<p><strong>ಲಕ್ಷ್ಮೇಶ್ವರ: </strong>ತಾಲ್ಲೂಕಿನಲ್ಲಿಯೇ ಅತ್ಯಂತ ವಿಶಾಲವಾಗಿರುವ ಸಮೀಪದ ಶೆಟ್ಟಿಕೇರಿ ಕೆರೆಯಲ್ಲಿ ಮೀನು ಸಾಕಣೆ ಜೋರಾಗಿದೆ. 234 ಎಕರೆ ವಿಸ್ತೀರ್ಣದ ಕೆರೆ ಸದ್ಯ ಸಂಪೂರ್ಣ ಭರ್ತಿಯಾಗಿದೆ. ಈ ಕೆರೆ ಮೀನು ಸಾಕಣೆಗೆ ಯೋಗ್ಯವಾಗಿದೆ.</p>.<p>ಮೂರು ವರ್ಷಗಳ ಹಿಂದೆ ಮಳೆ ಇಲ್ಲದೇ ಕೆರೆ ಸಂಪೂರ್ಣವಾಗಿ ಬತ್ತಿತ್ತು. ಆಗ ಮೀನು ಸಾಕಣೆಯೂ ಬಂದ್ ಆಗಿತ್ತು. ಆದರೆ ಸತತ ಮೂರು ವರ್ಷಗಳಿಂದ ಉತ್ತಮ ಮಳೆ ಆಗುತ್ತಿರುವುದರಿಂದ ಕೆರೆ ತುಂಬಿದೆ.</p>.<p>ಶೆಟ್ಟಿಕೇರಿ ಗ್ರಾಮದ ಗೋರಬಂಜಾರ ಮೀನುಗಾರರ ಸಹಕಾರಿ ಸಂಘದ ವತಿಯಿಂದ ಕೆರೆ ತುಂಬಿದಾಗ ಮೀನು ಸಾಕಣೆ ಮಾಡಲಾಗುತ್ತಿದೆ.</p>.<p>‘ಮೀನುಗಳ್ಳರು ಕೆರೆಗೆ ನುಗ್ಗಬಾರದು ಎಂಬ ಉದ್ದೇಶದಿಂದ ಪ್ರತಿದಿನ ಆರು ಕೂಲಿಯಾಳುಗಳು ಕೆರೆಯನ್ನು ಕಾಯುತ್ತಿದ್ದಾರೆ. ಹಗಲು ಇಬ್ಬರು ಮತ್ತು ರಾತ್ರಿ ವೇಳೆಯಲ್ಲಿ ನಾಲ್ಕು ಜನರು ಕೆರೆ ಕಾಯುತ್ತಾರೆ’ ಎಂದು ದೀಪಕ್ ಹೇಳಿದರಲ್ಲದೆ, ‘ಮೀನುಗಾರಿಕೆ ಇಲಾಖೆಗೆ ಸಂಘದ ವತಿಯಿಂದ ₹80 ಸಾವಿರ ರಾಜಸ್ವ ತುಂಬುತ್ತಿದ್ದೇವೆ. ಆದರೆ ಮೀನುಗಾರರಿಗೆ ನಷ್ಟ ಉಂಟಾದಾಗ ಇಲಾಖೆ ನಮ್ಮ ಸಹಾಯಕ್ಕೆ ಬರುವುದಿಲ್ಲ’ ಎಂದು ಅಳಲು ತೋಡಿಕೊಂಡರು.</p>.<p>ಕೆರೆಗೆ ಮೀನಿನ ಮರಿಗಳನ್ನು ಬಿಟ್ಟ ಎರಡು ತಿಂಗಳ ನಂತರ ಹರಿಗೋಲುಗಳಲ್ಲಿ ತೆರಳಿ ಮೀನಿನ ಮರಿಗಳಿಗೆ ಸಾಕಣೆದಾರರು ಆಹಾರ ನೀಡುತ್ತಾರೆ. ಹತ್ತು ತಿಂಗಳ ನಂತರ ಮೀನು ಮಾರಾಟಕ್ಕೆ ಸಿದ್ಧವಾಗುತ್ತವೆ. ನಂತರ ಹರಾಜಿನ ಮೂಲಕ ಮೀನು ಮಾರಾಟ ಶುರುವಾಗುತ್ತದೆ. ಮೀನು ಸಾಕಣೆಯಿಂದ ವರ್ಷವೊಂದರಲ್ಲಿ ಸಂಘಕ್ಕೆ ₹5ರಿಂದ ₹6 ಲಕ್ಷ ಲಾಭ ಬರುತ್ತದೆ. ಸಂಘದಲ್ಲಿ ಒಟ್ಟು 180 ಜನ ಸದಸ್ಯರು ಇದ್ದಾರೆ.