<p><strong>ನರಗುಂದ:</strong> ಶರಣಬಸವೇಶ್ವರರ ಪುರಾಣ ಎಷ್ಟು ಕೇಳಿದರೂ, ಮತ್ತೇ ಮತ್ತೇ ಕೇಳಬೇಕೆನಿಸುತ್ತದೆ. ಶರಣಬಸವೇಶ್ವರರ ಪವಾಡಗಳು ವರ್ಣನಾತೀತ ಎಂದು ಹರ್ಲಾಪುರದ ಕೊಟ್ಟೂರೇಶ್ವರ ಮಠದ ಅಭಿನವ ಕೊಟ್ಟೂರೇಶ್ವರ ಶ್ರೀಗಳು ಹೇಳಿದರು.</p>.<p>ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ಚರಮೂರ್ತೇಶ್ವರ ಮಠದ ಶಿವಾನಂದ ದೇವರ ಚರಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಕಲಬುರ್ಗಿ ಶರಣಬಸವೇಶ್ವರರ ಪುರಾಣದ ಮಂಗಳವಾರ ರಾತ್ರಿ ರಾಶಿ ಮಾಡುವ ಹಾಗೂ ಹಂತಿಪದಗಳ ಸಂಭ್ರಮದಲ್ಲಿ ಮಾತನಾಡಿದರು.</p>.<p>ಶರಣಬಸವೇಶ್ವರರ ಪ್ರತಿಯೊಂದು ಪವಾಡವು ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರವಾಗಿದೆ. ಅವರ ಆದರ್ಶಮಯ ಜೀವನ ಎಲ್ಲರೂ ಅರಿಯಬೇಕು. ಕೃಷಿಗೆ, ದಿನಕ್ಕೆ ಶರಣಬಸವೇಶ್ವರರು ನೀಡಿದ ಆದ್ಯತೆ ಎಲ್ಲಿಯೂ ಕಾಣಲಾರೆವು. ಇಂದು ಸದ್ಗತಿ ಹೊಂದಲು ಶರಣರ ಜೀವನ ಚರಿತ್ರೆ ಕೇಳಬೇಕು ಎಂದು ಸಲಹೆ ನೀಡಿದರು.</p>.<h2><strong>ಹಂತಿಪದಗಳ ಸಂಭ್ರಮ:</strong></h2><h4>ಪುರಾಣದ ಸನ್ನಿವೇಶದಲ್ಲಿ ಧಾನ್ಯಗಳನ್ನು ರಾಶಿ ಮಾಡುವುದು ಸಂಭ್ರಮ. ಅದನ್ನು ಪುರಾಣದ ವೇದಿಕೆಯಲ್ಲಿ ಎತ್ತುಗಳನ್ನು ಕರೆತಂದು, ಮೇಟಿ ನಡೆಸಿ ರಾಶಿ ಮಾಡಿ ಭಕ್ತರಿಗೆ ಜೋಳವನ್ನು ಹಂಚಿದ್ದು ವಿಶೇಷವಾಗಿ ಜನಮನ ಸೆಳೆಯಿತು.</h4>.<p>ಈ ಸಂದರ್ಭದಲ್ಲಿ ವಿರಕ್ತಮಠದ ಶಿವಕುಮಾರ ಶಿವಾಚಾರ್ಯರು, ಶಿವಾನಂದ ದೇವರು ಹಾಗೂ ವಿರಕ್ತಮಠದ ಭಕ್ತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಗುಂದ:</strong> ಶರಣಬಸವೇಶ್ವರರ ಪುರಾಣ ಎಷ್ಟು ಕೇಳಿದರೂ, ಮತ್ತೇ ಮತ್ತೇ ಕೇಳಬೇಕೆನಿಸುತ್ತದೆ. ಶರಣಬಸವೇಶ್ವರರ ಪವಾಡಗಳು ವರ್ಣನಾತೀತ ಎಂದು ಹರ್ಲಾಪುರದ ಕೊಟ್ಟೂರೇಶ್ವರ ಮಠದ ಅಭಿನವ ಕೊಟ್ಟೂರೇಶ್ವರ ಶ್ರೀಗಳು ಹೇಳಿದರು.</p>.<p>ತಾಲ್ಲೂಕಿನ ಕೊಣ್ಣೂರ ಗ್ರಾಮದಲ್ಲಿ ಚರಮೂರ್ತೇಶ್ವರ ಮಠದ ಶಿವಾನಂದ ದೇವರ ಚರಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಕಲಬುರ್ಗಿ ಶರಣಬಸವೇಶ್ವರರ ಪುರಾಣದ ಮಂಗಳವಾರ ರಾತ್ರಿ ರಾಶಿ ಮಾಡುವ ಹಾಗೂ ಹಂತಿಪದಗಳ ಸಂಭ್ರಮದಲ್ಲಿ ಮಾತನಾಡಿದರು.</p>.<p>ಶರಣಬಸವೇಶ್ವರರ ಪ್ರತಿಯೊಂದು ಪವಾಡವು ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರವಾಗಿದೆ. ಅವರ ಆದರ್ಶಮಯ ಜೀವನ ಎಲ್ಲರೂ ಅರಿಯಬೇಕು. ಕೃಷಿಗೆ, ದಿನಕ್ಕೆ ಶರಣಬಸವೇಶ್ವರರು ನೀಡಿದ ಆದ್ಯತೆ ಎಲ್ಲಿಯೂ ಕಾಣಲಾರೆವು. ಇಂದು ಸದ್ಗತಿ ಹೊಂದಲು ಶರಣರ ಜೀವನ ಚರಿತ್ರೆ ಕೇಳಬೇಕು ಎಂದು ಸಲಹೆ ನೀಡಿದರು.</p>.<h2><strong>ಹಂತಿಪದಗಳ ಸಂಭ್ರಮ:</strong></h2><h4>ಪುರಾಣದ ಸನ್ನಿವೇಶದಲ್ಲಿ ಧಾನ್ಯಗಳನ್ನು ರಾಶಿ ಮಾಡುವುದು ಸಂಭ್ರಮ. ಅದನ್ನು ಪುರಾಣದ ವೇದಿಕೆಯಲ್ಲಿ ಎತ್ತುಗಳನ್ನು ಕರೆತಂದು, ಮೇಟಿ ನಡೆಸಿ ರಾಶಿ ಮಾಡಿ ಭಕ್ತರಿಗೆ ಜೋಳವನ್ನು ಹಂಚಿದ್ದು ವಿಶೇಷವಾಗಿ ಜನಮನ ಸೆಳೆಯಿತು.</h4>.<p>ಈ ಸಂದರ್ಭದಲ್ಲಿ ವಿರಕ್ತಮಠದ ಶಿವಕುಮಾರ ಶಿವಾಚಾರ್ಯರು, ಶಿವಾನಂದ ದೇವರು ಹಾಗೂ ವಿರಕ್ತಮಠದ ಭಕ್ತರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>