ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ರೋಣ: ರೈತರ ಉಪಯೋಗಕ್ಕೆ ಬಾರದ ಕೃಷಿ ಉತ್ಪನ್ನ ಮಾರುಕಟ್ಟೆ

ಮೂಲಸೌಕರ್ಯ, ಸಿಬ್ಬಂದಿ ಕೊರತೆ: ರೈತರಿಗೆ ಇದ್ದೂ ಇಲ್ಲದಂತಾದ ಎಪಿಎಂಸಿಗಳು
ಉಮೇಶ ಬಸನಗೌಡರ
Published : 19 ಫೆಬ್ರುವರಿ 2024, 5:23 IST
Last Updated : 19 ಫೆಬ್ರುವರಿ 2024, 5:23 IST
ಫಾಲೋ ಮಾಡಿ
Comments
ಹೊಳೆಆಲೂರ ಎಪಿಎಂಸಿ ಕಚೇರಿ
ಹೊಳೆಆಲೂರ ಎಪಿಎಂಸಿ ಕಚೇರಿ
ಸ್ಥಾಪಿಸಿದಾಗಿಂದ ಇಲ್ಲಿಯವರೆಗೆ ಕೆಲಸ ನಿರ್ವಹಿಸದೆ ಕೆಟ್ಟು ನಿಂತಿರುವ ಹೊಳೆಆಲೂರ ಎಪಿಎಂಸಿ ವೇಬ್ರಿಜ್
ಸ್ಥಾಪಿಸಿದಾಗಿಂದ ಇಲ್ಲಿಯವರೆಗೆ ಕೆಲಸ ನಿರ್ವಹಿಸದೆ ಕೆಟ್ಟು ನಿಂತಿರುವ ಹೊಳೆಆಲೂರ ಎಪಿಎಂಸಿ ವೇಬ್ರಿಜ್
ರೋಣ ಎಪಿಎಂಸಿ ಕಚೇರಿ
ರೋಣ ಎಪಿಎಂಸಿ ಕಚೇರಿ
ರೋಣ ಎಪಿಎಂಸಿ ಪ್ರಾಂಗಣದಲ್ಲಿ ಕುಡಿದು ಎಸೆದಿರುವ ಮದ್ಯದ ಪ್ಯಾಕೇಟ್‌ಗಳು
ರೋಣ ಎಪಿಎಂಸಿ ಪ್ರಾಂಗಣದಲ್ಲಿ ಕುಡಿದು ಎಸೆದಿರುವ ಮದ್ಯದ ಪ್ಯಾಕೇಟ್‌ಗಳು
ಖಾಸಗಿ ವಾಹನಗಳ ಪಾರ್ಕಿಂಗ್ ಸ್ಥಳವಾದ ರೋಣ ಎಪಿಎಂಸಿ ಆವರಣ
ಖಾಸಗಿ ವಾಹನಗಳ ಪಾರ್ಕಿಂಗ್ ಸ್ಥಳವಾದ ರೋಣ ಎಪಿಎಂಸಿ ಆವರಣ
ಬಿ.ಸಿ.ಸುಂಕದ
ಬಿ.ಸಿ.ಸುಂಕದ
ಸಿಬ್ಬಂದಿ ಕೊರತೆ ನೀಗಿಸಿ- ಎಪಿಎಂಸಿಗಳಲ್ಲಿ ಮೊದಲಿನಿಂದಲೂ ಸಿಬ್ಬಂದಿ ಕೊರತೆ ಇದೆ ಹೀಗಾಗಿ ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಸರ್ಕಾರ ಸೂಕ್ತ ಸಿಬ್ಬಂದಿ ವ್ಯವಸ್ಥೆ ಮಾಡಿದಲ್ಲಿ ದಕ್ಷವಾಗಿ ಕಾರ್ಯನಿರ್ವಹಿಸಬಹುದು
–ಬಿ.ಸಿ.ಸುಂಕದ ಮಾಜಿ ಅಧ್ಯಕ್ಷರು ಹೊಳೆಆಲೂರ-ರೋಣ ಎಪಿಎಂಸಿ
