ಚೆಕ್ಡ್ಯಾಂ ಮತ್ತು ಇಂಗುಗುಂಡಿ ನಿರ್ಮಾಣದಿಂದ ಹಳ್ಳದಂಚಿನ ಕೃಷಿ ಜಮೀನುಗಳ ಕೊಳವೆಬಾವಿಗಳಲ್ಲಿ ವರ್ಷಪೂರ್ತಿ ಸಮೃದ್ಧ ನೀರಿನ ಇಳುವರಿ ಲಭಿಸಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ವಿಶ್ವವಿದ್ಯಾಲಯಗಳ ಸಹಕಾರದಲ್ಲಿ ಜಲಶಕ್ತಿ ಯೋಜನೆ ಜಾರಿಯಾಗಿದ್ದು, ಜಿಲ್ಲೆಯ ಸಾವಿರಾರರು ರೈತರಿಗೆ ನೀರ ನೆಮ್ಮದಿ ಲಭಿಸಿದೆ.