</p>.<p>ಶೆಟ್ಟಿಕೇರಿ ಕೆರೆ ಮೀನಿಗೆ ಈ ಭಾಗದಲ್ಲಿ ಬಹು ಬೇಡಿಕೆ ಇದೆ. ಹೀಗಾಗಿ ಮೀನು ಮಾರಾಟದಿಂದಲೇ ಹತ್ತಾರು ಕುಟುಂಬಗಳ ಬದುಕಿನ ಬಂಡಿ ನಡೆಯುತ್ತಿದೆ.</p>.<p><strong>13 ಲಕ್ಷ ಮೀನಿನ ಮರಿಗಳು</strong><br />ಈ ವರ್ಷ ಶಿವಮೊಗ್ಗ ಹಾಗೂ ಆಂಧ್ರದ ವಿಜಯವಾಡಗಳಿಂದ ತರಿಸಿರುವ ₹15 ಲಕ್ಷ ಕಿಮ್ಮತ್ತಿನ ಅಂದಾಜು 13 ಲಕ್ಷ ಮೀನಿನ ಮರಿಗಳನ್ನು ಎರಡು ತಿಂಗಳ ಹಿಂದೆಯೇ ಸಾಕಣೆಗಾಗಿ ಕೆರೆಗೆ ಬಿಡಲಾಗಿದೆ ಎಂದು ಸಂಘದ ಅಧ್ಯಕ್ಷ ದೀಪಕ್ ಲಮಾಣಿ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಕ್ಷ್ಮೇಶ್ವರ: </strong>ತಾಲ್ಲೂಕಿನಲ್ಲಿಯೇ ಅತ್ಯಂತ ವಿಶಾಲವಾಗಿರುವ ಸಮೀಪದ ಶೆಟ್ಟಿಕೇರಿ ಕೆರೆಯಲ್ಲಿ ಮೀನು ಸಾಕಣೆ ಜೋರಾಗಿದೆ. 234 ಎಕರೆ ವಿಸ್ತೀರ್ಣದ ಕೆರೆ ಸದ್ಯ ಸಂಪೂರ್ಣ ಭರ್ತಿಯಾಗಿದೆ. ಈ ಕೆರೆ ಮೀನು ಸಾಕಣೆಗೆ ಯೋಗ್ಯವಾಗಿದೆ.</p>.<p>ಮೂರು ವರ್ಷಗಳ ಹಿಂದೆ ಮಳೆ ಇಲ್ಲದೇ ಕೆರೆ ಸಂಪೂರ್ಣವಾಗಿ ಬತ್ತಿತ್ತು. ಆಗ ಮೀನು ಸಾಕಣೆಯೂ ಬಂದ್ ಆಗಿತ್ತು. ಆದರೆ ಸತತ ಮೂರು ವರ್ಷಗಳಿಂದ ಉತ್ತಮ ಮಳೆ ಆಗುತ್ತಿರುವುದರಿಂದ ಕೆರೆ ತುಂಬಿದೆ.</p>.<p>ಶೆಟ್ಟಿಕೇರಿ ಗ್ರಾಮದ ಗೋರಬಂಜಾರ ಮೀನುಗಾರರ ಸಹಕಾರಿ ಸಂಘದ ವತಿಯಿಂದ ಕೆರೆ ತುಂಬಿದಾಗ ಮೀನು ಸಾಕಣೆ ಮಾಡಲಾಗುತ್ತಿದೆ.</p>.