<p><strong>ಶಿರಹಟ್ಟಿ:</strong> ವರದಕ್ಷಿಣೆ ಹಣ ತೆಗೆದುಕೊಂಡು ಬಾ ಎಂದು ಕಿರುಕುಳ ಕೊಟ್ಟು ಕೊಲೆ ಮಾಡಿ ಮನೆಯ ಮುಂದಿನ ನೀರಿನ ಟ್ಯಾಂಕಿನಲ್ಲಿ ಹಾಕಿದ ದುರ್ಘಟನೆ ತಾಲ್ಲೂಕಿನ ಮಜ್ಜೂರು ತಾಂಡಾದಲ್ಲಿ ನಡೆದಿದೆ.</p>.<p>ಮಜ್ಜೂರು ತಾಂಡಾದ ನಿವಾಸಿ ಪ್ರಿಯಾಂಕ ಮಹಾಂತೇಶ ಲಮಾಣಿ (22) ಕೊಲೆಯಾದ ದುರ್ದೈವಿ. 2025ರ ಮೇ 10ರಂದು ಪ್ರಿಯಾಂಕ ಹಾಗೂ ಮಾಂತೇಶ ಅವರ ಮದುವೆಯಾಗಿತ್ತು. ವರದಕ್ಷಿಣೆಯಾಗಿ ₹ 3 ಲಕ್ಷ ಹಣ, ₹ 2 ಲಕ್ಷ ಬಾಂಡೆ ಸಾಮಾನು ₹25 ಸಾವಿರ ಕಿಮ್ಮತ್ತಿನ ಬಟ್ಟೆ ಕೊಟ್ಟು ಒಟ್ಟು ₹10 ಲಕ್ಷ ಖರ್ಚು ಮಾಡಿ ಮದುವೆ ಮಾಡಲಾಗಿತ್ತು.</p>.<p>ಇನ್ನೂ ₹ 2 ಲಕ್ಷ ಹಣ ತರುವುದಾಗಿ ಒತ್ತಾಯಿಸಿ ಆರೋಪಿಗಳಾದ ಗಂಡ ಮಾಂತೇಶ, ನಾದಿನಿ ಸೋನವ್ವ, ಮಾವ ಹನುಮಂತಪ್ಪ, ಅತ್ತೆ ಲಕ್ಕವ್ವ ಸೇರಿ ಒಳಸಂಚು ರೂಪಿಸಿ ಪ್ರಿಯಾಂಕಳಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದಾರೆ.</p>.<p>ಅ.14ರ ಮಂಗಳವಾರ ರಾತ್ರಿ ಯಾವುದೇ ಸಮಯದಲ್ಲಿ ಪ್ರಿಯಾಂಕಳನ್ನು ಕೊಲೆ ಮಾಡಿ ಗ್ರಾಮದ ನಾರಾಯಣರವರ ಮನೆಯ ನೀರಿನ ತೊಟ್ಟಿಯಲ್ಲಿ ಹಾಕಿದ್ದಾರೆ ಎಂದು ಪ್ರಿಯಾಂಕ ತಂದೆ ಕೃಷ್ಣಾನಾಯಕ್ ದೂರು ನೀಡಿದ್ದಾರೆ.</p>.<p>ಘಟನಾ ಸ್ಥಳಕ್ಕೆ ಎಸ್ಪಿ ರೋಹನ್ ಜಗದೀಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಾಖಲಾದ ಪ್ರಕರಣದನುಸಾರ ಪತಿ ಮಾಂತೇಶ, ಮಾವ ಹನುಮಂತಪ್ಪನನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಹಟ್ಟಿ:</strong> ವರದಕ್ಷಿಣೆ ಹಣ ತೆಗೆದುಕೊಂಡು ಬಾ ಎಂದು ಕಿರುಕುಳ ಕೊಟ್ಟು ಕೊಲೆ ಮಾಡಿ ಮನೆಯ ಮುಂದಿನ ನೀರಿನ ಟ್ಯಾಂಕಿನಲ್ಲಿ ಹಾಕಿದ ದುರ್ಘಟನೆ ತಾಲ್ಲೂಕಿನ ಮಜ್ಜೂರು ತಾಂಡಾದಲ್ಲಿ ನಡೆದಿದೆ.</p>.<p>ಮಜ್ಜೂರು ತಾಂಡಾದ ನಿವಾಸಿ ಪ್ರಿಯಾಂಕ ಮಹಾಂತೇಶ ಲಮಾಣಿ (22) ಕೊಲೆಯಾದ ದುರ್ದೈವಿ. 2025ರ ಮೇ 10ರಂದು ಪ್ರಿಯಾಂಕ ಹಾಗೂ ಮಾಂತೇಶ ಅವರ ಮದುವೆಯಾಗಿತ್ತು. ವರದಕ್ಷಿಣೆಯಾಗಿ ₹ 3 ಲಕ್ಷ ಹಣ, ₹ 2 ಲಕ್ಷ ಬಾಂಡೆ ಸಾಮಾನು ₹25 ಸಾವಿರ ಕಿಮ್ಮತ್ತಿನ ಬಟ್ಟೆ ಕೊಟ್ಟು ಒಟ್ಟು ₹10 ಲಕ್ಷ ಖರ್ಚು ಮಾಡಿ ಮದುವೆ ಮಾಡಲಾಗಿತ್ತು.</p>.<p>ಇನ್ನೂ ₹ 2 ಲಕ್ಷ ಹಣ ತರುವುದಾಗಿ ಒತ್ತಾಯಿಸಿ ಆರೋಪಿಗಳಾದ ಗಂಡ ಮಾಂತೇಶ, ನಾದಿನಿ ಸೋನವ್ವ, ಮಾವ ಹನುಮಂತಪ್ಪ, ಅತ್ತೆ ಲಕ್ಕವ್ವ ಸೇರಿ ಒಳಸಂಚು ರೂಪಿಸಿ ಪ್ರಿಯಾಂಕಳಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದಾರೆ.</p>.<p>ಅ.14ರ ಮಂಗಳವಾರ ರಾತ್ರಿ ಯಾವುದೇ ಸಮಯದಲ್ಲಿ ಪ್ರಿಯಾಂಕಳನ್ನು ಕೊಲೆ ಮಾಡಿ ಗ್ರಾಮದ ನಾರಾಯಣರವರ ಮನೆಯ ನೀರಿನ ತೊಟ್ಟಿಯಲ್ಲಿ ಹಾಕಿದ್ದಾರೆ ಎಂದು ಪ್ರಿಯಾಂಕ ತಂದೆ ಕೃಷ್ಣಾನಾಯಕ್ ದೂರು ನೀಡಿದ್ದಾರೆ.</p>.<p>ಘಟನಾ ಸ್ಥಳಕ್ಕೆ ಎಸ್ಪಿ ರೋಹನ್ ಜಗದೀಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಾಖಲಾದ ಪ್ರಕರಣದನುಸಾರ ಪತಿ ಮಾಂತೇಶ, ಮಾವ ಹನುಮಂತಪ್ಪನನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>