‘ರಾಜ್ಯದ ಗಮನ ಸೆಳೆದ ತಾಣ’
‘ಪ್ರಾಚೀನ ಕಾಲದಿಂದಲೂ ಧರ್ಮ, ಸಂಸ್ಕೃತಿ, ಕಲೆಯ ತವರೂರಾದ ಗದಗ ಜಿಲ್ಲೆಯು ತನ್ನ ಚಾರಿತ್ರಿಕ ಹಾಗೂ ಸಮಕಾಲೀನ ವಿಶೇಷಗಳಿಂದ ರಾಜ್ಯದ ಗಮನ ಸೆಳೆದ ತಾಣವಾಗಿದೆ. ಕುಮಾರವ್ಯಾಸ, ಚಾಮರಸ, ನಯಸೇನ, ದುರ್ಗಸಿಂಹ ನೆಲೆಸಿದ ಭೂಮಿ ಇದಾಗಿದ್ದು ಸಾಹಿತ್ಯ, ಸಂಗೀತ, ಲಲಿತಕಲೆಗಳಿಗೆ ಹೆಸರುವಾಸಿಯಾಗಿದೆ’ ಎಂದು ಪ್ರೊ. ರವೀಂದ್ರ ಕೊಪ್ಪರ ಹೇಳಿದರು.