<p><strong>ಮುಂಡರಗಿ</strong>: ‘ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದು, ಹಡಪದ ಸಮಾಜದವರು ಧರ್ಮದ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಹಡಪದ ಎಂದು ನಮೂದಿಸಬೇಕು’ ಎಂದು ರಾಜ್ಯ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಕಾರ್ಯಾಧ್ಯಕ್ಷ ದೇವು ಹಡಪದ ತಿಳಿಸಿದರು.</p>.<p>ತಾಲ್ಲೂಕು ಹಡಪದ ಶಿವಶರಣ ಸಮಾಜ ಸೇವಾ ಸಂಘವು ಮಂಗಳವಾರ ಹಮ್ಮಿಕೊಂಡಿದ್ದ ಜಾತಿ ಗಣತಿ ಕುರಿತು ಜಾಗೃತಿ ಕರಪತ್ರಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ರಾಜ್ಯದಲ್ಲಿರುವ ಹಡಪದ ಸಮಾಜದವರು ನಾವಿ, ಸವಿತಾ, ಕ್ಷೌರಿಕ ಮೊದಲಾದ ನಾಮಗಳಿಂದ ಗುರುತಿಸಿಕೊಂಡಿದ್ದು, ಕ್ಷೌರಿಕ ವೃತ್ತಿ ಮಾಡುತ್ತಿದ್ದಾರೆ. ಕುಲಕಸುಬಿನ ಕಾಲಂನಲ್ಲಿ ಕ್ಷೌರಿಕ ವೃತ್ತಿ ಎಂದು ನಮೂದಿಸಬೇಕು’ ಎಂದು ಮನವಿ ಮಾಡಿಕೊಂಡರು.</p>.<p>ತಾಲ್ಲೂಕು ಹಡಪದ ಶಿವಶರಣ ಸಮಾಜ ಸೇವಾ ಸಂಘದ ಅಧ್ಯಕ್ಷ ಈರಣ್ಣ ಹಡಪದ ಮಾತನಾಡಿ, ‘ಗಣತಿ ಸಮಯದಲ್ಲಿ ಹಡಪದ ಸಮಾಜದವರು ಸಮಾಜದ ಮುಖಂಡರು ಸೂಚಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲರೂ ಹಡಪದ ಜಾತಿ ನಮೂದಿಸುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು’ ಎಂದರು.</p>.<p>ತಾಲ್ಲೂಕಿನ ಎಲ್ಲ ಗ್ರಾಮಗಳ ಹಡಪದ ಸಮಾಜದ ಮುಖಂಡರು ತಮ್ಮ ಗ್ರಾಮಗಳಲ್ಲಿ ಕರಪತ್ರ ವಿತರಿಸಿ ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿಕೊಂಡರು.</p>.<p>ಮುಖಂಡರಾದ ಶಿವಾನಂದ ಹಡಪದ, ನಾಗರಾಜ ಹಡಪದ, ಕೊಟ್ರಪ್ಪ ಹಡಪದ, ಶೇಖರಪ್ಪ ಹಡಪದ, ಶಿವಾನಂದ ಹಡಪದ, ಸುರೇಶ ಹಡಪದ, ವಿ.ವಿ. ಹಡಪದ, ಗುರುರಾಜ ಹಡಪದ, ನಿಂಗಪ್ಪ ಹಡಪದ, ರವಿ ಹಡಪದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡರಗಿ</strong>: ‘ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದು, ಹಡಪದ ಸಮಾಜದವರು ಧರ್ಮದ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಹಡಪದ ಎಂದು ನಮೂದಿಸಬೇಕು’ ಎಂದು ರಾಜ್ಯ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಕಾರ್ಯಾಧ್ಯಕ್ಷ ದೇವು ಹಡಪದ ತಿಳಿಸಿದರು.</p>.<p>ತಾಲ್ಲೂಕು ಹಡಪದ ಶಿವಶರಣ ಸಮಾಜ ಸೇವಾ ಸಂಘವು ಮಂಗಳವಾರ ಹಮ್ಮಿಕೊಂಡಿದ್ದ ಜಾತಿ ಗಣತಿ ಕುರಿತು ಜಾಗೃತಿ ಕರಪತ್ರಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ರಾಜ್ಯದಲ್ಲಿರುವ ಹಡಪದ ಸಮಾಜದವರು ನಾವಿ, ಸವಿತಾ, ಕ್ಷೌರಿಕ ಮೊದಲಾದ ನಾಮಗಳಿಂದ ಗುರುತಿಸಿಕೊಂಡಿದ್ದು, ಕ್ಷೌರಿಕ ವೃತ್ತಿ ಮಾಡುತ್ತಿದ್ದಾರೆ. ಕುಲಕಸುಬಿನ ಕಾಲಂನಲ್ಲಿ ಕ್ಷೌರಿಕ ವೃತ್ತಿ ಎಂದು ನಮೂದಿಸಬೇಕು’ ಎಂದು ಮನವಿ ಮಾಡಿಕೊಂಡರು.</p>.<p>ತಾಲ್ಲೂಕು ಹಡಪದ ಶಿವಶರಣ ಸಮಾಜ ಸೇವಾ ಸಂಘದ ಅಧ್ಯಕ್ಷ ಈರಣ್ಣ ಹಡಪದ ಮಾತನಾಡಿ, ‘ಗಣತಿ ಸಮಯದಲ್ಲಿ ಹಡಪದ ಸಮಾಜದವರು ಸಮಾಜದ ಮುಖಂಡರು ಸೂಚಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲರೂ ಹಡಪದ ಜಾತಿ ನಮೂದಿಸುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕು’ ಎಂದರು.</p>.<p>ತಾಲ್ಲೂಕಿನ ಎಲ್ಲ ಗ್ರಾಮಗಳ ಹಡಪದ ಸಮಾಜದ ಮುಖಂಡರು ತಮ್ಮ ಗ್ರಾಮಗಳಲ್ಲಿ ಕರಪತ್ರ ವಿತರಿಸಿ ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿಕೊಂಡರು.</p>.<p>ಮುಖಂಡರಾದ ಶಿವಾನಂದ ಹಡಪದ, ನಾಗರಾಜ ಹಡಪದ, ಕೊಟ್ರಪ್ಪ ಹಡಪದ, ಶೇಖರಪ್ಪ ಹಡಪದ, ಶಿವಾನಂದ ಹಡಪದ, ಸುರೇಶ ಹಡಪದ, ವಿ.ವಿ. ಹಡಪದ, ಗುರುರಾಜ ಹಡಪದ, ನಿಂಗಪ್ಪ ಹಡಪದ, ರವಿ ಹಡಪದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>