ಆಸ್ಪತ್ರೆಯಲ್ಲಿರುವ ಮಂಚ, ಹಾಸಿಗೆಗಳು ಕಿತ್ತು ಹೋಗಿವೆ. ಸಿಬ್ಬಂದಿ ಕೊರತೆಯಿಂದ ಸ್ವಚ್ಛತೆಯ ಕೊರತೆ ಯೂ ಇದೆ. ಮಹಿಳೆಯರು, ಪುರುಷರ ಸಾಮಾನ್ಯ ವಾರ್ಡ್ಗಳಲ್ಲಿ ಸೊಳ್ಳೆ ಕಾಟ ವಿಪರೀತಾಗಿದೆ. ಕಟ್ಟಡದ ಗೋಡೆಗಳ ಸುಣ್ಣ ಬಣ್ಣ ಕಳೆಗುಂದಿದೆ. ಆಸ್ಪತ್ರೆಗೆ ಹೆಚ್ಚಿನ ಅನುದಾನ ನೀಡಿದ್ದರೂ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯದೆ ಖಾಸಗಿ ಆಸ್ಪತ್ರೆಗಳ ಮೊರೆಹೋಗಬೇಕಾದ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ಕೆಸ್ತೂರಿನ ರವಿ ಮತ್ತು ನಾಗಣ್ಣ.