ಕುರ್ಲಗೇರಿ ಗ್ರಾಮವೂ ಜಲಾವೃತವಾಗಿದ್ದು, ಗುರುವಾರ ಬೆಳಿಗ್ಗೆ ಹೆಚ್ಚಿನ ನೀರು ಬಂದಿದ್ದರಿಂದ ಜನರು ಆಸರೆ ಮನೆಗಳಿಗೆ ತೆರಳಲು ಹಾಗೂ ಗಂಜಿ ಕೇಂದ್ರದತ್ತ ತೆರಳುತ್ತಿರುವುದು ಕಂಡು ಬಂತು. ಗ್ರಾಮದಲ್ಲಿನ ಎತ್ತು, ಚಕ್ಕಡಿಗಳನ್ನು, ವಿವಿಧ ಸಾಮಗ್ರಿಗಳನ್ನು ನೀರಿನಲ್ಲಿಯೇ ಸಾಗಿಸುತ್ತಿರುವುದು ಕಂಡು ಬಂತು. ಕೆಲವರನ್ನು ನರಗುಂದದ ಎಪಿಎಂಸಿ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಿದರೆ, ಇನ್ನು ಕೆಲವರನ್ನು ಆಸರೆ ಮನೆಗಳಿರುವ ಶಾಲೆಗೆ ಸ್ಥಳಾಂತರಿಸಲಾಗಿದೆ.