ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಮರತಿ ಉತ್ಸವ ಸಮಿತಿ: ಪದಾಧಿಕಾರಿಗಳ ಆಯ್ಕೆ

Published 14 ಮಾರ್ಚ್ 2024, 14:47 IST
Last Updated 14 ಮಾರ್ಚ್ 2024, 14:47 IST
ಅಕ್ಷರ ಗಾತ್ರ

ಗದಗ: ಹಾಳದಿಬ್ಬ ವಿವಿಧೋದ್ದೇಶಗಳ ಸೇವಾ ಸಂಸ್ಥೆ ವತಿಯಿಂದ 2024ನೇ ಸಾಲಿನಲ್ಲಿ ನಡೆಯುವ ಕಾಮರತಿ ಉತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ರುದ್ರಪ್ಪ ಕಲಬಂಡಿ, ಅಧ್ಯಕ್ಷರಾಗಿ ಅಶೋಕ ಮಂದಾಲಿ, ಉಪಾಧ್ಯಕ್ಷರಾಗಿ ಯಲ್ಲನಗೌಡ ದೇಸಾಯಿ, ಪ್ರಧಾನ ಕಾರ್ಯದರ್ಶಿಯಾಗಿ ಉಪೇಂದ್ರ ಹುಯಿಲಗೋಳ, ಕಾರ್ಯದರ್ಶಿಯಾಗಿ ವೀರೇಶ ಮೆಣಸಗಿ, ಖಂಜಾಚಿಯಾಗಿ ಕಿರಣ ಹಿರೇಮಠ, ಸಹ ಖಂಜಾಚಿಯಾಗಿ ರಾಕೇಶ ನವಲಗುಂದ ಆಯ್ಕೆಯಾಗಿದ್ದಾರೆ.

ಆನಂದ ಶಿದ್ಲಿಂಗ, ಲಕ್ಷ್ಮಣ ಭಾಂಡಿಗೆ, ಸದಾನಂದಸಿಂಗ್ ಗುರ್ಲಹೊಸೂರ, ಬಸವರಾಜ ಅರಗಂಜಿ, ಲಿಂಗನಗೌಡ ದೇಸಾಯಿ, ಸೋಮಯ್ಯ ದಂಡಿನಮಠ, ಸುನೀಲ ಸಂಕಣ್ಣವರ, ವಿನಾಯಕ ಹುಯಿಲಗೋಳ, ವಿನಾಯಕ ಕಪಲಿ ಪ್ರಚಾರ ಸಮಿತಿ ಸದಸ್ಯರನ್ನಾಗಿ ಆಯ್ಕೆಮಾಡಲಾಗಿದೆ.

ಸಲಹಾ ಸಮಿತಿಯಲ್ಲಿ ಈರಣ್ಣ ಖಾನಪ್ಪನವರ, ನಾರಾಯಣದಾಸ ಪುಣೇಕರ, ರಮೇಶ ಮಂದಾಲಿ, ಗಿರಿಯಪ್ಪ ಅಸೂಟಿ, ಶಿವಾಜಿ ಅರಸಿದ್ಧಿ, ವಾಸು ಹುಯಿಲಗೋಳ, ಗೋಪಾಲ ನಾಕೋಡ, ದೀಪಕ್‌ ನಾಕೋಡ ಮತ್ತು ಪರಶುರಾಮ ಆಲೂರ ಇರುವರು ಎಂದು ಹಾಳದಿಬ್ಬ ವಿವಿಧೋದ್ದೇಶಗಳ ಸೇವಾ ಸಂಸ್ಥೆಯ ಅಧ್ಯಕ್ಷ ಕುಮಾರ ಮಂದಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT