ಗ್ರಾಮದಲ್ಲಿ ಅಂದಾಜು 50ಕ್ಕೂ ಹೆಚ್ಚು ಹರಿಜನ ಕುಟುಂಬಗಳು ಇದ್ದು, ಮಂಗಳವಾರ ಕೆಲ ಯುವಕರು ಅಂಗಡಿಗೆ ಬಂದು ಕೂದಲು ಕತ್ತರಿಸಲು ಒತ್ತಾಯಿಸಿದರು. ಆದರೆ, ಅಂಗಡಿಯವರು ನಿರಾಕರಿಸಿದರು ಎನ್ನಲಾಗಿದೆ. ಇದರಿಂದ ಯುವಕರು ಮತ್ತು ಅಂಗಡಿಯವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ‘ಊರಿನ ದೈವದವರು ಒಪ್ಪಿಗೆ ಕೊಟ್ಟರೆ ಮಾತ್ರ ನಿಮಗೆ ಕಟಿಂಗ್ ಮಾಡುತ್ತೇನೆ’ ಎಂದು ಅಂಗಡಿ ಮಾಲೀಕ ಹೇಳಿದರು. ಇದರಿಂದ ಆಕ್ರೋಶಗೊಂಡ ಯುವಕರು ಕೇರಿಯ ನಿವಾಸಿಗಳ ಕೂದಲು ಕತ್ತರಿಸಲು ನಿರಾಕರಿಸಲಾಗುತ್ತಿದ್ದು, ಗ್ರಾಮದಲ್ಲಿ ಅಸ್ಪೃಶ್ಯತೆ ಈಗಲೂ ಜೀವಂತವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.