<p><strong>ಲಕ್ಷ್ಮೇಶ್ವರ</strong>: ಮಣ್ಣಿನೊಂದಿಗೆ ಮಣ್ಣಾಗಿ ಹಗಲಿರುಳು ದುಡಿದರೂ ಸಹ ರೈತರಿಗೆ ಲಾಭ ಎಂಬುದು ಕನಸಿನ ಗಂಟು. ಎಷ್ಟೇ ಬೆವರು ಸುರಿಸಿ ದುಡಿದರೂ ಕೂಡ ಬೆಳೆದ ಬೆಳೆಗೆ ಉತ್ತಮ ದರ ಸಿಗುತ್ತಿಲ್ಲ ಎಂದು ಟೊಮೆಟೊ ಬೆಳೆಗಾರರು ಅಲವತ್ತುಕೊಂಡಿದ್ದಾರೆ.</p><p>ಸದ್ಯ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿದ್ದು ರೈತರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.</p><p>ತಾಲ್ಲೂಕಿನ ರೈತರು ನೂರಾರು ಹೆಕ್ಟೇರ್ನಲ್ಲಿ ಟೊಮೆಟೊ ಬೆಳೆದಿದ್ದಾರೆ. ಬೇಡಿಕೆ ಕುಸಿದಿರುವ ಕಾರಣ ಬೆಲೆ ನೆಲ ಕಚ್ಚಿದೆ. ಲಕ್ಷ್ಮೇಶ್ವರದ ರೈತ ಅಬ್ದುಲ್ಕರಿಂ ಗೌಸುಸಾಬ್ ಸೂರಣಗಿ ಎರಡೂವರೆ ಎಕರೆಯಲ್ಲಿ ಯೋಗಿ-35 ತಳಿಯ ಟೊಮೆಟೊ<br>ಬೆಳೆದಿದ್ದಾರೆ. ಹಾವೇರಿ ಜಿಲ್ಲೆ ಹಂಸಭಾವಿ ಹತ್ತಿರದ ಫಾರ್ಮ್ನಿಂದ ಒಂದು ರೂಪಾಯಿ ಹತ್ತು ಪೈಸೆಗೆ ಒಂದರಂತೆ ಸಸಿ ಖರೀದಿಸಿ ನಾಟಿ ಮಾಡಿದ್ದರು.<br>ಎಲ್ಲ ಸೇರಿ ಈವರೆಗೆ ₹2.50 ಲಕ್ಷ<br>ಖರ್ಚು ಮಾಡಿದ್ದಾರೆ. ಉತ್ತಮ ಆರೈಕೆ ಹಾಗೂ ವಾತಾವರಣದ ಅನುಕೂಲದಿಂದಾಗಿ ಸಾಕಷ್ಟು ಇಳುವರಿ ಬಂದಿದೆ. ಆದರೆ, ಏಕಾಏಕಿ ಬೆಲೆ ಕುಸಿದಿದೆ.</p><p>ಹಣ್ಣನ್ನು ಕೊಯ್ಲು ಮಾಡಿ ಮಾರಾಟಕ್ಕೆ ತಂದರೂ ಅದರ ಸಾಗಾಟ ವೆಚ್ಚಕ್ಕೂ ಸಮನಾಗುತ್ತಿಲ್ಲ. ಈ ಕಾರಣಕ್ಕಾಗಿ ರೈತ ಸೂರಣಗಿ ಅವರು ಹಣ್ಣನ್ನು ಕೊಯ್ಲು ಮಾಡದೆ ಹೊಲದಲ್ಲಿಯೇ ಬಿಟ್ಟಿದ್ದು ಅದು ಅಲ್ಲಿಯೇ ಹಣ್ಣು ಕೊಳೆಯುತ್ತಿದೆ.</p><p>ಸದ್ಯ ಠೋಕ ಮಾರುಕಟ್ಟೆಯಲ್ಲಿ ಒಂದು ಬಾಕ್ಸ್ ಟೊಮೆಟೊ ಕೇವಲ ₹50ಕ್ಕೆ ಮಾರಾಟ ಆಗುತ್ತಿದೆ. ಬಾಕ್ಸ್ಗೆ ₹500 ಬೆಲೆ ಸಿಕ್ಕರೆ ಮಾತ್ರ ಬೆಳೆಗಾರರಿಗೆ ಲಾಭ ಆಗುತ್ತದೆ. ಆದರೆ ಇದೀಗ ಬೆಲೆ ಕಡಿಮೆ ಆಗಿದ್ದು ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ ಎಂದು ರೈತರು ಕಣ್ಣೀರು ಹಾಕಿದ್ದಾರೆ.</p>.<div><blockquote>ಒಂದು ಎಕರೆಗೆ ಐದಾರು ನೂರು ಬಾಕ್ಸ್ ಇಳುವರಿ ಬಂದರೂ ಬಾಕ್ಸ್ಗೆ ₹500 ಸಿಕ್ಕಿದ್ದರೆ ಎರಡು ಎಕರೆಗೆ ಅಂದಾಜು ₹5 ಲಕ್ಷ ಆದಾಯ ಬರುತ್ತಿತ್ತು. ಆದರೆ ಈಗ ಪೇಟೆಗೆ ತೆಗೆದುಕೊಂಡ ಹೋದ ಖರ್ಚು ಸಹ ಬರುತ್ತಿಲ್ಲ. ಹೀಗಾಗಿ ಟೊಮೆಟೊವನ್ನು ಹೊಲದಲ್ಲಿಯೇ ಬಿಟ್ಟಿದ್ದೇನೆ </blockquote><span class="attribution">ಅಬ್ದುಲ್ಕರೀಂ, ಟೊಮೆಟೊ ಬೆಳೆಗಾರ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಕ್ಷ್ಮೇಶ್ವರ</strong>: ಮಣ್ಣಿನೊಂದಿಗೆ ಮಣ್ಣಾಗಿ ಹಗಲಿರುಳು ದುಡಿದರೂ ಸಹ ರೈತರಿಗೆ ಲಾಭ ಎಂಬುದು ಕನಸಿನ ಗಂಟು. ಎಷ್ಟೇ ಬೆವರು ಸುರಿಸಿ ದುಡಿದರೂ ಕೂಡ ಬೆಳೆದ ಬೆಳೆಗೆ ಉತ್ತಮ ದರ ಸಿಗುತ್ತಿಲ್ಲ ಎಂದು ಟೊಮೆಟೊ ಬೆಳೆಗಾರರು ಅಲವತ್ತುಕೊಂಡಿದ್ದಾರೆ.