<p><strong>ಲಕ್ಷ್ಮೇಶ್ವರ (ಗದಗ ಜಿಲ್ಲೆ):</strong> ಪಟ್ಟಣದ ಪುರಸಭೆ ಎದುರು ಸಫಾಯಿ ಕರ್ಮಚಾರಿ ಸುರೇಶ ಬಸವಾನಾಯ್ಕರ್ ಮೈ ಮೇಲೆ ಮಲ ಸುರಿದುಕೊಂಡು ಬುಧವಾರ ಪ್ರತಿಭಟನೆ ನಡೆಸಿದರು.</p><p>‘ನಾನು ಹಿಂದೆ ಪುರಸಭೆಯಲ್ಲಿ ಸಫಾಯಿ ಕರ್ಮಚಾರಿ ಆಗಿ ಕೆಲಸ ಮಾಡಿದ್ದರೂ ಕಾಯಂ ನೌಕರಿ ಸಿಗಲಿಲ್ಲ. ಮಗನಿಗಾದರೂ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲು ಕೋರಿರುವೆ. ಅದಕ್ಕೂ ಸ್ಪಂದನೆ ಇಲ್ಲ. ಅದಕ್ಕೆ ಹೀಗೆ ಪ್ರತಿಭಟಿದ್ದೇನೆ’ ಎಂದು ಸುರೇಶ ತಿಳಿಸಿದರು.</p><p>‘ಪುರಸಭೆ ಆಡಳಿತ ಮಂಡಳಿಯು ಕೆಲ ತಿಂಗಳ ಗುತ್ತಿಗೆ ಆಧಾರದಲ್ಲಿ 10ಕ್ಕೂ ಹೆಚ್ಚು ಜನರ ನೇಮಿಸಿಕೊಂಡಿದೆ. ಈಗಲಾದರೂ ಮಗನಿಗೆ ನೇಮಿಸಿಕೊಳ್ಳಬೇಕು’ ಎಂದರು. ಸ್ಥಳಕ್ಕೆ ಬಂದ ಪೊಲೀಸರು ಮನವೊಲಿಸಿದ ಬಳಿಕ ಸುರೇಶ ಅವರು ಪ್ರತಿಭಟನೆ ಕೈಬಿಟ್ಟರು.</p><p>‘ಪ್ರತಿಭಟಿಸಿದ ವ್ಯಕ್ತಿಗೂ, ಪುರಸಭೆಗೂ ಸಂಬಂಧ ಇಲ್ಲ. ಸುರೇಶ ಹಿಂದೆ ಪುರಸಭೆಯಲ್ಲಿ ಸಫಾಯಿ ಕರ್ಮಚಾರಿಯಾಗಿ ಹೊರಗುತ್ತಿಗೆಯಡಿ ಕೆಲಸ ಮಾಡಿದ್ದಾಗಿ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲ. ಸದ್ಯ ಕಾರ್ಮಿಕರನ್ನು ಗುತ್ತಿಗೆದಾರರು ನೇಮಿಸುತ್ತಾರೆ ಹೊರತು ಪುರಸಭೆಯಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಕ್ಷ್ಮೇಶ್ವರ (ಗದಗ ಜಿಲ್ಲೆ):</strong> ಪಟ್ಟಣದ ಪುರಸಭೆ ಎದುರು ಸಫಾಯಿ ಕರ್ಮಚಾರಿ ಸುರೇಶ ಬಸವಾನಾಯ್ಕರ್ ಮೈ ಮೇಲೆ ಮಲ ಸುರಿದುಕೊಂಡು ಬುಧವಾರ ಪ್ರತಿಭಟನೆ ನಡೆಸಿದರು.</p><p>‘ನಾನು ಹಿಂದೆ ಪುರಸಭೆಯಲ್ಲಿ ಸಫಾಯಿ ಕರ್ಮಚಾರಿ ಆಗಿ ಕೆಲಸ ಮಾಡಿದ್ದರೂ ಕಾಯಂ ನೌಕರಿ ಸಿಗಲಿಲ್ಲ. ಮಗನಿಗಾದರೂ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲು ಕೋರಿರುವೆ. ಅದಕ್ಕೂ ಸ್ಪಂದನೆ ಇಲ್ಲ. ಅದಕ್ಕೆ ಹೀಗೆ ಪ್ರತಿಭಟಿದ್ದೇನೆ’ ಎಂದು ಸುರೇಶ ತಿಳಿಸಿದರು.</p><p>‘ಪುರಸಭೆ ಆಡಳಿತ ಮಂಡಳಿಯು ಕೆಲ ತಿಂಗಳ ಗುತ್ತಿಗೆ ಆಧಾರದಲ್ಲಿ 10ಕ್ಕೂ ಹೆಚ್ಚು ಜನರ ನೇಮಿಸಿಕೊಂಡಿದೆ. ಈಗಲಾದರೂ ಮಗನಿಗೆ ನೇಮಿಸಿಕೊಳ್ಳಬೇಕು’ ಎಂದರು. ಸ್ಥಳಕ್ಕೆ ಬಂದ ಪೊಲೀಸರು ಮನವೊಲಿಸಿದ ಬಳಿಕ ಸುರೇಶ ಅವರು ಪ್ರತಿಭಟನೆ ಕೈಬಿಟ್ಟರು.</p><p>‘ಪ್ರತಿಭಟಿಸಿದ ವ್ಯಕ್ತಿಗೂ, ಪುರಸಭೆಗೂ ಸಂಬಂಧ ಇಲ್ಲ. ಸುರೇಶ ಹಿಂದೆ ಪುರಸಭೆಯಲ್ಲಿ ಸಫಾಯಿ ಕರ್ಮಚಾರಿಯಾಗಿ ಹೊರಗುತ್ತಿಗೆಯಡಿ ಕೆಲಸ ಮಾಡಿದ್ದಾಗಿ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲ. ಸದ್ಯ ಕಾರ್ಮಿಕರನ್ನು ಗುತ್ತಿಗೆದಾರರು ನೇಮಿಸುತ್ತಾರೆ ಹೊರತು ಪುರಸಭೆಯಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>