‘ತಂದೆ ತಾಯಿ ಕೂಲಿ ಕೆಲಸ ಮಾಡುತ್ತಾ ಕಡು ಬಡತನದಲ್ಲಿ ಜೀವನ ನಡೆಸುತ್ತಿರುವಾಗ ಅನಿವಾರ್ಯವಾಗಿ ಕುಟುಂಬ ನಿರ್ವಹಣೆಗೋಸ್ಕರ ನಾನು ಸಹ ಶಾಲೆ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದೆ. ಆಗ ಕಾಲಕಾಲೇಶ್ವರ ಗ್ರಾಮದ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಗುರುಗಳಾದ ಎ.ಎಸ್.ಧೋನಿ, ಬಿ.ಎನ್.ಜಾಲಿಹಾಳ, ಉಮೇಶ್ ನಾಯ್ಕ, ನಾಗಶೆಟ್ಟಿ ಕುಲಕರ್ಣಿ, ಸಿದ್ದಲಿಂಗಪ್ಪ ಅಪರಪ್ಪನವರ, ಸಿ.ಎಸ್.ನದಾಫ್ ಇವರು ಗುಡ್ಡದ ಮೇಲಿನ ಭೈರಾಪುರ ತಾಂಡಾಕ್ಕೆ 17 ಕಿ.ಮೀ. ನಡೆದುಕೊಂಡು ಬಂದು ಮರಳಿ ಶಾಲೆಗೆ ಬರುವಂತೆ ಸ್ಫೂರ್ತಿ ತುಂಬಿದರು. ನನ್ನ ಪಾಲಕರನ್ನು ಮನವೊಲಿಸಿದರು’.