<p><strong>ಹೊಳೆಆಲೂರು: </strong>‘ಕನ್ನಡ ಕುಲಪುರೋಹಿತ’ ಎಂದೇ ಖ್ಯಾತಿ ಪಡೆದ ವೆಂಕಟರಾಯರಿಗೂ ಹೊಳೆ ಆಲೂರಿಗೂ ಅವಿನಾಭಾವ ನಂಟು. ಇವರು ವಿಜಯಪುರದಲ್ಲಿ ಜನಿಸಿದರೂ, ಇವರ ವಂಶಜರು ರೋಣ ತಾಲ್ಲೂಕಿನ ಹೊಳೆಆಲೂರಿಗೆ ಬಂದು ನೆಲೆಸಿದ್ದರಿಂದ ಆಲೂರು ಇವರ ಮನೆತನದ ಹೆಸರಾಯಿತು.</p>.<p>ವೆಂಕಟರಾಯರ ತಂದೆ ಮಲ್ಕಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಆಲೂರಿಗೆ ವರ್ಗಾವಣೆಯಾದ ನಂತರ ಇಲ್ಲಿ ಬಂದು ವಾಸವಿದ್ದರು.</p>.<p>ಬಂಗಾಳ ವಿಭಜನೆ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದ ಆಲೂರು ವೆಂಕಟರಾಯರಿಗೆ ವಿವಿಧ ವಿಭಾಗಗಳಾಗಿ ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಒಟ್ಟುಗೂಡಿಸಬೇಕೆಂಬ ಯೋಚನೆ ಬಂತು. ಮುಂಬೈ, ಮದರಾಸು, ಹೈದ್ರಾಬಾದ, ಮೈಸೂರು ಪ್ರಾಂತ್ಯಗಳಾಗಿ ಹಂಚಿ ಹೋಗಿದ್ದ ಕರ್ನಾಟಕವನ್ನು ಭೌಗೋಳಿಕವಾಗಿ ಒಂದುಗೂಡಿಲಸು ಕರ್ನಾಟಕ ಏಕಿಕರಣ ಹೋರಾಟಕ್ಕೆ ಧುಮುಕಿದರು.</p>.<p>ವೆಂಕಟರಾಯರ ಈ ಹೋರಾಟಕ್ಕೆ ನಾರಾಯಣ ರಾಜಪುರೋಹಿತರು, ಕಡಪಾ ರಾಘವೇಂದ್ರರಾಯರು, ಮುದವಿಡು ಕೃಷ್ಣರಾಯರು, ಮುದವಿಡು ವೆಂಕಟರಾಯರು. ನರಗುಂದಕರ ರಾಮರಾಯರು, ನಾರಾಯಣರಾವ ದೇಶಪಾಂಡೆಯವರು, ಕೈಜೋಡಿಸಿ ಹೋರಾಟದ ಮೂಲಕ ಕರ್ನಾಟಕವನ್ನು ಒಂದು ಗೂಡಿಸಿದರು.</p>.<p>ಆಲೂರು ವೆಂಕಟರಾಯರ ಹಾಗೂ ಅನೇಕ ಕನ್ನಡಾಭಿಮಾನಿಗಳ ಹೋರಾಟ ಫಲವಾಗಿ 1956 ನವೆಂಬರ್ 1 ರಂದು ಮೈಸೂರು ರಾಜ್ಯ ಉದಯವಾಯಿತು. ಏಕಿಕೃತ ಕರ್ನಾಟಕ ರಾಜ್ಯೋತ್ಸವವನ್ನು ವೆಂಕಟರಾಯರ ನೇತೃತ್ವದಲ್ಲಿ ಹಂಪಿಯಲ್ಲಿ ಆಚರಣೆ ಮಾಡಲಾಯಿತು.</p>.<p>ವೆಂಕಟರಾಯರ ಹೆಸರಿನಲ್ಲಿ ಜಿಲ್ಲೆಯಲ್ಲಿ ಹಲವು ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅವರ ಸವಿ ನೆನಪಿಗಾಗಿ ಹೊಳೆಆಲೂರಿನಲ್ಲಿ ಆಲೂರು ವೆಂಕಟರಾಯರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಪ್ರಮುಖ ವೃತ್ತವೊಂದಕ್ಕೆ ಆಲೂರು ವೆಂಕಟರಾಯ ವೃತ್ತವೆಂದು ನಾಮಕರಣ ಮಾಡಲಾಗಿದೆ. ಹೊಳೆಆಲೂರಿನ ಜನಮಾನಸದಲ್ಲಿ ವೆಂಕಟರಾಯರ ನೆನಪು ಶಾಶ್ವತವಾಗಿ ಉಳಿದಿದೆ.</p>.<p>‘ವೆಂಕಟರಾಯರ ಆದರ್ಶಗಳು ಇಂದಿಗೂ ಸ್ಪೂರ್ತಿ. ಕನ್ನಡ ನಾಡು ನುಡಿಗಾಗಿ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ಹೊಳೆಆಲೂರಿನ ಯಚ್ಚರೇಶ್ವರ ಕಾಲೇಜಿನ ಉಪನ್ಯಾಸಕ ಎಂ.ಎಸ್.