ಎಪಿಎಂಸಿ ರೈತಸ್ನೇಹಿಯಾಗಲಿ- ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಪ್ರಾಂಗಣದ ಹೊರಗೆ ಮಾರಲು ಕಾನೂನು ತಂದಿದ್ದು ಎಪಿಎಂಸಿಗಳಿಗೆ ಮಾರಕವಾಗಿದೆ. ಮೊದಲಿನ ಹಾಗೆ ಅಧಿಕಾರ ನೀಡಿದಲ್ಲಿ ಎಪಿಎಂಸಿಗಳು ಆರ್ಥಿಕವಾಗಿ ಸಶಕ್ತಗೊಳ್ಳುವುದರ ಜತೆಗೆ ರೈತರಿಗೂ ಅತಿ ಹೆಚ್ಚಿನ ಮಟ್ಟದಲ್ಲಿ ಅನುಕೂಲವಾಗಲಿದೆ
–ಪಿ.ಬಿ.ಅಳಗವಾಡಿ ಮಾಜಿ ಅಧ್ಯಕ್ಷರು ಎಪಿಎಂಸಿ ಹೊಳೆಆಲೂರ- ರೋಣ.
ದೊಡ್ಡಬಸಪ್ಪ ನವಲಗುಂದ
ದೊಡ್ಡಬಸಪ್ಪ ನವಲಗುಂದ
ಇ–ಟೆಂಡರ್‌ ಖರೀದಿ ಆರಂಭಿಸಿ- ರೋಣ ಭಾಗದಲ್ಲಿ ಎಪಿಎಂಸಿ ಪ್ರಾರಂಭವಾಗಿ ಹಲವು ದಶಕಗಳು ಉರುಳಿದರು ಇ– ಟೆಂಡರ್ ಮೂಲಕ‌ ಖರೀದಿಯಾಗದಿರುವುದರಿಂದ ನಮ್ಮ ರೈತರು ದುಬಾರಿ ಬಾಡಿಗೆ ನೀಡಿ ಹಸಿದ ಹೊಟ್ಟೆಯಲ್ಲಿ ದೂರದ ಊರುಗಳು ಎಪಿಎಂಸಿಗಳಿಗೆ ಅಲೆಯುವಂತಾಗಿದೆ
–ದೊಡ್ಡಬಸಪ್ಪ ನವಲಗುಂದ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ರೈತ ಸಂಘ ರೋಣ ತಾಲ್ಲೂಕ ಘಟಕ.
ಮಾರುತಿ ಮಂಡಸೊಪ್ಪಿ
ಮಾರುತಿ ಮಂಡಸೊಪ್ಪಿ
ಮೂಲಸೌಕರ್ಯ ಕಲ್ಪಿಸಲಿ- ಹೊಳೆಆಲೂರ ಮತ್ತು ರೋಣ ಎಪಿಎಂಸಿಗಳು ಮೂಲಸೌಲಭ್ಯದಿಂದ ವಂಚಿತವಾಗಿದ್ದು ಎಪಿಎಂಸಿ ಕೇಂದ್ರ ಸ್ಥಾನವಾದ ಹೊಳೆಆಲೂರಲ್ಲಿ ಎಪಿಎಂಸಿ ಪ್ರಾಂಗಣದಲ್ಲಿ ಶೌಚಾಲಯವಿಲ್ಲ. ಇದ್ದ ಒಂದು ಉಪಾಹಾರ ಗೃಹ ಶಿಥಿಲಾವಸ್ಥೆ ತಲುಪಿದೆ. ವೇಬ್ರಿಜ್ ಅಳವಡಿಸಿ ಹಲವು ವರ್ಷಗಳೇ ಕಳೆದರೂ ಒಂದು ದಿನವೂ ಕೆಲಸ ನಿರ್ವಹಿಸಿಲ್ಲ. ಹೀಗಾಗಿ ರೈತರು ಎಪಿಎಂಸಿಯಿಂದ ದೂರ ಹೋಗುತ್ತಿದ್ದಾರೆ
–ಮಾರುತಿ ಮಂಡಸೊಪ್ಪಿ ಉಪಾಧ್ಯಕ್ಷರು ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಹೊಳೆಆಲೂರ.
