ಹಾಗೂ ರೈತರಿಗೆ ಸದಾ ಸ್ಮರಣೀಯ’ ಎಂದರು.</p>.<p>ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕ ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು.<br /> ಶಂಕರಗೌಡ ಪಾಟೀಲ ಸ್ವಾಗತಿಸಿದರು. ಲೀಲಾ ಜೊಂಡಿ ನಿರೂಪಿಸಿದರು. ಪರಡ್ಡಿ ಬಾವಿ ವಂದಿಸಿದರು.</p>.<p>ವಿ.ಜಿ. ಹಿರೆಮಠ ಸಾನ್ನಿಧ್ಯ ವಹಿಸಿದ್ದರು. ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ, ಎಸ್.ಬಿ. ರಾಮೇನಹಳ್ಳಿ, ಶಿವಲೀಲಾ ಬಂಡಿಹಾಳ, ಲಕ್ಷ್ಮವ್ವ ಕಾಶಿಬೋವಿ, ಆದರ್ಶ, ರಾಖೇಶ ಕದಾಂಪುರ, ಶಶಿಧರ ವಕ್ಕಲರ, ಸೋಮಣ್ಣ ಸೊಪ್ಪಿನ, ಫಕ್ಕಿರಯ್ಯ ಹಿರೇಮಠ, ಖಂಡಪ್ಪ ನೆಗಳೂರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡರಗಿ</strong>: ‘ರೈತರು ಕಷ್ಟಪಟ್ಟು ಬೆಳೆದ ಬೆಳೆಗಳ ಲಾಭಾಂಶವನ್ನು ಮಧ್ಯವರ್ತಿಗಳು ಪಡೆದುಕೊಳ್ಳುತ್ತಿದ್ದು, ಇದರಿಂದ ರೈತರ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದಂತಾಗಿದೆ’ ಎಂದು ಜಿಲ್ಲಾ ಕೃಷಿ ಉಪ ನಿರ್ದೇಶಕಿ ಸ್ಪೂರ್ತಿ ಜಿ.ಎಸ್. ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ಡಂಬಳ ಗ್ರಾಮದಲ್ಲಿ ಚಂದನವನ ರೈತ ಉತ್ಪಾದಕ ಕಂಪನಿಯಿಂದ ಗ್ರಾಮದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಂಪನಿಯ ವಾರ್ಷಿಕೋತ್ಸವ ಹಾಗೂ ಸಾಧಕ ರೈತರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ರೈತ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆ ಜಾರಿಗೆ ತಂದಿವೆ. ಚಂದನವನ ರೈತ ಉತ್ಪಾದಕ ಕಂಪನಿ ಅಗತ್ಯ ನೆರವು ನೀಡುತ್ತಲಿದ್ದು, ರೈತ ಮಹಿಳೆಯರು ಸ್ವಾವಲಂಬಿಯಾಗಬೇಕು’ ಎಂದು ಸಲಹೆ ನೀಡಿದರು.</p>.<p>ಪ್ರಗತಿಪರ ರೈತ ರವಿ ಸಜ್ಜನರ ಮಾತನಾಡಿ, ‘ರೈತರು ರೈತ ಉತ್ಪಾದಕ ಕಂಪನಿಗಳ ಮೇಲೆ ವಿಶ್ವಾಸದಿಂದ ಕಾರ್ಯ ನಿರ್ವಹಿಸಬೇಕು ಆಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ’ ಎಂದರು.</p>.<p>ಬಸವರಾಜ ಬೇವಿನಮರದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕೃಷಿ ಚಟುವಟಿಕೆಗಳನ್ನು ಆಧರಿಸಿ ಒಂದು ಕಂಪನಿ ನಡೆಸುವುದು ಕಷ್ಟಸಾಧ್ಯ. ಕಂಪನಿ ಅಭಿವೃದ್ಧಿಗೆ ನೆರವು ನೀಡಿದ ವಿವಿಧ ರೈತಪರ ಸಂಘ ಹಾಗೂ ರೈತರಿಗೆ ಸದಾ ಸ್ಮರಣೀಯ’ ಎಂದರು.</p>.<p>ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಸಾಧಕ ರೈತ ಮಹಿಳೆಯರನ್ನು ಸನ್ಮಾನಿಸಲಾಯಿತು.<br /> ಶಂಕರಗೌಡ ಪಾಟೀಲ ಸ್ವಾಗತಿಸಿದರು. ಲೀಲಾ ಜೊಂಡಿ ನಿರೂಪಿಸಿದರು. ಪರಡ್ಡಿ ಬಾವಿ ವಂದಿಸಿದರು.</p>.<p>ವಿ.ಜಿ. ಹಿರೆಮಠ ಸಾನ್ನಿಧ್ಯ ವಹಿಸಿದ್ದರು. ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ, ಎಸ್.ಬಿ. ರಾಮೇನಹಳ್ಳಿ, ಶಿವಲೀಲಾ ಬಂಡಿಹಾಳ, ಲಕ್ಷ್ಮವ್ವ ಕಾಶಿಬೋವಿ, ಆದರ್ಶ, ರಾಖೇಶ ಕದಾಂಪುರ, ಶಶಿಧರ ವಕ್ಕಲರ, ಸೋಮಣ್ಣ ಸೊಪ್ಪಿನ, ಫಕ್ಕಿರಯ್ಯ ಹಿರೇಮಠ, ಖಂಡಪ್ಪ ನೆಗಳೂರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>