<p><strong>ಗದಗ:</strong> ತಾಲ್ಲೂಕಿನ ತಿಮ್ಮಾಪುರ ಗ್ರಾಮದ 800ಕ್ಕೂ ಹೆಚ್ಚು ಮಹಿಳೆಯರು ಒಂದು ತಿಂಗಳ ಗೃಹಲಕ್ಷ್ಮಿ ಹಣವನ್ನು ಗ್ರಾಮದಲ್ಲಿ ರೇಣುಕಾದೇವಿ ಯಲ್ಲಮ್ಮ ದೇವಸ್ಥಾನದ ನಿರ್ಮಾಣ ಕಾರ್ಯಕ್ಕಾಗಿ ದೇಣಿಗೆಯಾಗಿ ನೀಡಲು ತೀರ್ಮಾನಿಸಿದ್ದಾರೆ.</p>.<p>ಹಣಕಾಸಿನ ಸಮಸ್ಯೆಯಿಂದ 4 ವರ್ಷದಿಂದ ದೇವಸ್ಥಾನದ ಕಾಮಗಾರಿ ಸ್ಥಗಿತೊಂಡಿದ್ದು, ಅದನ್ನು ಪೂರ್ಣಗೊಳಿಸಲು ಮಹಿಳೆಯರು ಗೃಹಲಕ್ಷ್ಮಿ ನೆರವಿನ ಹಣವನ್ನು ದೇಣಿಗೆಯಾಗಿ ನೀಡಲು ನಿರ್ಧರಿಸಿದರು.</p>.<p>‘ಪ್ರಸ್ತುತ ನೂರು ಮಹಿಳೆಯರು ತಲಾ ₹2 ಸಾವಿರ ನೀಡಿದ್ದಾರೆ. ಎಲ್ಲ ಮಹಿಳೆಯರು ನೀಡಿದರೆ, ₹16 ಲಕ್ಷಕ್ಕೂ ಹೆಚ್ಚು ಸಂಗ್ರಹವಾಗಲಿದೆ. ಅಷ್ಟು ಹಣ ಸಿಕ್ಕರೆ ಮುಂದಿನ ಆರು ತಿಂಗಳಲ್ಲಿ ದೇವಸ್ಥಾನ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ರೈತ ಮುಖಂಡ ಯಲ್ಲಪ್ಪ ಎಚ್.ಬಾಬರಿ ತಿಳಿಸಿದರು.</p>.<p>‘ಗ್ರಾಮದ 800ಕ್ಕೂ ಹೆಚ್ಚು ಮಹಿಳೆಯರು ದೇಣಿಗೆ ನೀಡುತ್ತೇವೆ. ಇನ್ನೂ ಕೊರತೆ ಆದಲ್ಲಿ, ಇನ್ನೊಂದು ತಿಂಗಳ ಹಣವನ್ನೂ ಕೊಡುತ್ತೇವೆ’ ಎಂದು ಗ್ರಾಮದ ಮಹಿಳೆ ಶಾಂತವ್ವ ಬಸಾಪುರ ತಿಳಿಸಿದರು.</p>.<p>‘ಗೃಹಲಕ್ಷ್ಮಿ’ ಹಣ ತಾಯಂದಿರ ಭಕ್ತಿ ಮೂಲಕ ಧಾರ್ಮಿಕ ಕಾರ್ಯಕ್ಕೂ ವಿನಿಯೋಗ ಆಗುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಅಭಿನಂದನಾ ಪತ್ರ ಕಳುಹಿಸಿಕೊಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ:</strong> ತಾಲ್ಲೂಕಿನ ತಿಮ್ಮಾಪುರ ಗ್ರಾಮದ 800ಕ್ಕೂ ಹೆಚ್ಚು ಮಹಿಳೆಯರು ಒಂದು ತಿಂಗಳ ಗೃಹಲಕ್ಷ್ಮಿ ಹಣವನ್ನು ಗ್ರಾಮದಲ್ಲಿ ರೇಣುಕಾದೇವಿ ಯಲ್ಲಮ್ಮ ದೇವಸ್ಥಾನದ ನಿರ್ಮಾಣ ಕಾರ್ಯಕ್ಕಾಗಿ ದೇಣಿಗೆಯಾಗಿ ನೀಡಲು ತೀರ್ಮಾನಿಸಿದ್ದಾರೆ.</p>.<p>ಹಣಕಾಸಿನ ಸಮಸ್ಯೆಯಿಂದ 4 ವರ್ಷದಿಂದ ದೇವಸ್ಥಾನದ ಕಾಮಗಾರಿ ಸ್ಥಗಿತೊಂಡಿದ್ದು, ಅದನ್ನು ಪೂರ್ಣಗೊಳಿಸಲು ಮಹಿಳೆಯರು ಗೃಹಲಕ್ಷ್ಮಿ ನೆರವಿನ ಹಣವನ್ನು ದೇಣಿಗೆಯಾಗಿ ನೀಡಲು ನಿರ್ಧರಿಸಿದರು.</p>.<p>‘ಪ್ರಸ್ತುತ ನೂರು ಮಹಿಳೆಯರು ತಲಾ ₹2 ಸಾವಿರ ನೀಡಿದ್ದಾರೆ. ಎಲ್ಲ ಮಹಿಳೆಯರು ನೀಡಿದರೆ, ₹16 ಲಕ್ಷಕ್ಕೂ ಹೆಚ್ಚು ಸಂಗ್ರಹವಾಗಲಿದೆ. ಅಷ್ಟು ಹಣ ಸಿಕ್ಕರೆ ಮುಂದಿನ ಆರು ತಿಂಗಳಲ್ಲಿ ದೇವಸ್ಥಾನ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ರೈತ ಮುಖಂಡ ಯಲ್ಲಪ್ಪ ಎಚ್.ಬಾಬರಿ ತಿಳಿಸಿದರು.</p>.<p>‘ಗ್ರಾಮದ 800ಕ್ಕೂ ಹೆಚ್ಚು ಮಹಿಳೆಯರು ದೇಣಿಗೆ ನೀಡುತ್ತೇವೆ. ಇನ್ನೂ ಕೊರತೆ ಆದಲ್ಲಿ, ಇನ್ನೊಂದು ತಿಂಗಳ ಹಣವನ್ನೂ ಕೊಡುತ್ತೇವೆ’ ಎಂದು ಗ್ರಾಮದ ಮಹಿಳೆ ಶಾಂತವ್ವ ಬಸಾಪುರ ತಿಳಿಸಿದರು.</p>.<p>‘ಗೃಹಲಕ್ಷ್ಮಿ’ ಹಣ ತಾಯಂದಿರ ಭಕ್ತಿ ಮೂಲಕ ಧಾರ್ಮಿಕ ಕಾರ್ಯಕ್ಕೂ ವಿನಿಯೋಗ ಆಗುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಅಭಿನಂದನಾ ಪತ್ರ ಕಳುಹಿಸಿಕೊಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>