ಸಿಬ್ಬಂದಿ ಕೊರತೆ ನೀಗಿಸಿ- ಎಪಿಎಂಸಿಗಳಲ್ಲಿ ಮೊದಲಿನಿಂದಲೂ ಸಿಬ್ಬಂದಿ ಕೊರತೆ ಇದೆ ಹೀಗಾಗಿ ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಸರ್ಕಾರ ಸೂಕ್ತ ಸಿಬ್ಬಂದಿ ವ್ಯವಸ್ಥೆ ಮಾಡಿದಲ್ಲಿ ದಕ್ಷವಾಗಿ ಕಾರ್ಯನಿರ್ವಹಿಸಬಹುದು–ಬಿ.ಸಿ.ಸುಂಕದ ಮಾಜಿ ಅಧ್ಯಕ್ಷರು ಹೊಳೆಆಲೂರ-ರೋಣ ಎಪಿಎಂಸಿ
ಎಪಿಎಂಸಿ ರೈತಸ್ನೇಹಿಯಾಗಲಿ- ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಪ್ರಾಂಗಣದ ಹೊರಗೆ ಮಾರಲು ಕಾನೂನು ತಂದಿದ್ದು ಎಪಿಎಂಸಿಗಳಿಗೆ ಮಾರಕವಾಗಿದೆ. ಮೊದಲಿನ ಹಾಗೆ ಅಧಿಕಾರ ನೀಡಿದಲ್ಲಿ ಎಪಿಎಂಸಿಗಳು ಆರ್ಥಿಕವಾಗಿ ಸಶಕ್ತಗೊಳ್ಳುವುದರ ಜತೆಗೆ ರೈತರಿಗೂ ಅತಿ ಹೆಚ್ಚಿನ ಮಟ್ಟದಲ್ಲಿ ಅನುಕೂಲವಾಗಲಿದೆ–ಪಿ.ಬಿ.ಅಳಗವಾಡಿ ಮಾಜಿ ಅಧ್ಯಕ್ಷರು ಎಪಿಎಂಸಿ ಹೊಳೆಆಲೂರ- ರೋಣ.
ಇ–ಟೆಂಡರ್ ಖರೀದಿ ಆರಂಭಿಸಿ- ರೋಣ ಭಾಗದಲ್ಲಿ ಎಪಿಎಂಸಿ ಪ್ರಾರಂಭವಾಗಿ ಹಲವು ದಶಕಗಳು ಉರುಳಿದರು ಇ– ಟೆಂಡರ್ ಮೂಲಕ ಖರೀದಿಯಾಗದಿರುವುದರಿಂದ ನಮ್ಮ ರೈತರು ದುಬಾರಿ ಬಾಡಿಗೆ ನೀಡಿ ಹಸಿದ ಹೊಟ್ಟೆಯಲ್ಲಿ ದೂರದ ಊರುಗಳು ಎಪಿಎಂಸಿಗಳಿಗೆ ಅಲೆಯುವಂತಾಗಿದೆ–ದೊಡ್ಡಬಸಪ್ಪ ನವಲಗುಂದ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ರೈತ ಸಂಘ ರೋಣ ತಾಲ್ಲೂಕ ಘಟಕ.
ಮೂಲಸೌಕರ್ಯ ಕಲ್ಪಿಸಲಿ- ಹೊಳೆಆಲೂರ ಮತ್ತು ರೋಣ ಎಪಿಎಂಸಿಗಳು ಮೂಲಸೌಲಭ್ಯದಿಂದ ವಂಚಿತವಾಗಿದ್ದು ಎಪಿಎಂಸಿ ಕೇಂದ್ರ ಸ್ಥಾನವಾದ ಹೊಳೆಆಲೂರಲ್ಲಿ ಎಪಿಎಂಸಿ ಪ್ರಾಂಗಣದಲ್ಲಿ ಶೌಚಾಲಯವಿಲ್ಲ. ಇದ್ದ ಒಂದು ಉಪಾಹಾರ ಗೃಹ ಶಿಥಿಲಾವಸ್ಥೆ ತಲುಪಿದೆ. ವೇಬ್ರಿಜ್ ಅಳವಡಿಸಿ ಹಲವು ವರ್ಷಗಳೇ ಕಳೆದರೂ ಒಂದು ದಿನವೂ ಕೆಲಸ ನಿರ್ವಹಿಸಿಲ್ಲ. ಹೀಗಾಗಿ ರೈತರು ಎಪಿಎಂಸಿಯಿಂದ ದೂರ ಹೋಗುತ್ತಿದ್ದಾರೆ–ಮಾರುತಿ ಮಂಡಸೊಪ್ಪಿ ಉಪಾಧ್ಯಕ್ಷರು ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಹೊಳೆಆಲೂರ.
ಪುನಃಶ್ಚೇತನಕ್ಕೆ ದಾರಿ- ನಾನು ಸದ್ಯ ಅಧಿಕಾರ ವಹಿಸಿಕೊಂಡು ನಾಲ್ಕು ತಿಂಗಳಾಗಿದೆ. ನಿನ್ನೆಯ ಬಜೆಟ್ ಎಪಿಎಂಸಿ ಪುನಃಶ್ಚೇತನಕ್ಕೆ ದಾರಿ ಮಾಡಿದ್ದು ಮುಂದಿನ ಎರಡ್ಮೂರು ತಿಂಗಳೊಳಗೆ ರೋಣ ಎಪಿಎಂಸಿಯಲ್ಲಿ ಇ– ಟೆಂಡರ್ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು–ತಮ್ಮಣ್ಣ ಉನ್ನಿಭಾವಿ ಕಾರ್ಯದರ್ಶಿ ಎಪಿಎಂಸಿ ಹೊಳೆಆಲೂರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.