ಬೇವೂರ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳೆಆಲೂರು: </strong>‘ಕನ್ನಡ ಕುಲಪುರೋಹಿತ’ ಎಂದೇ ಖ್ಯಾತಿ ಪಡೆದ ವೆಂಕಟರಾಯರಿಗೂ ಹೊಳೆ ಆಲೂರಿಗೂ ಅವಿನಾಭಾವ ನಂಟು. ಇವರು ವಿಜಯಪುರದಲ್ಲಿ ಜನಿಸಿದರೂ, ಇವರ ವಂಶಜರು ರೋಣ ತಾಲ್ಲೂಕಿನ ಹೊಳೆಆಲೂರಿಗೆ ಬಂದು ನೆಲೆಸಿದ್ದರಿಂದ ಆಲೂರು ಇವರ ಮನೆತನದ ಹೆಸರಾಯಿತು.</p>.<p>ವೆಂಕಟರಾಯರ ತಂದೆ ಮಲ್ಕಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಆಲೂರಿಗೆ ವರ್ಗಾವಣೆಯಾದ ನಂತರ ಇಲ್ಲಿ ಬಂದು ವಾಸವಿದ್ದರು.</p>.<p>ಬಂಗಾಳ ವಿಭಜನೆ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದ ಆಲೂರು ವೆಂಕಟರಾಯರಿಗೆ ವಿವಿಧ ವಿಭಾಗಗಳಾಗಿ ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಒಟ್ಟುಗೂಡಿಸಬೇಕೆಂಬ ಯೋಚನೆ ಬಂತು. ಮುಂಬೈ, ಮದರಾಸು, ಹೈದ್ರಾಬಾದ, ಮೈಸೂರು ಪ್ರಾಂತ್ಯಗಳಾಗಿ ಹಂಚಿ ಹೋಗಿದ್ದ ಕರ್ನಾಟಕವನ್ನು ಭೌಗೋಳಿಕವಾಗಿ ಒಂದುಗೂಡಿಲಸು ಕರ್ನಾಟಕ ಏಕಿಕರಣ ಹೋರಾಟಕ್ಕೆ ಧುಮುಕಿದರು.</p>.<p>ವೆಂಕಟರಾಯರ ಈ ಹೋರಾಟಕ್ಕೆ ನಾರಾಯಣ ರಾಜಪುರೋಹಿತರು, ಕಡಪಾ ರಾಘವೇಂದ್ರರಾಯರು, ಮುದವಿಡು ಕೃಷ್ಣರಾಯರು, ಮುದವಿಡು ವೆಂಕಟರಾಯರು. ನರಗುಂದಕರ ರಾಮರಾಯರು, ನಾರಾಯಣರಾವ ದೇಶಪಾಂಡೆಯವರು, ಕೈಜೋಡಿಸಿ ಹೋರಾಟದ ಮೂಲಕ ಕರ್ನಾಟಕವನ್ನು ಒಂದು ಗೂಡಿಸಿದರು.</p>.<p>ಆಲೂರು ವೆಂಕಟರಾಯರ ಹಾಗೂ ಅನೇಕ ಕನ್ನಡಾಭಿಮಾನಿಗಳ ಹೋರಾಟ ಫಲವಾಗಿ 1956 ನವೆಂಬರ್ 1 ರಂದು ಮೈಸೂರು ರಾಜ್ಯ ಉದಯವಾಯಿತು. ಏಕಿಕೃತ ಕರ್ನಾಟಕ ರಾಜ್ಯೋತ್ಸವವನ್ನು ವೆಂಕಟರಾಯರ ನೇತೃತ್ವದಲ್ಲಿ ಹಂಪಿಯಲ್ಲಿ ಆಚರಣೆ ಮಾಡಲಾಯಿತು.</p>.<p>ವೆಂಕಟರಾಯರ ಹೆಸರಿನಲ್ಲಿ ಜಿಲ್ಲೆಯಲ್ಲಿ ಹಲವು ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅವರ ಸವಿ ನೆನಪಿಗಾಗಿ ಹೊಳೆಆಲೂರಿನಲ್ಲಿ ಆಲೂರು ವೆಂಕಟರಾಯರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಪ್ರಮುಖ ವೃತ್ತವೊಂದಕ್ಕೆ ಆಲೂರು ವೆಂಕಟರಾಯ ವೃತ್ತವೆಂದು ನಾಮಕರಣ ಮಾಡಲಾಗಿದೆ. ಹೊಳೆಆಲೂರಿನ ಜನಮಾನಸದಲ್ಲಿ ವೆಂಕಟರಾಯರ ನೆನಪು ಶಾಶ್ವತವಾಗಿ ಉಳಿದಿದೆ.</p>.<p>‘ವೆಂಕಟರಾಯರ ಆದರ್ಶಗಳು ಇಂದಿಗೂ ಸ್ಪೂರ್ತಿ. ಕನ್ನಡ ನಾಡು ನುಡಿಗಾಗಿ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದು ಹೊಳೆಆಲೂರಿನ ಯಚ್ಚರೇಶ್ವರ ಕಾಲೇಜಿನ ಉಪನ್ಯಾಸಕ ಎಂ.ಎಸ್.ಬೇವೂರ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>