<p>‘ಮೀನುಗಳ್ಳರು ಕೆರೆಗೆ ನುಗ್ಗಬಾರದು ಎಂಬ ಉದ್ದೇಶದಿಂದ ಪ್ರತಿದಿನ ಆರು ಕೂಲಿಯಾಳುಗಳು ಕೆರೆಯನ್ನು ಕಾಯುತ್ತಿದ್ದಾರೆ. ಹಗಲು ಇಬ್ಬರು ಮತ್ತು ರಾತ್ರಿ ವೇಳೆಯಲ್ಲಿ ನಾಲ್ಕು ಜನರು ಕೆರೆ ಕಾಯುತ್ತಾರೆ’ ಎಂದು ದೀಪಕ್ ಹೇಳಿದರಲ್ಲದೆ, ‘ಮೀನುಗಾರಿಕೆ ಇಲಾಖೆಗೆ ಸಂಘದ ವತಿಯಿಂದ ₹80 ಸಾವಿರ ರಾಜಸ್ವ ತುಂಬುತ್ತಿದ್ದೇವೆ. ಆದರೆ ಮೀನುಗಾರರಿಗೆ ನಷ್ಟ ಉಂಟಾದಾಗ ಇಲಾಖೆ ನಮ್ಮ ಸಹಾಯಕ್ಕೆ ಬರುವುದಿಲ್ಲ’ ಎಂದು ಅಳಲು ತೋಡಿಕೊಂಡರು.</p>.<p>ಕೆರೆಗೆ ಮೀನಿನ ಮರಿಗಳನ್ನು ಬಿಟ್ಟ ಎರಡು ತಿಂಗಳ ನಂತರ ಹರಿಗೋಲುಗಳಲ್ಲಿ ತೆರಳಿ ಮೀನಿನ ಮರಿಗಳಿಗೆ ಸಾಕಣೆದಾರರು ಆಹಾರ ನೀಡುತ್ತಾರೆ. ಹತ್ತು ತಿಂಗಳ ನಂತರ ಮೀನು ಮಾರಾಟಕ್ಕೆ ಸಿದ್ಧವಾಗುತ್ತವೆ. ನಂತರ ಹರಾಜಿನ ಮೂಲಕ ಮೀನು ಮಾರಾಟ ಶುರುವಾಗುತ್ತದೆ. ಮೀನು ಸಾಕಣೆಯಿಂದ ವರ್ಷವೊಂದರಲ್ಲಿ ಸಂಘಕ್ಕೆ ₹5ರಿಂದ ₹6 ಲಕ್ಷ ಲಾಭ ಬರುತ್ತದೆ. ಸಂಘದಲ್ಲಿ ಒಟ್ಟು 180 ಜನ ಸದಸ್ಯರು ಇದ್ದಾರೆ.</p>.<p>ಶೆಟ್ಟಿಕೇರಿ ಕೆರೆ ಮೀನಿಗೆ ಈ ಭಾಗದಲ್ಲಿ ಬಹು ಬೇಡಿಕೆ ಇದೆ. ಹೀಗಾಗಿ ಮೀನು ಮಾರಾಟದಿಂದಲೇ ಹತ್ತಾರು ಕುಟುಂಬಗಳ ಬದುಕಿನ ಬಂಡಿ ನಡೆಯುತ್ತಿದೆ.</p>.<p><strong>13 ಲಕ್ಷ ಮೀನಿನ ಮರಿಗಳು</strong><br />ಈ ವರ್ಷ ಶಿವಮೊಗ್ಗ ಹಾಗೂ ಆಂಧ್ರದ ವಿಜಯವಾಡಗಳಿಂದ ತರಿಸಿರುವ ₹15 ಲಕ್ಷ ಕಿಮ್ಮತ್ತಿನ ಅಂದಾಜು 13 ಲಕ್ಷ ಮೀನಿನ ಮರಿಗಳನ್ನು ಎರಡು ತಿಂಗಳ ಹಿಂದೆಯೇ ಸಾಕಣೆಗಾಗಿ ಕೆರೆಗೆ ಬಿಡಲಾಗಿದೆ ಎಂದು ಸಂಘದ ಅಧ್ಯಕ್ಷ ದೀಪಕ್ ಲಮಾಣಿ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>