<p><strong>ಗದಗ:</strong> ವಾಮಾಚಾರ ಮಾಡಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಬಾಬಾ ಆಸಿಫ್ ಮೊಹಿಯುದ್ದೀನ್ ಜಾಗೀರ್ದಾರ (28) ಎಂಬುವರಿಗೆ ಜನರು ಥಳಿಸಿದ ಘಟನೆ ಸೋಮವಾರ ನಗರದ ಎಸ್.ಎಂ.ಕೃಷ್ಣನಗರದ ಆಶ್ರಯ ಕಾಲೊನಿಯಲ್ಲಿ ನಡೆದಿದೆ.</p>.<p>ಹಲವು ವರ್ಷಗಳಿಂದ ಗದಗ ನಗರದಲ್ಲಿರುವ ಹೆಂಡತಿ ಮನೆಯಲ್ಲಿಯೇ ತಂಗಿದ್ದ ಇವರು ಮೂಲತಃ ವಿಜಯಪುರದವರು ಎನ್ನಲಾಗಿದೆ.</p>.<p>ಶಿವಾನಂದ ಕುರಿ ಎಂಬುವವರು ತನ್ನ ಚಿಕ್ಕಪ್ಪನಿಗೆ ವಿಪರೀತ ಕೈ ನೋವು ಇದ್ದಿದ್ದರಿಂದ ಬಾಬಾ ಆಸಿಫ್ ಜಾಗೀರ್ದಾರ ಅವರ ಬಳಿಗೆ ಬಂದು ಕಷ್ಟ ಹೇಳಿಕೊಂಡಿದ್ದರು. ಆಗ ಅವರು ವಿವಿಧ ರೀತಿಯ ಪೂಜೆಗಳನ್ನು ಮಾಡಿಸಿದ್ದರು.</p>.<p>‘ಎಷ್ಟೇ ಪೂಜೆ ಪುನಸ್ಕಾರ ಮಾಡಿದರೂ ನೋವು ಕಡಿಮೆ ಆಗುತ್ತಿಲ್ಲ ಏಕೆ’ ಎಂದು ಬಾಬಾರನ್ನು ಶಿವಾನಂದ ಕುರಿ ಪ್ರಶ್ನಿಸಿದ್ದಾರೆ. ಆಗ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಬಾಬಾ ಆಸಿಫ್ ಹಿಂದೂ ದೇವರನ್ನು ಅವಹೇಳನ ಮಾಡಿದ್ದಾರೆ ಎನ್ನಲಾಗಿದ್ದು, ಇದರಿಂದ ರೊಚ್ಚಿಗೆದ್ದ ಜನರು ಬಾಬಾಗೆ ಹಿಡಿದು ಥಳಿಸಿದ್ದಾರೆ.</p>.<p>‘ಶಿವಾನಂದ ಕುರಿ ನೀಡಿದ ದೂರಿನಂತೆ ಬಾಬಾ ಆಸಿಫ್ ಜಾಗೀರ್ದಾರ ಅವರನ್ನು ಬಂಧಿಸಲಾಗಿದೆ. ವಿನಾಕಾರಣ ಹಿಡಿದು ಥಳಿಸಿದ್ದಾರೆ ಎಂದು ಆರೋಪಿಸಿ ಬಾಬಾ ಕಡೆಯವರೂ ಪ್ರತಿದೂರು ನೀಡಿದ್ದಾರೆ. ತನಿಖೆ ಮುಂದುವರಿದಿದೆ’ ಎಂದು ಗದಗ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ:</strong> ವಾಮಾಚಾರ ಮಾಡಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಬಾಬಾ ಆಸಿಫ್ ಮೊಹಿಯುದ್ದೀನ್ ಜಾಗೀರ್ದಾರ (28) ಎಂಬುವರಿಗೆ ಜನರು ಥಳಿಸಿದ ಘಟನೆ ಸೋಮವಾರ ನಗರದ ಎಸ್.ಎಂ.ಕೃಷ್ಣನಗರದ ಆಶ್ರಯ ಕಾಲೊನಿಯಲ್ಲಿ ನಡೆದಿದೆ.</p>.<p>ಹಲವು ವರ್ಷಗಳಿಂದ ಗದಗ ನಗರದಲ್ಲಿರುವ ಹೆಂಡತಿ ಮನೆಯಲ್ಲಿಯೇ ತಂಗಿದ್ದ ಇವರು ಮೂಲತಃ ವಿಜಯಪುರದವರು ಎನ್ನಲಾಗಿದೆ.</p>.<p>ಶಿವಾನಂದ ಕುರಿ ಎಂಬುವವರು ತನ್ನ ಚಿಕ್ಕಪ್ಪನಿಗೆ ವಿಪರೀತ ಕೈ ನೋವು ಇದ್ದಿದ್ದರಿಂದ ಬಾಬಾ ಆಸಿಫ್ ಜಾಗೀರ್ದಾರ ಅವರ ಬಳಿಗೆ ಬಂದು ಕಷ್ಟ ಹೇಳಿಕೊಂಡಿದ್ದರು. ಆಗ ಅವರು ವಿವಿಧ ರೀತಿಯ ಪೂಜೆಗಳನ್ನು ಮಾಡಿಸಿದ್ದರು.</p>.<p>‘ಎಷ್ಟೇ ಪೂಜೆ ಪುನಸ್ಕಾರ ಮಾಡಿದರೂ ನೋವು ಕಡಿಮೆ ಆಗುತ್ತಿಲ್ಲ ಏಕೆ’ ಎಂದು ಬಾಬಾರನ್ನು ಶಿವಾನಂದ ಕುರಿ ಪ್ರಶ್ನಿಸಿದ್ದಾರೆ. ಆಗ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಬಾಬಾ ಆಸಿಫ್ ಹಿಂದೂ ದೇವರನ್ನು ಅವಹೇಳನ ಮಾಡಿದ್ದಾರೆ ಎನ್ನಲಾಗಿದ್ದು, ಇದರಿಂದ ರೊಚ್ಚಿಗೆದ್ದ ಜನರು ಬಾಬಾಗೆ ಹಿಡಿದು ಥಳಿಸಿದ್ದಾರೆ.</p>.<p>‘ಶಿವಾನಂದ ಕುರಿ ನೀಡಿದ ದೂರಿನಂತೆ ಬಾಬಾ ಆಸಿಫ್ ಜಾಗೀರ್ದಾರ ಅವರನ್ನು ಬಂಧಿಸಲಾಗಿದೆ. ವಿನಾಕಾರಣ ಹಿಡಿದು ಥಳಿಸಿದ್ದಾರೆ ಎಂದು ಆರೋಪಿಸಿ ಬಾಬಾ ಕಡೆಯವರೂ ಪ್ರತಿದೂರು ನೀಡಿದ್ದಾರೆ. ತನಿಖೆ ಮುಂದುವರಿದಿದೆ’ ಎಂದು ಗದಗ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>