‘ಶ್ರೀರಾಮ ಸೇನೆಯವರು ಮೂತ್ರ ವಿಸರ್ಜಿಸಿ ಪ್ರತಿಭಟಿಸಿ ಪೌರಕಾರ್ಮಿಕರನ್ನು, ಅಸಭ್ಯ ವರ್ತನೆ ತೋರಿ ದಲಿತರನ್ನು ಅವಮಾನಿಸಿದ್ದಾರೆ. ಹುಯ್ದು ಹೋಗಿರುವ ಮೂತ್ರವನ್ನು ಸ್ವಚ್ಛಗೊಳಿಸುವುದು ಇಲ್ಲಿನ ಪೌರಕಾರ್ಮಿಕರೇ ಹೊರತು; ಅಧಿಕಾರಿ ವರ್ಗ ಅಲ್ಲ. ಈ ರೀತಿಯ ಉದ್ಧಟತನ ತೋರಿದ ಸಂಘಟನೆಯ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಿ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮುಖಂಡರಾದ ಶರೀಫ ಬಿಳೇಯಲಿ, ಮುತ್ತು ಬಿಳೇಯಲಿ ಒತ್ತಾಯಿಸಿದ್ದಾರೆ.