ಪುನಃಶ್ಚೇತನಕ್ಕೆ ದಾರಿ- ನಾನು ಸದ್ಯ ಅಧಿಕಾರ ವಹಿಸಿಕೊಂಡು ನಾಲ್ಕು ತಿಂಗಳಾಗಿದೆ. ನಿನ್ನೆಯ ಬಜೆಟ್ ಎಪಿಎಂಸಿ ಪುನಃಶ್ಚೇತನಕ್ಕೆ ದಾರಿ ಮಾಡಿದ್ದು ಮುಂದಿನ ಎರಡ್ಮೂರು ತಿಂಗಳೊಳಗೆ ರೋಣ ಎಪಿಎಂಸಿಯಲ್ಲಿ ಇ– ಟೆಂಡರ್ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು
–ತಮ್ಮಣ್ಣ ಉನ್ನಿಭಾವಿ ಕಾರ್ಯದರ್ಶಿ ಎಪಿಎಂಸಿ ಹೊಳೆಆಲೂರ
ಹಳೆಯ ವೈಭವ ಮರಳಲಿ...
ಎಪಿಎಂಸಿ ಕಾಯ್ದೆಗೆ ತಂದಿದ್ದ ತಿದ್ದುಪಡಿಯಿಂದಾಗಿ ಕೃಷಿ ಉತ್ಪನ್ನ ಮಾರುಕಟ್ಟೆಗಳು ಕಳೆಗುಂದಿದ್ದವು. ಅವುಗಳಿಗೆ ಮರುಜೀವ ನೀಡುವ ನಿಟ್ಟಿನಲ್ಲಿ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್‌ ರಚಿಸಿದ್ದ ಪರಿಶೀಲನಾ ಸಮಿತಿಯ ವರದಿ ಸದನದಲ್ಲಿ ಮಂಡನೆಯಾಗಿದೆ. ಎಪಿಎಂಸಿಗಳನ್ನು ರೈತಸ್ನೇಹಿ ಆಗಿಸುವ ನಿಟ್ಟಿನಲ್ಲಿ ಸಮಿತಿಯು 27 ಶಿಫಾರಸುಗಳನ್ನು ಮಾಡಿದ್ದು ಅವು ಜಾರಿ ಆದರೆ ಎಪಿಎಂಸಿಗಳಲ್ಲಿ ಹಳೆಯ ವೈಭವ ಮರಳಲಿದೆ ಎನ್ನುತ್ತಾರೆ ಮಾರುತಿ ಮಂಡಸೊಪ್ಪಿ. ಎಪಿಎಂಸಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಸರ್ಕಾರ ಬೇಗ ಭರ್ತಿ ಮಾಡಬೇಕು. ಎಪಿಎಂಸಿಯ ಎಲ್ಲ ಚಟುವಟಿಕೆಗಳನ್ನು ಆನ್‌ಲೈನ್‌ ಮೂಲಕವೇ ನಡೆಸುವಂತಾಗಬೇಕು. ಎಪಿಎಂಸಿಗಳ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ನೆರವಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ರೈತರೇ ಎಪಿಎಂಸಿ ಒಳಗೆ ನೇರವಾಗಿ ಮಾರಾಟ– ಖರೀದಿ ಮಾಡಲು ಪ್ರೋತ್ಸಾಹಿಸಬೇಕು ಎಂಬುದು ಅವರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT