<p><strong>ನರಗುಂದ</strong>: ‘ಮನುಷ್ಯ ಜೀವನದಲ್ಲಿ ಮತ್ತೊಬ್ಬರನ್ನು ನಿಂದಿಸುವುದರಲ್ಲಿ ಕಾಲ ಕಳೆಯುವ ಬದಲು, ತನ್ನಲ್ಲಿನ ನ್ಯೂನ್ಯತೆಗಳನ್ನು ತೊರೆದು ಜೀವನ ಸಾಗಿಸಬೇಕು. ಮನಸ್ಸು ಶುದ್ಧವಿದ್ದರೆ ಎಲ್ಲವೂ ಶುದ್ಧ’ ಎಂದು ಬೆನಕೊಪ್ಪದ ಸದ್ಗುರು ಆಶ್ರಮದ ಶಿವಾನಂದ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಶಿರೋಳದ ಯಚ್ಚರಸ್ವಾಮಿ ಗವಿಮಠದಲ್ಲಿ ಈಚೆಗೆ ನಡೆದ 18ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತಮ ಗುಣಗಳೇ ಭವ್ಯ ಭವಿಷ್ಯಕ್ಕೆ ದಾರಿ. ಪ್ರತಿಯೊಬ್ಬರು ಸಚ್ಚಾರಿತ್ರ್ಯವಂತರಾಗಬೇಕು’ ಎಂದರು.</p>.<p>ವಿ.ಎಂ. ವಸ್ತ್ರದ ಮಾತನಾಡಿ, ‘ಮಠವು ಆರ್ಥಿಕ ಪರಿಸ್ಥಿತಿಯಲ್ಲಿ ಹಿಂದೆ ಇದ್ದರೂ ಸಹ ಸದಾಕಾಲ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ’ ಎಂದರು.</p>.<p>ನಿವೃತ್ತ ಶಿಕ್ಷಕ ಎಸ್ ಕೆ ಆಡಿನ್, ಯಚ್ಛರೇಶ್ವರ ವಿದ್ಯಾ ಸಂಸ್ಥೆಯ ನಿರ್ದೇಶಕ ಬಿ.ಆರ್.ಬಡಿಗೇರ, ಅಭಿನವ ಯಚ್ಚರ ಸ್ವಾಮಿ ಮಾತನಾಡಿದರು. ಸುರೇಬಾನ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಮಹಾರುದ್ರಪ್ಪ ಬಡಿಗೇರ, ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ವಿಠ್ಠಲ ಪತ್ತಾರ, ಮಹಮ್ಮದ್ ರಫಿ ನಾಯಕ್ ಇದ್ದರು.</p>.<p>ಗಜೇಂದ್ರಗಡದ ಉದ್ಯಮಿಗಳಾದ ಅಶೋಕ ರಾಯಬಾಗಿ ಹಾಗೂ ಗಿರಿಧರ ರಾಯಬಾಗಿ ಅವರು ಶಿವಾನುಭವ ಸೇವೆ ಸಲ್ಲಿಸಿದರು. ಬಸವರಾಜ ಕುಪ್ಪಸ್ತ, ಮಲ್ಲಪ್ಪ ಚಿಕ್ಕನರಗುಂದ, ಗುರುನಾಥ ಮೆಣಸಗಿ, ಪಾಂಡುರಂಗ ಪತ್ತಾರ ಸಂಗೀತ ಸೇವೆ ಸಲ್ಲಿಸಿದರು. ಸುನೀಲ ಕಳಸದ ನಿರೂಪಿಸಿದರು. ಎಸ್.ವಾಯ್.ಮುಲ್ಕಿಪಾಟೀಲ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಗುಂದ</strong>: ‘ಮನುಷ್ಯ ಜೀವನದಲ್ಲಿ ಮತ್ತೊಬ್ಬರನ್ನು ನಿಂದಿಸುವುದರಲ್ಲಿ ಕಾಲ ಕಳೆಯುವ ಬದಲು, ತನ್ನಲ್ಲಿನ ನ್ಯೂನ್ಯತೆಗಳನ್ನು ತೊರೆದು ಜೀವನ ಸಾಗಿಸಬೇಕು. ಮನಸ್ಸು ಶುದ್ಧವಿದ್ದರೆ ಎಲ್ಲವೂ ಶುದ್ಧ’ ಎಂದು ಬೆನಕೊಪ್ಪದ ಸದ್ಗುರು ಆಶ್ರಮದ ಶಿವಾನಂದ ಸ್ವಾಮೀಜಿ ಹೇಳಿದರು.</p>.<p>ತಾಲ್ಲೂಕಿನ ಶಿರೋಳದ ಯಚ್ಚರಸ್ವಾಮಿ ಗವಿಮಠದಲ್ಲಿ ಈಚೆಗೆ ನಡೆದ 18ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತಮ ಗುಣಗಳೇ ಭವ್ಯ ಭವಿಷ್ಯಕ್ಕೆ ದಾರಿ. ಪ್ರತಿಯೊಬ್ಬರು ಸಚ್ಚಾರಿತ್ರ್ಯವಂತರಾಗಬೇಕು’ ಎಂದರು.</p>.<p>ವಿ.ಎಂ. ವಸ್ತ್ರದ ಮಾತನಾಡಿ, ‘ಮಠವು ಆರ್ಥಿಕ ಪರಿಸ್ಥಿತಿಯಲ್ಲಿ ಹಿಂದೆ ಇದ್ದರೂ ಸಹ ಸದಾಕಾಲ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ’ ಎಂದರು.</p>.<p>ನಿವೃತ್ತ ಶಿಕ್ಷಕ ಎಸ್ ಕೆ ಆಡಿನ್, ಯಚ್ಛರೇಶ್ವರ ವಿದ್ಯಾ ಸಂಸ್ಥೆಯ ನಿರ್ದೇಶಕ ಬಿ.ಆರ್.ಬಡಿಗೇರ, ಅಭಿನವ ಯಚ್ಚರ ಸ್ವಾಮಿ ಮಾತನಾಡಿದರು. ಸುರೇಬಾನ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಮಹಾರುದ್ರಪ್ಪ ಬಡಿಗೇರ, ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ವಿಠ್ಠಲ ಪತ್ತಾರ, ಮಹಮ್ಮದ್ ರಫಿ ನಾಯಕ್ ಇದ್ದರು.</p>.<p>ಗಜೇಂದ್ರಗಡದ ಉದ್ಯಮಿಗಳಾದ ಅಶೋಕ ರಾಯಬಾಗಿ ಹಾಗೂ ಗಿರಿಧರ ರಾಯಬಾಗಿ ಅವರು ಶಿವಾನುಭವ ಸೇವೆ ಸಲ್ಲಿಸಿದರು. ಬಸವರಾಜ ಕುಪ್ಪಸ್ತ, ಮಲ್ಲಪ್ಪ ಚಿಕ್ಕನರಗುಂದ, ಗುರುನಾಥ ಮೆಣಸಗಿ, ಪಾಂಡುರಂಗ ಪತ್ತಾರ ಸಂಗೀತ ಸೇವೆ ಸಲ್ಲಿಸಿದರು. ಸುನೀಲ ಕಳಸದ ನಿರೂಪಿಸಿದರು. ಎಸ್.ವಾಯ್.ಮುಲ್ಕಿಪಾಟೀಲ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>