ಹೆತ್ತೂರು: ಹೋಬಳಿಯ ಬ್ಯಾಗಡಹಳ್ಳಿ ಗ್ರಾಮದಲ್ಲಿ 12 ಅಡಿ ಉದ್ದದ ಭಾರಿ ಕಾಳಿಂಗ ಸರ್ಪವನ್ನು ಭಾನುವಾರ ಹಿಡಿದು ರಕ್ಷಿತಾರಣ್ಯಕ್ಕೆ ಬಿಡಲಾಯಿತು.
ಪಶ್ಚಿಮಘಟ್ಟ ತಪ್ಪಲಿನ ಗ್ರಾಮದ ರೈತ ಆಕಾಶ ಅವರ ಕಾಫಿ ತೋಟದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅಧಿಕಾರಿಗಳು ಸೋಮವಾರಪೇಟೆ ಉರಗ ಪ್ರೇಮಿ ಸ್ನೇಕ್ ರಘು, ಜಾನಿ ಸುಮಾರು 3 ಗಂಟೆಗೂ ಹೆಚ್ಚು ಕಾರ್ಯಾಚರಣೆ ನಡೆಸಿ ಸುಮಾರು 12 ಅಡ್ಡಿ ಉದ್ದ ಹಾಗೂ 9 ಕೆಜಿ ತೂಕವಿದ್ದ ಕಾಳಿಂಗ ಸರ್ಪವನ್ನು ಹಿಡಿದು ಬಿಸಲೆ ರಕ್ಷಿತಾರಣ್ಯಕ್ಕೆ ಬಿಡಲಾಯಿತು.
ಕಾರ್ಯಾಚರಣೆಯಲ್ಲಿ ಅರಣ್ಯ ರಕ್ಷಕ ನವೀನ್ಕುಮಾರ್, ಸಿಬ್ಬಂದಿ ಆಕಾಶ, ಜೀವನ್, ಅಖಿಲ್, ಅಭಿಷೇಕ ಇದ್ದರು.