ದಾವಣಗೆರೆ ಮೂಲದ ತೇಜಸ್, ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿ ಕೆಲವು ವರ್ಷ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿದರು. ಆದರೆ, ಅಲ್ಲಿನ ಕೆಲಸದೊತ್ತಡ ಹಾಗೂ ಕಿರುಕುಳಕ್ಕೆ ಬೇಸತ್ತು, ರಾಜೀನಾಮೆ ನೀಡಿ ತೋಟಗಾರಿಕೆ ಮಾಡಲು ಮುಂದಾದರು.ದಾವಣಗೆರೆಯಿಂದ ದೊಡ್ಡೂರು ಗ್ರಾಮಕ್ಕೆ ಬಂದು ಗ್ರಾಮದ ಪಕ್ಕದಲ್ಲಿಯೇ 16 ಎಕರೆ ಭೂಮಿ ಖರೀದಿಸಿದರು. ಅಲ್ಲಿ 750 ಮಾವಿನ ಗಿಡ, 700 ಚಿಕ್ಕು ಹಾಗೂ 300 ತೆಂಗಿನ ಸಸಿಗಳನ್ನು ಬೆಳೆಸಿದ್ದಾರೆ. ಇದಕ್ಕಾಗಿ ಅಂದಾಜು ₹4 ಲಕ್ಷ ಖರ್ಚು ಮಾಡಿದ್ದಾರೆ. ಇದೀಗ ಮಾವು ಹಾಗೂ ಚಿಕ್ಕು ಫಲ ಕೊಡುವ ಹಂತಕ್ಕೆ ಬೆಳೆದು ನಿಂತಿವೆ.