<p><strong>ಗಜೇಂದ್ರಗಡ</strong>: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ತಡರಾತ್ರಿ ರಭಸವಾಗಿ ಮಳೆ ಸುರಿದಿದೆ. ಮಳೆ ರೈತರಲ್ಲಿ ಸಂತಸ ಮೂಡಿದ್ದು, ಹಲವೆಡೆ ಅವಾಂತರ ಸೃಷ್ಟಿಸಿದೆ.</p>.<p>ಭಾರಿ ಮಳೆಯಿಂದ ಕಿರು ಹಳ್ಳಗಳು, ಜಮೀನುಗಳ ಓಣಿ ದಾರಿಗಳಲ್ಲಿ ನೀರು ತುಂಬಿ ಹರಿಯಿತು. ಚರಂಡಿಗಳು ಉಕ್ಕಿ ಹರಿದವು. ತಗ್ಗು ಪ್ರದೇಶದಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.</p>.<p>ಪಟ್ಟಣದಲ್ಲಿ ಊಟದ ಎಲೆ ತಯಾರಿಕಾ ಘಟಕಕ್ಕೆ ಮಳೆ ನೀರು ನುಗ್ಗಿ ಸಾವಿರಾರು ಎಲೆಗಳು ಹಾನಿಯಾಗಿವೆ. ಸಮೀಪದ ರಾಜೂರ ಗ್ರಾಮದ ಹಾಲಿನ ಕೇಂದ್ರದ ಹಿಂದಿನ ಮುಖ್ಯ ಚರಂಡಿ ತುಂಬಿ ಹರಿದಿದ್ದರಿಂದ ಹಲವು ಮನೆಗಳಿಗೆ ನೀರು ನುಗ್ಗಿದೆ.</p>.<p>ಜಮೀನುಗಳ ತಗ್ಗು ಪ್ರದೇಶದಲ್ಲಿ ಸಂಗ್ರಹವಾಗಿದ್ದ ನೀರು ಹರಿದು ಹೋಗಲು ರೈತರು ದಾರಿ ಮಾಡುತ್ತಿರುವುದು ಕಂಡುಬಂತು. ಹಲವು ದಿನಗಳಿಂದ ಕಣ್ಮರೆಯಾಗಿದ್ದ ಮಳೆ ಮತ್ತೆ ಸುರಿದಿದ್ದರಿಂದ ಗೋವಿನಜೋಳ ಬೆಳೆಗಳಿಗೆ ಮರುಜೀವ ನೀಡಿದೆ.</p>.<p class="Subhead">ಮುಂದುವರಿದ ಮಳೆ: ತಾಲ್ಲೂಕಿನಾದ್ಯಂತ ಮಂಗಳವಾರ ತಡರಾತ್ರಿ ಸುರಿದಿದ್ದ ಭಾರಿ ಮಳೆ ಬುಧವಾರ ಹಗಲಿನಲ್ಲಿ ಬಿಡುವು ನೀಡಿ ರಾತ್ರಿ ಮತ್ತೆ ಮುಂದುವರೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಜೇಂದ್ರಗಡ</strong>: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ತಡರಾತ್ರಿ ರಭಸವಾಗಿ ಮಳೆ ಸುರಿದಿದೆ. ಮಳೆ ರೈತರಲ್ಲಿ ಸಂತಸ ಮೂಡಿದ್ದು, ಹಲವೆಡೆ ಅವಾಂತರ ಸೃಷ್ಟಿಸಿದೆ.</p>.<p>ಭಾರಿ ಮಳೆಯಿಂದ ಕಿರು ಹಳ್ಳಗಳು, ಜಮೀನುಗಳ ಓಣಿ ದಾರಿಗಳಲ್ಲಿ ನೀರು ತುಂಬಿ ಹರಿಯಿತು. ಚರಂಡಿಗಳು ಉಕ್ಕಿ ಹರಿದವು. ತಗ್ಗು ಪ್ರದೇಶದಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.</p>.<p>ಪಟ್ಟಣದಲ್ಲಿ ಊಟದ ಎಲೆ ತಯಾರಿಕಾ ಘಟಕಕ್ಕೆ ಮಳೆ ನೀರು ನುಗ್ಗಿ ಸಾವಿರಾರು ಎಲೆಗಳು ಹಾನಿಯಾಗಿವೆ. ಸಮೀಪದ ರಾಜೂರ ಗ್ರಾಮದ ಹಾಲಿನ ಕೇಂದ್ರದ ಹಿಂದಿನ ಮುಖ್ಯ ಚರಂಡಿ ತುಂಬಿ ಹರಿದಿದ್ದರಿಂದ ಹಲವು ಮನೆಗಳಿಗೆ ನೀರು ನುಗ್ಗಿದೆ.</p>.<p>ಜಮೀನುಗಳ ತಗ್ಗು ಪ್ರದೇಶದಲ್ಲಿ ಸಂಗ್ರಹವಾಗಿದ್ದ ನೀರು ಹರಿದು ಹೋಗಲು ರೈತರು ದಾರಿ ಮಾಡುತ್ತಿರುವುದು ಕಂಡುಬಂತು. ಹಲವು ದಿನಗಳಿಂದ ಕಣ್ಮರೆಯಾಗಿದ್ದ ಮಳೆ ಮತ್ತೆ ಸುರಿದಿದ್ದರಿಂದ ಗೋವಿನಜೋಳ ಬೆಳೆಗಳಿಗೆ ಮರುಜೀವ ನೀಡಿದೆ.</p>.<p class="Subhead">ಮುಂದುವರಿದ ಮಳೆ: ತಾಲ್ಲೂಕಿನಾದ್ಯಂತ ಮಂಗಳವಾರ ತಡರಾತ್ರಿ ಸುರಿದಿದ್ದ ಭಾರಿ ಮಳೆ ಬುಧವಾರ ಹಗಲಿನಲ್ಲಿ ಬಿಡುವು ನೀಡಿ ರಾತ್ರಿ ಮತ್ತೆ ಮುಂದುವರೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>