<p><strong>ಗದಗ: </strong>‘ವಿವಿಧ ಭಾಷೆಗಳಲ್ಲಿ ಹಾಡುಗಳನ್ನು ಹಾಡಿ, ಕೋಟ್ಯಂತರ ಜನರ ಪ್ರೀತಿ ಸಂಪಾದಿಸಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಸಂಗೀತ ಕ್ಷೇತ್ರದ ದಿಗ್ಗಜ’ ಎಂದು ಪ್ರೊ.ಗಂಗಾಧರ ಹಿಡಿಕಿಮಠ ಹೇಳಿದರು.</p>.<p>ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ನಡೆದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸ್ವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಗಾನಯೋಗಿ ಪಂಚಾಕ್ಷರ ಗವಾಯಿ’ ಚಿತ್ರದಲ್ಲಿ ‘ಗಾನವಿದ್ಯಾ ಬಲು ಕಠಿಣ ಹೈ’ ಎಂಬ ಹಾಡನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಾಡಿ ಸಂಗೀತ ಮಾಂತ್ರಿಕ ಎನಿಸಿಕೊಂಡಿದ್ದರು ಎಂದು ಹೇಳಿದರು.</p>.<p>ಡಾ. ಮೃತ್ಯುಂಜಯ ಶೆಟ್ಟರ್ ಮಾತನಾಡಿ, ‘ಮಧುರ ಕಂಠದ ಗಾಯಕ ಎಸ್ಪಿಬಿ ಅವರು ಯಾವುದೇ ಭಾಷೆಯಲ್ಲಿ ಹಾಡಿದರೂ ಭಾವ ತುಂಬಿ ಹಾಡುತ್ತಿದ್ದರು. ಆ ಮೂಲಕ ಹಾಡಿಗೆ ಅದ್ಭುತ ಶಕ್ತಿ ತುಂಬುತ್ತಿದ್ದರು. ಅವರ ನಿಧನದಿಂದ ಸಂಗೀತಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ’ ಎಂದು ಹೇಳಿದರು.</p>.<p>ಡಾ. ಸುಮಿತ್ರಾ ಹಿರೇಮಠ್, ಜಿ.ಜಿ.ಸುತಾರ್, ಎಸ್.ಗಡ್ಡದಮಠ, ಎಂ.ಎಸ್.ಮಠದ, ವೈ.ಆರ್.ಮೂಲಿಮನಿ, ಹನುಮಂತ ಕೊಡಗಾನೂರ, ಶರಣಪ್ಪ ಕಲಬುರ್ಗಿ, ಪಟ್ಟದಕಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ: </strong>‘ವಿವಿಧ ಭಾಷೆಗಳಲ್ಲಿ ಹಾಡುಗಳನ್ನು ಹಾಡಿ, ಕೋಟ್ಯಂತರ ಜನರ ಪ್ರೀತಿ ಸಂಪಾದಿಸಿದ್ದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಸಂಗೀತ ಕ್ಷೇತ್ರದ ದಿಗ್ಗಜ’ ಎಂದು ಪ್ರೊ.ಗಂಗಾಧರ ಹಿಡಿಕಿಮಠ ಹೇಳಿದರು.</p>.<p>ಪಂಡಿತ್ ಪಂಚಾಕ್ಷರ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದಲ್ಲಿ ನಡೆದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಸ್ವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಗಾನಯೋಗಿ ಪಂಚಾಕ್ಷರ ಗವಾಯಿ’ ಚಿತ್ರದಲ್ಲಿ ‘ಗಾನವಿದ್ಯಾ ಬಲು ಕಠಿಣ ಹೈ’ ಎಂಬ ಹಾಡನ್ನು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಾಡಿ ಸಂಗೀತ ಮಾಂತ್ರಿಕ ಎನಿಸಿಕೊಂಡಿದ್ದರು ಎಂದು ಹೇಳಿದರು.</p>.<p>ಡಾ. ಮೃತ್ಯುಂಜಯ ಶೆಟ್ಟರ್ ಮಾತನಾಡಿ, ‘ಮಧುರ ಕಂಠದ ಗಾಯಕ ಎಸ್ಪಿಬಿ ಅವರು ಯಾವುದೇ ಭಾಷೆಯಲ್ಲಿ ಹಾಡಿದರೂ ಭಾವ ತುಂಬಿ ಹಾಡುತ್ತಿದ್ದರು. ಆ ಮೂಲಕ ಹಾಡಿಗೆ ಅದ್ಭುತ ಶಕ್ತಿ ತುಂಬುತ್ತಿದ್ದರು. ಅವರ ನಿಧನದಿಂದ ಸಂಗೀತಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ’ ಎಂದು ಹೇಳಿದರು.</p>.<p>ಡಾ. ಸುಮಿತ್ರಾ ಹಿರೇಮಠ್, ಜಿ.ಜಿ.ಸುತಾರ್, ಎಸ್.ಗಡ್ಡದಮಠ, ಎಂ.ಎಸ್.ಮಠದ, ವೈ.ಆರ್.ಮೂಲಿಮನಿ, ಹನುಮಂತ ಕೊಡಗಾನೂರ, ಶರಣಪ್ಪ ಕಲಬುರ್ಗಿ, ಪಟ್ಟದಕಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>