ಸೊಬರದಮಠ ಅವರು ತಮ್ಮ ಸ್ವಗ್ರಾಮ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ತೀರ್ಲಾಪೂರದಲ್ಲಿ ಇದ್ದಾಗ, ಬುಧವಾರ ರಾತ್ರಿ 9:36ಕ್ಕೆ ಅನಾಮಿಕ ಕರೆ ಬಂದಿದೆ. ಕರೆ ಸ್ವೀಕರಿಸಿದ ಸೊಬರಮಠ ಅವರಿಗೆ, ಕರೆ ಮಾಡಿದ ವ್ಯಕ್ತಿ, ‘ ಇನ್ನು ಎಂಟು ದಿನಗಳ ಒಳಗೆ ನಿಮ್ಮನ್ನು ಕೊಲೆ ಮಾಡುವುದಾಗಿ’ ಬೆದರಿಕೆ ಹಾಕಿದ್ದಾರೆ. ನೀನು ಎಲ್ಲಿ ಇದ್ದೀಯಾ, ನಾನೇ ಅಲ್ಲಿಗೆ ಬರುತ್ತೇನೆ’ ಎಂದಾಗ ಕರೆ ಸ್ಥಗಿತಗೊಳಿಸಿದ್ದಾರೆ. ಮರಳಿ ಅದೇ ಸಂಖ್ಯೆಗೆ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ. ಬೇರೊಂದು ಮೊಬೈಲ್ ಸಂಖ್ಯೆಯ ಮೂಲಕ ಕರೆ ಮಾಡಿದಾಗ, ಅದನ್ನು ಸ್ವೀಕರಿಸಿ,ನಾನು ನಿಮಗೆ ಸಿಗುವುದಿಲ್ಲ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾರೆ. ಮತ್ತೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ’ ಎಂದು ಸೊಬರದಮಠ ದೂರಿನಲ್ಲಿ ವಿವರಿಸಿದ್ದಾರೆ.