ಈ ವರ್ಷ ಪ್ರವಾಸೋದ್ಯಮ ಇಲಾಖೆ ಮತ್ತು ನಿಗಮಗಳ ವಿಭಾಗದ ಅಡಿಯಲ್ಲಿ ಗದಗ ಜಿಲ್ಲೆಯ ಲಕ್ಕುಂಡಿಯ ಬ್ರಹ್ಮಜಿನಾಲಯ ಮಾದರಿಯನ್ನು ಗದಗ ಜಿಲ್ಲೆಯ ಕಲಾವಿದರಾದ ರವಿ ಶಿಶ್ವಿನಹಳ್ಳಿ ಅವರ ಮುಂದಾಳತ್ವದಲ್ಲಿ ಫಕೀರೇಶ ಕುಳಗೇರಿ, ರಮಜಾನ ಮುತ್ತಣ್ಣವರ, ಜಿ.ಕೆ.ಬಡಿಗೇರ, ಶಶಿಧರ ಗರಗ, ವೆಂಕೋಬಾ ಕಗ್ಗಲ್ಲ, ರಮೇಶ ಗಾರವಾಡ, ರವಿ ಗಚ್ಚಿನಮನಿ, ಶಿವು, ವಿನಾಯಕ ಮೊದಲಾದವರು ತಮ್ಮ ಭಾವಗಳಿಗೆ ಗೆರೆಗಳ ಮೂಲಕ, ಬಣ್ಣಗಳ ಮೂಲಕ ಭಾವ ತುಂಬಿ ಸ್ತಬ್ದಚಿತ್ರ ನಿರ್ಮಿಸಿ, ಪ್ರಥಮ ಸ್ಥಾನ ಗೆದ್ದುಕೊಂಡಿದ್ದಾರೆ.