<p><strong>ನರಗುಂದ (ಗದಗ ಜಿಲ್ಲೆ):</strong> ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ತಾಲ್ಲೂಕಿನ ಹುಣಸಿಕಟ್ಟಿಯ ಮಸೀದಿಯಲ್ಲಿ ಹಿಂದೂ-ಮುಸ್ಲಿಂ ಯುವಕರು ಸೋಮವಾರ ರಾಮನ ಜಪ ಮಾಡಿದರು.</p>.<p>ಭಜನೆಗಳನ್ನೂ ಹಾಡಿದ ಯುವಕರು ಮಸೀದಿ ಎದುರು ‘ಜೈ ಶ್ರೀರಾಮ’ ಎಂದು ಬರೆದರು. ನಂತರ ಆವರಣದಲ್ಲಿ ವೇದೋಕ್ತ ಮಂತ್ರಪುಷ್ಪಾಂಜಲಿ ಮೂಲಕ ಧಾರ್ಮಿಕ ವಿಧಿವಿಧಾನ ಅನುಸರಿಸಿ ಭಾರತಮಾತೆಗೆ ಪೂಜಿಸಿದರು. ಮಂತ್ರಘೋಷದ ಮೂಲಕ ಅಭಿಷೇಕವನ್ನೂ ನೆರವೇರಿಸಿದರು.</p>.<p>‘ನಮ್ಮ ಗ್ರಾಮದ ಈ ಮಸೀದಿ ಹಿಂದಿನಿಂದಲೂ ಸೌಹಾರ್ದಕ್ಕೆ ಹೆಸರಾಗಿದೆ. ಹಿಂದೂ ಮತ್ತು ಮುಸ್ಲಿಂನವರು ಎಲ್ಲರೂ ಸೇರಿ ಎರಡೂ ಧರ್ಮಗಳ ಹಬ್ಬ ಆಚರಿಸುತ್ತೇವೆ. ರಾಮೋತ್ಸವ ಸಂದರ್ಭದಲ್ಲಿ ಇಲ್ಲಿ ಪೂಜಿಸಿದ್ದೇವೆ. ನಮಗೆ ರಾಮ, ಅಲ್ಲಾ ಒಂದೇ. ಈ ಊರಿನಲ್ಲಿ ನಾವು ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದೇವೆ’ ಎಂದು ಗ್ರಾಮದ ರುಸ್ತುಂ ಹೊಸಳ್ಳಿ ತಿಳಿಸಿದರು.</p>.<p>ಗ್ರಾಮದ ಷಣ್ಮುಖಗೌಡ ಪಾಟೀಲ, ಈಶ್ವರಯ್ಯ ಹಿರೇಮಠ, ತೋಟಯ್ಯ ಹಿರೇಮಠ, ಬಸಪ್ಪ ಮುಳ್ಳೂರ , ಬಸನಗೌಡ ಹುಡೇದಮನಿ ಅಡಿವಯ್ಯ ಮಠಪತಿ, ಯುವಕರಾದ ರಾಜೇಸಾಬ್ ಹೊಸಳ್ಳಿ, ಪ್ರದೀಪಗೌಡ ಪಾಟೀಲ, ಪಡಿಯಪ್ಪಗೌಡ ದ್ಯಾವನಗೌಡ್ರ, ಪ್ರಭು ದ್ಯಾವನಗೌಡ್ರ ಚಂದ್ರಶೇಖರಗೌಡ ಪಾಟೀಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಗುಂದ (ಗದಗ ಜಿಲ್ಲೆ):</strong> ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ತಾಲ್ಲೂಕಿನ ಹುಣಸಿಕಟ್ಟಿಯ ಮಸೀದಿಯಲ್ಲಿ ಹಿಂದೂ-ಮುಸ್ಲಿಂ ಯುವಕರು ಸೋಮವಾರ ರಾಮನ ಜಪ ಮಾಡಿದರು.</p>.<p>ಭಜನೆಗಳನ್ನೂ ಹಾಡಿದ ಯುವಕರು ಮಸೀದಿ ಎದುರು ‘ಜೈ ಶ್ರೀರಾಮ’ ಎಂದು ಬರೆದರು. ನಂತರ ಆವರಣದಲ್ಲಿ ವೇದೋಕ್ತ ಮಂತ್ರಪುಷ್ಪಾಂಜಲಿ ಮೂಲಕ ಧಾರ್ಮಿಕ ವಿಧಿವಿಧಾನ ಅನುಸರಿಸಿ ಭಾರತಮಾತೆಗೆ ಪೂಜಿಸಿದರು. ಮಂತ್ರಘೋಷದ ಮೂಲಕ ಅಭಿಷೇಕವನ್ನೂ ನೆರವೇರಿಸಿದರು.</p>.<p>‘ನಮ್ಮ ಗ್ರಾಮದ ಈ ಮಸೀದಿ ಹಿಂದಿನಿಂದಲೂ ಸೌಹಾರ್ದಕ್ಕೆ ಹೆಸರಾಗಿದೆ. ಹಿಂದೂ ಮತ್ತು ಮುಸ್ಲಿಂನವರು ಎಲ್ಲರೂ ಸೇರಿ ಎರಡೂ ಧರ್ಮಗಳ ಹಬ್ಬ ಆಚರಿಸುತ್ತೇವೆ. ರಾಮೋತ್ಸವ ಸಂದರ್ಭದಲ್ಲಿ ಇಲ್ಲಿ ಪೂಜಿಸಿದ್ದೇವೆ. ನಮಗೆ ರಾಮ, ಅಲ್ಲಾ ಒಂದೇ. ಈ ಊರಿನಲ್ಲಿ ನಾವು ಅಣ್ಣ-ತಮ್ಮಂದಿರಂತೆ ಬದುಕುತ್ತಿದ್ದೇವೆ’ ಎಂದು ಗ್ರಾಮದ ರುಸ್ತುಂ ಹೊಸಳ್ಳಿ ತಿಳಿಸಿದರು.</p>.<p>ಗ್ರಾಮದ ಷಣ್ಮುಖಗೌಡ ಪಾಟೀಲ, ಈಶ್ವರಯ್ಯ ಹಿರೇಮಠ, ತೋಟಯ್ಯ ಹಿರೇಮಠ, ಬಸಪ್ಪ ಮುಳ್ಳೂರ , ಬಸನಗೌಡ ಹುಡೇದಮನಿ ಅಡಿವಯ್ಯ ಮಠಪತಿ, ಯುವಕರಾದ ರಾಜೇಸಾಬ್ ಹೊಸಳ್ಳಿ, ಪ್ರದೀಪಗೌಡ ಪಾಟೀಲ, ಪಡಿಯಪ್ಪಗೌಡ ದ್ಯಾವನಗೌಡ್ರ, ಪ್ರಭು ದ್ಯಾವನಗೌಡ್ರ ಚಂದ್ರಶೇಖರಗೌಡ ಪಾಟೀಲ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>