</p><p>ಸದ್ಯ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿದ್ದು ರೈತರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.</p><p>ತಾಲ್ಲೂಕಿನ ರೈತರು ನೂರಾರು ಹೆಕ್ಟೇರ್ನಲ್ಲಿ ಟೊಮೆಟೊ ಬೆಳೆದಿದ್ದಾರೆ. ಬೇಡಿಕೆ ಕುಸಿದಿರುವ ಕಾರಣ ಬೆಲೆ ನೆಲ ಕಚ್ಚಿದೆ. ಲಕ್ಷ್ಮೇಶ್ವರದ ರೈತ ಅಬ್ದುಲ್ಕರಿಂ ಗೌಸುಸಾಬ್ ಸೂರಣಗಿ ಎರಡೂವರೆ ಎಕರೆಯಲ್ಲಿ ಯೋಗಿ-35 ತಳಿಯ ಟೊಮೆಟೊ<br>ಬೆಳೆದಿದ್ದಾರೆ. ಹಾವೇರಿ ಜಿಲ್ಲೆ ಹಂಸಭಾವಿ ಹತ್ತಿರದ ಫಾರ್ಮ್ನಿಂದ ಒಂದು ರೂಪಾಯಿ ಹತ್ತು ಪೈಸೆಗೆ ಒಂದರಂತೆ ಸಸಿ ಖರೀದಿಸಿ ನಾಟಿ ಮಾಡಿದ್ದರು.<br>ಎಲ್ಲ ಸೇರಿ ಈವರೆಗೆ ₹2.50 ಲಕ್ಷ<br>ಖರ್ಚು ಮಾಡಿದ್ದಾರೆ. ಉತ್ತಮ ಆರೈಕೆ ಹಾಗೂ ವಾತಾವರಣದ ಅನುಕೂಲದಿಂದಾಗಿ ಸಾಕಷ್ಟು ಇಳುವರಿ ಬಂದಿದೆ. ಆದರೆ, ಏಕಾಏಕಿ ಬೆಲೆ ಕುಸಿದಿದೆ.</p><p>ಹಣ್ಣನ್ನು ಕೊಯ್ಲು ಮಾಡಿ ಮಾರಾಟಕ್ಕೆ ತಂದರೂ ಅದರ ಸಾಗಾಟ ವೆಚ್ಚಕ್ಕೂ ಸಮನಾಗುತ್ತಿಲ್ಲ. ಈ ಕಾರಣಕ್ಕಾಗಿ ರೈತ ಸೂರಣಗಿ ಅವರು ಹಣ್ಣನ್ನು ಕೊಯ್ಲು ಮಾಡದೆ ಹೊಲದಲ್ಲಿಯೇ ಬಿಟ್ಟಿದ್ದು ಅದು ಅಲ್ಲಿಯೇ ಹಣ್ಣು ಕೊಳೆಯುತ್ತಿದೆ.</p><p>ಸದ್ಯ ಠೋಕ ಮಾರುಕಟ್ಟೆಯಲ್ಲಿ ಒಂದು ಬಾಕ್ಸ್ ಟೊಮೆಟೊ ಕೇವಲ ₹50ಕ್ಕೆ ಮಾರಾಟ ಆಗುತ್ತಿದೆ. ಬಾಕ್ಸ್ಗೆ ₹500 ಬೆಲೆ ಸಿಕ್ಕರೆ ಮಾತ್ರ ಬೆಳೆಗಾರರಿಗೆ ಲಾಭ ಆಗುತ್ತದೆ. ಆದರೆ ಇದೀಗ ಬೆಲೆ ಕಡಿಮೆ ಆಗಿದ್ದು ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ ಎಂದು ರೈತರು ಕಣ್ಣೀರು ಹಾಕಿದ್ದಾರೆ.</p>.<div><blockquote>ಒಂದು ಎಕರೆಗೆ ಐದಾರು ನೂರು ಬಾಕ್ಸ್ ಇಳುವರಿ ಬಂದರೂ ಬಾಕ್ಸ್ಗೆ ₹500 ಸಿಕ್ಕಿದ್ದರೆ ಎರಡು ಎಕರೆಗೆ ಅಂದಾಜು ₹5 ಲಕ್ಷ ಆದಾಯ ಬರುತ್ತಿತ್ತು. ಆದರೆ ಈಗ ಪೇಟೆಗೆ ತೆಗೆದುಕೊಂಡ ಹೋದ ಖರ್ಚು ಸಹ ಬರುತ್ತಿಲ್ಲ. ಹೀಗಾಗಿ ಟೊಮೆಟೊವನ್ನು ಹೊಲದಲ್ಲಿಯೇ ಬಿಟ್ಟಿದ್ದೇನೆ </blockquote><span class="attribution">ಅಬ್ದುಲ್ಕರೀಂ, ಟೊಮೆಟೊ ಬೆಳೆಗಾರ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>