‘ಹಿಂದಿನ ತಲೆಮಾರಿನ ಮಹಿಳೆಯರು ಅನುಭವಿಸಿದ ತೊಂದರೆ, ಕಂಡು ಕೇಳಿದ ಅನುಭವವನ್ನು ಒಟ್ಟುಗೂಡಿಸಿ ಕಾದಂಬರಿ ರಚಿಸಿ, ಅಭಿಯಾನಕ್ಕೆ ಮುಂದಾಗಿದ್ದೇನೆ. ಹಿಂದೆ ಶಾಲಾ, ಕಾಲೇಜುಗಳಲ್ಲಿ ಸ್ಯಾನಿಟರಿ ಪ್ಯಾಡ್ ಉಚಿತವಾಗಿ ವಿತರಣೆಯಾಗುತ್ತಿತ್ತು. ಅದು ಮತ್ತೇ ಆರಂಭವಾಗಬೇಕು. ಜತೆಗೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಉಚಿತವಾಗಿ ಅಥವಾ ನಾಣ್ಯ ಹಾಕಿ ತಾವೇ ನೇರವಾಗಿ ತೆಗೆದುಕೊಳ್ಳುವ ವ್ಯವಸ್ಥೆ ಕಲ್ಪಿಸುವಂತಾಗಬೇಕು. ಈ ಕುರಿತಾಗಿ ಅಭಿಯಾನ ರಾಜ್ಯದ ತುಂಬ ನಡೆಯುತ್ತಿದೆ. ಇದಕ್ಕೆ ಸರ್ಕಾರ, ಸಂಘ ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬರೂ ಸ್ಪಂದಿಸುವುದು ಅಗತ್ಯ’ ಎಂದು ‘ಸ್ಯಾನಿಟರಿ ಪ್ಯಾಡ್’ ಕಾದಂಬರಿ ಲೇಖಕ ಕಂಚುಗಾರನಹಳ್ಳಿ ಸತೀಶ ತಿಳಿಸಿದ್ದಾರೆ.